Just In
Don't Miss
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Movies ಬಿಸಿಲು, ಮಳೆ, ಧೂಳು ಬರಲಿ.. ಯಶ್ ಇದ್ರೆ ಸಾಕು.. ಏನಂತೀರಾ?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿಯ೦ದು ಆಚರಿಸುವ ನರಕಚತುರ್ದಶಿಯ ಹಿನ್ನೆಲೆ ಏನು?
ಬೆಳಕಿನ ಹಬ್ಬ ದೀಪಾವಳಿಯು ಬ೦ದೇ ಬಿಟ್ಟಿತು. ಉತ್ತರಭಾರತವು ಈ ಸ೦ಭ್ರಮವನ್ನು ಭಗವಾನ್ ಶ್ರೀ ರಾಮಚ೦ದ್ರ ಹಾಗೂ ದೇವಿ ಸೀತಾಮಾತೆಯು ವನವಾಸವನ್ನು ಪೂರೈಸಿ ಅಯೋಧ್ಯಾ ನಗರಿಗೆ ಹಿ೦ತಿರುಗಿ ಬ೦ದುದರ ದ್ಯೋತಕವಾಗಿ ಆಚರಿಸಿದರೆ, ದಕ್ಷಿಣಭಾರತವು ದುಷ್ಟ ನರಕಾಸುರನ ವಿರುದ್ಧ ಭಗವಾನ್ ಶ್ರೀ ಕೃಷ್ಣ ಹಾಗೂ ಆತನ ಸ೦ಗಾತಿಯಾದ ಸತ್ಯಭಾಮೆಯರ ಗೆಲುವಿನ ಸ೦ಭ್ರಮವನ್ನು ಈ ಪರ್ವದಿನದ೦ದು ಆಚರಿಸುತ್ತದೆ. ಬನ್ನಿ ನರಕಾಸುರನ ಕುರಿತ ರೋಚಕ ಕಥೆ ಮುಂದೆ ಓದಿ..
ನರಕಾಸುರನು
ಸಾಮಾನ್ಯವಾಗಿ
ಇತರ
ಎಲ್ಲಾ
ರಾಕ್ಷರು
ಇರುವ೦ತೆ
ಒಬ್ಬ
ಚಾಣಾಕ್ಷನಾದ
ರಾಕ್ಷಸನಾಗಿದ್ದನು.
ತಾನು
ಅಜೇಯನೂ,
ಪರಮ
ಶಕ್ತಿವ೦ತನೂ
ಆಗಿ,
ವಿಶ್ವವಿನಾಶಕ್ಕೆ೦ದು
ಮು೦ದಡಿಯಿಡುವ
ಮೊದಲು
ತನ್ನ
ಆಯುಷ್ಯವನ್ನು
ಗಟ್ಟಿಗೊಳಿಸಿಕೊಳ್ಳುವತ್ತ
ಚಿ೦ತಿಸಿದನು.
ಹಾಗಾಗಿ
ಬ್ರಹ್ಮ
ದೇವನನ್ನು
ಪ್ರಾರ್ಥಿಸಿ,
ನನಗೆ
ಸಾವು
ಬರುವುದಾದರೆ,
ಅದು
ನನ್ನ
ತಾಯಿಯಿ೦ದಲೇ
ಬರುವ೦ತಾಗಲಿ"
ಎ೦ದು
ಪ್ರಾರ್ಥಿಸಿಕೊಳ್ಳುತ್ತಾನೆ.
ಹಾಗೆಯೇ
ಆಗಲಿ
ಎ೦ದು
ಬ್ರಹ್ಮದೇವನು
ಆಶೀರ್ವದಿಸುತ್ತಾನೆ.
ಆದರೆ ಇದರ ಸಂಪೂರ್ಣ ದುರುಪಯೋಗ ಪಡೆದುಕೊಂಡ ನರಕಾಸುರನು ಭೂಮ೦ಡಲದಲ್ಲಿರುವ ಎಲ್ಲಾ ಸಾಮ್ರಾಜ್ಯಗಳನ್ನೂ ಜಯಿಸಿದ ಬಳಿಕ ನರಕಾಸುರನು ದೇವಲೋಕದ ಮೇಲೆ ದಾಳಿಯಿಡುತ್ತಾನೆ. ನರಕಾಸುರನು ದೇವಲೋಕದತ್ತ ದಾ೦ಗುಡಿಯಿಡುತ್ತಿದ್ದ೦ತೆಯೇ ಇ೦ದ್ರ ಹಾಗೂ ಆತನ ಆಸ್ಥಾನದ ದೇವತೆಗಳು ಕಾಲಿಗೆ ಬುದ್ಧಿ ಹೇಳುತ್ತಾರೆ.
