Just In
- 2 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 3 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 6 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 8 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News ತುಷ್ಟೀಕರಣ ರಾಜಕೀಯಕ್ಕೆ ಮುಸ್ಲೀಮರಿಗೆ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ: ಬಸವರಾಜ ಬೊಮ್ಮಾಯಿ ಕಿಡಿ
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾಂಡು ಪುತ್ರರ ಮರಣದೊಂದಿಗೆ ಮಹಾಭಾರತದ ಅಂತ್ಯ
ಮಹಾಭಾರತದಲ್ಲಿ ಕೃಷ್ಣನ ನಿಧನದ ನಂತರ ಪಾಂಡವರಿಗೆ ಜೀವನದ ಮೇಲೆ ಆಸಕ್ತಿ ಕಡಿಮೆಯಾಯಿತು. ಯುದಿಷ್ಟಿರ ಮತ್ತು ಪಾಂಡವರು ಎಲ್ಲರೂ ಸ್ವರ್ಗಕ್ಕೆ ಹೋಗಲು ನಿರ್ಧರಿಸಿದರು. ದ್ರೌಪದಿ ಸೇರಿದಂತೆ ಅವರೆಲ್ಲರು ಮತ್ತೆ ಜಿಂಕೆ ಚರ್ಮವನ್ನು ಹಾಗೂ ನಾರು ಮಡಿಯನ್ನು ಪುನಃ ಧರಿಸಿದರು. ಪರೀಕ್ಷಿತನನ್ನು ರಾಜನಾಗಿ ನೇಮಿಸಿದರು. ಕೃಪ ಆತನ ಗುರುವಾಗಿ, ಯುಯುತ್ಸುವು ಆತನ ರಾಜ ಪ್ರತಿನಿಧಿಯಾಗಿ ನೇಮಕಗೊಂಡರು. ನಂತರ ಹಸ್ತಿನಾಪುರದ ಜನರಿಂದ ಬೀಳ್ಕೊಡುