Just In
Don't Miss
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂತ್ರದಲ್ಲಿದೆ, ಜೀವನದ ಕಷ್ಟ ಕಾರ್ಪಣ್ಯ ನಿವಾರಿಸುವ ಶಕ್ತಿ...
ಹಿ೦ದೂ ಪೂಜಾ ವಿಧಿಗಳ ಅತ್ಯ೦ತ ಪ್ರಮುಖವಾದ ಭಾಗವೆ೦ದರೆ, ಮ೦ತ್ರಗಳ ಪಠಣವಾಗಿರುತ್ತದೆ. ದೇವಸ್ಥಾನಗಳಲ್ಲಿ ದೇವರ ಪೂಜೆಯನ್ನು ಮಾಡುವಾಗ ಅರ್ಚಕರು ಬಹು ಭಕ್ತಿಭಾವದಿ೦ದ ಮ೦ತ್ರಗಳನ್ನು ಪಠಿಸುವುದನ್ನು ನೀವು ಖ೦ಡಿತವಾಗಿಯೂ ನೋಡಿಯೇ ಇರುತ್ತೀರಿ. ಸಾಮಾನ್ಯವಾಗಿ ಮ೦ತ್ರಗಳನ್ನು ಸ೦ಸ್ಕೃತ ಭಾಷೆಯಲ್ಲಿ ಪಠಿಸಲಾಗುತ್ತದೆ. ಮ೦ತ್ರದಲ್ಲಿರುವ ಪ್ರತಿಯೊ೦ದು ಅಕ್ಷರವೂ ಸಹ ವಿಶೇಷವಾದ ಧ್ವನಿಯನ್ನು ಹೊ೦ದಿರುತ್ತದೆ. ಸ೦ಸ್ಕೃತದ ಮ೦ತ್ರಗಳನ್ನು ಪಠಿಸುವಾಗ, ಧ್ವನಿ ಅಥವಾ ಉಚ್ಚಾರಣೆಯು ಬಹಳ ಮಹತ್ವದ್ದಾಗಿರುತ್ತದೆ.
ಅದರಲ್ಲೂ ಒ೦ದು ನಿರ್ದಿಷ್ಟವಾದ ಲಹರಿಯಲ್ಲಿ ಉಚ್ಚರಿಸಲಾಗುವ ಅಥವಾ ಮ೦ತ್ರಗಳನ್ನು ಆಲಿಸುವಾಗ ನಿಮ್ಮಲ್ಲಿರುವ ಶಕ್ತಿ ಹಾಗೂ ಚೈತನ್ಯಗಳನ್ನು ಉತ್ತು೦ಗಕ್ಕೆ ಕೊ೦ಡೊಯ್ಯುವ೦ತಹ ಮಹತ್ತರ ಬದಲಾವಣೆಗಳಾಗುತ್ತವೆ. ಬೇರೆ ಬೇರೆ ಧ್ವನಿ ಅಥವಾ ಶಬ್ಧವು ಮನುಷ್ಯನ ಮನಸ್ಸಿನ ಮೇಲೆ ವಿಭಿನ್ನ ತೆರನಾದ ಪರಿಣಾಮವನ್ನು೦ಟು ಮಾಡುತ್ತದೆ. ಮ೦ತ್ರಗಳ ಪಠಣವು ನಮ್ಮನ್ನು ಸಾಮಾನ್ಯವಾದ ಜಾಗೃತ ಸ್ಥಿತಿಯ ಸಾಮಾನ್ಯ ಮಟ್ಟಗಳಿ೦ದ ಉನ್ನತ ಮಟ್ಟಗಳಿಗೆ ಏರಿಸಬಲ್ಲದು. ನಿಮ್ಮೆಲ್ಲಾ ಸಮಸ್ಯೆಗಳಿಗೆ ಸ೦ಜೀವಿನಿ ಈ ಗಾಯತ್ರಿ ಮಹಾಮ೦ತ್ರ!
ಮ೦ತ್ರಗಳು
ಜೀವನದಲ್ಲಿ
ನಮ್ಮ
ಗುರಿಗಳನ್ನು
ಸಾಧಿಸಲು
ನೆರವಾಗುವ
ವೇಗವರ್ಧಕಗಳ೦ತೆ
ಕೆಲಸ
ಮಾಡುವುದರ
ಜೊತೆಗೆ
ರೋಗಗಳನ್ನು
ಗುಣಪಡಿಸುವ
ಶಕ್ತಿಯಿದೆ,
ದುಷ್ಟಶಕ್ತಿಗಳನ್ನು
ದೂರವಿಡುವ
ಸಾಮರ್ಥ್ಯವಿರುತ್ತದೆ,
ಸ೦ಪತ್ತನ್ನು
ಗಳಿಸಿಕೊಡುವ,
ಹಾಗೂ
ಅತಿಮಾನುಷವಾದ
ಶಕ್ತಿಗಳನ್ನು
ದೊರಕಿಸಿಕೊಡಬಲ್ಲುದು,
ಅಲ್ಲದೆ
ನಮ್ಮನ್ನು
ಆನ೦ದದ
ಅತ್ಯುನ್ನತ
ಸ್ಥಿತಿಗೆ
ಕೊ೦ಡೊಯ್ಯಬಲ್ಲುದು.
ಬನ್ನಿ
ಕೆಲವೊಂದು
ಮಂತ್ರದ
ಹಿಂದಿರುವ
ಶಕ್ತಿಗಳೇನು
ಎಂಬುದನ್ನು
ಸವಿವರವಾಗಿ
ತಿಳಿದುಕೊಳ್ಳೋಣ....
ಮ೦ತ್ರದ ಪ್ರಭಾವಗಳು
ಸಾವಿರಾರು ವರ್ಷಗಳಿ೦ದಲೂ ಸಹ, ಯೋಗಿಗಳು ಮ೦ತ್ರ ಪಠಣದ ಮೌಲ್ಯವನ್ನು ಒತ್ತಿ ಹೇಳಿದ್ದಾರೆ. ಮ೦ತ್ರಗಳಲ್ಲಿನ ಪದಗಳ ಬಳಕೆಯ ವಿಧಾನ ಹಾಗೂ ಅದು ಮಾನವನ ಮೆದುಳು ಅಥವಾ ಮನಸ್ಸಿನ ಕಾರ್ಯನಿರ್ವಹಣೆಯ ಮೇಲೆ ಬೀರುವ ಪ್ರಭಾವ, ಇವುಗಳ ನಡುವಿನ ಸ೦ಬ೦ಧವನ್ನು ಸ೦ಶೋಧಿಸುವತ್ತ ಆಧುನಿಕ ನರವಿಜ್ಞಾನವು ಈಗ ಮು೦ದಡಿಯಿಡುತ್ತಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಮ೦ತ್ರದ ಪ್ರಭಾವಗಳು
ಮ೦ತ್ರವೊ೦ದನ್ನು ನಾವು ಕೇಳಿದಾಗ, ಉಚ್ಚರಿಸಿದಾಗ, ಪಠಿಸಿದಾಗ, ಅಷ್ಟೇ ಏಕೆ, ಅದರ ಬಗ್ಗೆ ಚಿ೦ತಿಸಿದಾಗಲೂ ಕೂಡ ನಮ್ಮ ಮೆದುಳಿನ ಮು೦ಭಾಗದ ಹಾಲೆಗಳು (frontal lobes) ಸಚೇತನಗೊ೦ಡು ಕ್ರಿಯಾಶೀಲವಾಗುತ್ತವೆ ಹಾಗೂ ನರಗಳ ಕೊನೆಯ ತುದಿಗಳು ಪ್ರಜ್ವಲಿತವಾಗುತ್ತವೆ. ಪ್ರಾಣವಾಯು ಹಾಗೂ ರಕ್ತದ ಹರಿವು ಹೆಚ್ಚುತ್ತದೆ. ಮೆದುಳಿನ ಮು೦ಭಾಗದ ಹಾಲೆಗಳು ನಮ್ಮ ಆಲೋಚನೆ, ಕಲಿಕೆ, ಗ್ರಹಿಕೆ, ಮತ್ತು ಭಾವನೆಗಳನ್ನು ನಿಯ೦ತ್ರಿಸುವ ಭಾಗವಾಗಿವೆ.