ಹೀಗೆ ನರಕಾಸುರನ ಕಾಟ ತಾಳಲಾರದೇ ಸ್ವರ್ಗಲೋಕದ ದೇವತೆಯರು ಅಳುತ್ತಾ ಭಗವಾನ್ ಶ್ರೀ ಕೃಷ್ಣನ ಬಳಿ ತೆರಳುತ್ತಾರೆ, ಎಲ್ಲವನ್ನೂ ಬಲ್ಲವನಾದ ಭಗವಾನ್ ಶ್ರೀ ಕೃಷ್ಣನು ಕೂಡಲೇ ಕಾರ್ಯೋನ್ಮುಖನಾಗುತ್ತಾನೆ. ಶ್ರೀ ಕೃಷ್ಣನು ತನ್ನ ಮಡದಿ ಸತ್ಯಭಾಮಾ ನರಕಾಸುರನ ಸಂಹಾರಕ್ಕೆ ಸಿದ್ಧನಾಗುತ್ತಾನೆ. ಯುದ್ಧ ಭೂಮಿಯಲ್ಲಿ ನರಕಾಸುರನು ಕೃಷ್ಣನ ಆಗಮನವನ್ನು ಕ೦ಡು ಗಹಗಹಿಸಿ ನಗುತ್ತಾ, ನನ್ನ ಸಾವೇನಿದ್ದರೂ ನನ್ನ ಹೆತ್ತ ತಾಯಿಯಿ೦ದಲೇ ಉ೦ಟಾಗಬೇಕೇ ಹೊರತು ಬೇರಾರಿ೦ದಲೂ ಅಲ್ಲ, ಎಂದು ಶ್ರೀ ಕೃಷ್ಣನ ಕಡೆ ಬಾಣದ ಸುರಿಮಳೆ ಗೈಯುತ್ತಾನೆ.
ಅಷ್ಟೇ ಅಲ್ಲದೆ ನರಕಾಸುರನು ತನ್ನ ಪ್ರಬಲ ಅಸ್ತ್ರವಾದ ತಿಶೂಲವನ್ನು ಶ್ರೀ ಕೃಷ್ಣನತ್ತ ಬೀಸಿ ಎಸೆಯುತ್ತಾನೆ. ತ್ರಿಶೂಲವು ಭಗವಾನ್ ಶ್ರೀ ಕೃಷ್ಣನ ಎದೆಗೆ ಬಡಿದಾಗ ಆತನು ಮೂರ್ಛೆತಪ್ಪಿ ಬೀಳುತ್ತಾನೆ. ಅರೆಕ್ಷಣ ನಡೆದ ಘಟನೆಯ ಕುರಿತು ಸತ್ಯಭಾಮೆಯು ತನ್ನನ್ನು ತಾನೇ ನ೦ಬಲಾರದವಳಾಗುತ್ತಾಳೆ. ಕೃಷ್ಣನು ಮೂರ್ಛೆ ತಪ್ಪುವುದೆ೦ದರೇನು ಎ೦ದು ತನಗೆ ತಾನೇ ಪ್ರಶ್ನಿಸಿಕೊಳ್ಳುತ್ತಾ ಸತ್ಯಭಾಮೆಯು ನರಕಾಸುರನತ್ತ ಬಾಣವೊ೦ದನ್ನು ಪ್ರಯೋಗಿಸುತ್ತಾಳೆ. ಅದು ಸರಿಯಾಗಿ ನರಕಾಸುರನ ಎದೆಯನ್ನು ಸೀಳಲಾಗಿ, ಅಸುರನು ಬೊಬ್ಬಿಡುತ್ತಾ ಮೃತನಾಗುತ್ತಾನೆ.
ಉದ್ವಿಗ್ನಗೊ೦ಡ ಸತ್ಯಭಾಮೆಯು ಮೂರ್ಛೆತಪ್ಪಿ ಬಿದ್ದ ಭಗವ೦ತನತ್ತ ತಿರುಗಿ ನೋಡಲು, ಕೃಷ್ಣನು ತು೦ಟನಗೆಯನ್ನು ಬೀರುತ್ತಾ ಎದ್ದು ನಿಲ್ಲುತ್ತಾನೆ. ಆತನು ಈ ಸ೦ದರ್ಭದಲ್ಲಿ ಕೇವಲ ತನ್ನ ಪಾತ್ರವನ್ನು ನಿರ್ವಹಿಸಿರುತ್ತಾನೆ. ದಕ್ಕೆ ಕಾರಣವೇನೆ೦ದರೆ, ಭೂದೇವಿಯು ಸತ್ಯಭಾಮೆಯ ರೂಪದಲ್ಲಿ ಅವತರಿಸಿರುತ್ತಾಳೆ ಹಾಗೂ ನರಕಾಸುರನ ವಧೆಯು ಆಕೆಯ ಅಸ್ತ್ರದಿ೦ದಲೇ ಆಗಬೇಕೆ೦ಬುದು ವಿಧಿಲಿಖಿತವಾಗಿರುತ್ತದೆ.