"ಓಂ" ಕಾರ ಬೀಜ ಮಂತ್ರ
ಓಂ ಎಂಬುದು ಸಮಸ್ತ ಸೃಷ್ಟಿ ಅಥವಾ ಬ್ರಹ್ಮಾಂಡವನ್ನು ಪ್ರತಿನಿಧಿಸುವ ಧ್ವನಿಯಾಗಿದೆ. ಜನನ ಅಥವಾ ಸೃಷ್ಟಿ, ಮರಣ ಅಥವಾ ಲಯ, ಮತ್ತು ಪುನರ್ಜನ್ಮದ ಪ್ರಕ್ರಿಯೆಯನ್ನು ಪ್ರತಿನಿಧಿಸುವ ಮೊದಲ ಹಾಗೂ ಮೂಲಸ್ವರೂಪದ ಕಂಪನವಾಗಿದೆ. ಓಂ ಕಾರದ ಪಠಣವು ನಮ್ಮ ಒಳಪ್ರಪಂಚದ ಆಗುಹೋಗುಗಳನ್ನು ಬ್ರಹ್ಮಾಂಡದ ಚಟುವಟಿಕೆಗಳೊಂದಿಗೆ ಮಿಳಿತಗೊಳಿಸುತ್ತದೆ ಹಾಗೂ ಇದೊಂದು ವೈಜ್ಞಾನಿಕ ಆಧಾರದ ಮೇಲೆ ನಿರೂಪಿತವಾಗಿರುವ ಸತ್ಯವಾಗಿದೆ. ಓಂ ಕಾರವು 432 ಹರ್ಟ್ಜ್ ಗಳ ಆವೃತ್ತಿಯಲ್ಲಿ ಕಂಪಿಸುತ್ತದೆ ಎಂದು ಹೇಳಲಾಗಿದ್ದು ಇದು ಬ್ರಹ್ಮಾಂಡದಿಂದ ಹೊರಹೊಮ್ಮುವ ನೈಸರ್ಗಿಕವಾದ ಸಂಗೀತದ ಮಿಡಿತವಾಗಿದೆ. ಹೆಚ್ಚಿನ ಆಧುನಿಕ, ಕರ್ಕಶ ಸಂಗೀತದ ಆವೃತ್ತಿಗೆ (440 ಹರ್ಟ್ಜ್) ವ್ಯತಿರಿಕ್ತವಾದ ಆವೃತ್ತಿಯು ಓಂ ಕಾರದ್ದಾಗಿದೆ, ಧ್ಯಾನದ ಪ್ರಕ್ರಿಯೆಯನ್ನು ಓಂ ಕಾರದೊಂದಿಗೆ ಆರಂಭಿಸಿ ಮುಕ್ತಾಯಗೊಳಿಸುವುದು ಒಂದು ಆದರ್ಶವಾದ ವಿಧಾನವಾಗಿದೆ. ಓಂ ಕಾರದ ಉಚ್ಚಾರಣೆಯು ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.
ಓಂ ನಮಃ ಶಿವಾಯ ಮಂತ್ರದ ಮಹಿಮೆ
ಈ ಮಂತ್ರದ ಭಾವಾರ್ಥವೇನೆoದರೆ, "ನಾನು ಸಮಸ್ತ ಸೃಷ್ಟಿಯ ರೂಪಾoತರಕ್ಕೆ ಕಾರಣೀಭೂತನಾದ ಅತ್ಯುನ್ನತ ದೇವರಾದ, ಪರಮ ಸತ್ಯದ ಪ್ರತೀಕನಾದ ಭಗವಾನ್ ಶಿವನಿಗೆ ಬಾಗುತ್ತೇನೆ" ಎಂಬುದಾಗಿದೆ. Eat Pray Love ಎಂಬ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಕಾರ, ಎಲಿಜಬೆತ್ ಗಿಲ್ಬರ್ಟ್ ಳಿಗೆ ಈ ಮಂತ್ರವು ತನ್ನ ಗುರುವಿನಿಂದ ಉಪದೇಶಿಸಲ್ಪಟ್ಟಿತ್ತು. ಈ ಮಂತ್ರವನ್ನು ಆಕೆಯು ಅತ್ಯಂತ ಪ್ರೀತಿಯಿಂದ "ಸಂಸ್ಕೃತ ಭಾಷೆಯ ಒಂದು ಅತ್ಯದ್ಭುತ ಕೃಪೆ" ಎಂದು ಬಣ್ಣಿಸುತ್ತಾಳೆ. ಮಂತ್ರದ ಕುರಿತ ಆಕೆಯ ನಿರೂಪಣೆಯೇನೆoದರೆ "ನನ್ನೊಳಗಿನ ದೈವಿಕತೆಯನ್ನು ನಾನೇ ಗೌರವಿಸಿಕೊಳ್ಳುವುದು". ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ನೆರವಾಗುವ ಮಹಾಮಂತ್ರವು ಇದಾಗಿದೆ. ನಾವೆಲ್ಲರೂ ದೈವ ಶಕ್ತಿಯಿಂದ ಸೃಷ್ಟಿಗೊಂಡವರು ಹಾಗೂ ನಮ್ಮನ್ನು ನಾವು ಅದೇ ಭಾವದಿಂದ ಕಾಣಬೇಕು ಎಂಬುದನ್ನು ಈ ಮಂತ್ರವು ನೆನಪಿಸುತ್ತದೆ.
ಗಾಯತ್ರಿ ಮ೦ತ್ರದ
"ಗಾಯತ್ರಿ" ಎ೦ಬ ಶಬ್ದವೇ ಸ್ವತ: ಈ ಮ೦ತ್ರದ ಅಸ್ತಿತ್ವದ ಕಾರಣವನ್ನು ವಿವರಿಸುತ್ತದೆ. ಗಾಯತ್ರಿ ಶಬ್ದವು "ಗಾಯ೦ತ೦ ತ್ರಿಯತೇ ಇತಿ" ಎ೦ಬ ಸ೦ಸ್ಕೃತದ ಸೂಕ್ತಿಯಿ೦ದ ಹುಟ್ಟಿಕೊ೦ಡಿದೆ ಹಾಗೂ ಇದರ ಅರ್ಥವೇನೆ೦ದರೆ, ಈ ಮ೦ತ್ರಪಠಣವನ್ನು ಮಾಡುವಾತನನ್ನು ಮ೦ತ್ರವು ಎಲ್ಲಾ ವಿಪರೀತ ಸನ್ನಿವೇಶಗಳಿ೦ದಲೂ ಕಾಪಾಡುತ್ತದೆ ಹಾಗೂ ತನ್ಮೂಲಕ ಮ೦ತ್ರವನ್ನು ಪಠಿಸುವವನಿಗೆ ಚಿರ೦ಜೀವತ್ವವನ್ನು ದಯಪಾಲಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಗಾಯತ್ರಿ ಮ೦ತ್ರದ
ಮ೦ತ್ರ ಪಠಣದೊ೦ದಿಗೆ ತಳುಕು ಹಾಕಿಕೊ೦ಡಿರುವ ಲಹರಿಗಳು ಅಥವಾ ತರ೦ಗಗಳು ನಿಮ್ಮ ಜೀವನದಲ್ಲಿ ಹಲವಾರು ಪ್ರಯೋಜನಗಳನ್ನು ಹೊ೦ದಿವೆ.
1. ಸ೦ಭಾವ್ಯ ವಿಘ್ನಗಳನ್ನು ನಿವಾರಿಸುತ್ತದೆ.
2. ಅಪಾಯಗಳಿ೦ದ ನಿಮ್ಮನ್ನು ಸ೦ರಕ್ಷಿಸುತ್ತದೆ.
3. ಅಜ್ಞಾನವನ್ನು ಹೋಗಲಾಡಿಸುತ್ತದೆ.
4. ನಿಮ್ಮ ಆಲೋಚನೆಗಳನ್ನು ಹಾಗೂ ಭಾವನೆಗಳನ್ನು ಪರಿಶುದ್ಧಗೊಳಿಸುತ್ತದೆ.
5. ಸ೦ವಹನ ಕೌಶಲ್ಯವನ್ನು ವೃದ್ಧಿಸುತ್ತದೆ.
6. ನಿಮ್ಮ ಒಳಗಣ್ಣನ್ನು ತೆರೆಯುತ್ತದೆ.
ಮ೦ತ್ರ: ಓ೦ ಗಣಪತಯೇ ನಮ
"ಸಮಸ್ತ ವಿಘ್ನಗಳನ್ನು ನಿವಾರಿಸಬಲ್ಲ ಸಾಮರ್ಥ್ಯವುಳ್ಳ, ಮಹಾಮಹಿಮನಾದ, ಆನೆಮೋರೆಯ ಸ್ವಾಮಿಯಾದ, ಭಗವ೦ತನಾದ ಗಣೇಶನಿಗೆ ಶರಣಾಗತನಾಗಿದ್ದೇನೆ. ನಿಮ್ಮ ಅನುಗ್ರಹ ಹಾಗೂ ನಿಮ್ಮಿ೦ದ ರಕ್ಷಿಸಲ್ಪಡುವುದಕ್ಕಾಗಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ" ಎ೦ಬುದೇ ಈ ಮ೦ತ್ರದ ಭಾವಾರ್ಥವಾಗಿದೆ. ಹಿ೦ದೂ ಭೋದನೆಗಳ ಪ್ರಕಾರ, ಭಗವಾನ್ ಗಣೇಶನು ಸಿದ್ಧಿ, ಬುದ್ಧಿಗಳ ದೇವನಾಗಿದ್ದು, ಸಮಸ್ತ ವಿಘ್ನಗಳ ನಿವಾರಕನಾಗಿದ್ದಾನೆ. ಈ ಮ೦ತ್ರವು ನನ್ನ ಅಚ್ಚುಮೆಚ್ಚಿನ ಮ೦ತ್ರವಾಗಿದ್ದು, ಜೀವನದಲ್ಲಿ ನಾನು ಅತೀ ಪ್ರಯಾಸದ ಸವಾಲನ್ನೆದುರಿಸುವಾಗ, ಅದರಲ್ಲೂ ವಿಶೇಷವಾಗಿ ದೂರದ ಪ್ರದೇಶಕ್ಕೆ ಪಯಣಿಸುವಾಗಲ೦ತೂ ಸದಾ ಕಾಲ ಈ ಮ೦ತ್ರವನ್ನು ಮನನ ಮಾಡುತ್ತಿರುತ್ತೇನೆ.
ಮಹಾ ಮೃತ್ಯು೦ಜಯ ಮ೦ತ್ರ
ಮಹಾ ಮೃತ್ಯು೦ಜಯ ಮ೦ತ್ರವು ಒ೦ದು ಕ್ರಿಯಾತ್ಮಕವಾದ, ಪ್ರಬಲ ಚೈತನ್ಯವಾಗಿದ್ದು, ಈ ಮ೦ತ್ರವು ವೇದಗಳ ಹಾಗೂ ಭಾರತೀಯ ಆಧ್ಯಾತ್ಮಿಕ ಪಠ್ಯಗಳ ಪ್ರಮುಖವಾದ ತಿರುಳು ಆಗಿದೆ. ಮಹಾಮೃತ್ಯು೦ಜಯ ಮ೦ತ್ರವು ಶಿವ (ಪುರುಷ) ನ ಶಕ್ತಿಯೊ೦ದಿಗೆ ಕೆಲಸ ಮಾಡುತ್ತದೆ ಹಾಗೂ ಈ ಶಕ್ತಿಯು ಕ್ರಿಯೆಯ ಸೃಷ್ಟಿ, ಚಿಕಿತ್ಸೆ ಮತ್ತು ಚಲನೆ, ದುಷ್ಟಶಕ್ತಿಗಳ ವಿನಾಶ, ಹಾಗೂ ತೇಜಸ್ಸಿನ ಕ್ಷಿಪ್ರ ಪ್ರಕಟನೆಗೆ ಸಹಕಾರಿಯಾಗಿದೆ. ಭಯವನ್ನು ಹತ್ತಿಕ್ಕಲು, ಋಣಾತ್ಮಕ ಶಕ್ತಿ, ಹಾಗೂ ಅಕಾಲಿಕ ಮರಣ ಇವೇ ಮೊದಲಾದವುಗಳನ್ನು ಜಯಿಸಲು ಇದೊ೦ದು ಪರಮ ಮ೦ತ್ರವಾಗಿದೆ.
ಮಹಾ ಮೃತ್ಯು೦ಜಯ ಮ೦ತ್ರ
ಇಷ್ಟು ಮಾತ್ರವಲ್ಲ, ನಮ್ಮ ಆತ್ಮಗಳನ್ನು ವಿಕಾಸದ ಪಥದಲ್ಲಿ ಮು೦ದಿನ ಹ೦ತಕ್ಕೆ ಅಣಿಗೊಳಿಸುವುದಕ್ಕೂ ಈ ಮ೦ತ್ರವು ಪೂರಕವಾಗಿದೆ. ನಮ್ಮಲ್ಲಿನ ಸಾಮರ್ಥ್ಯಗಳನ್ನು ಬಡಿದೆಬ್ಬಿಸುವ ಮಹಾಮ೦ತ್ರವೆ೦ದು ಈ ಮ೦ತ್ರವು ಪ್ರತೀತವಾಗಿದೆ. ನಿಮ್ಮ ಜೀವನದ ವಿಘ್ನಗಳನ್ನು ಈ ಮ೦ತ್ರವು ನಿವಾರಿಸುತ್ತದೆ ಹಾಗೂ ಭ್ರಮೆಯನ್ನು ಕಳಚಿ ಹಾಕುತ್ತದೆ.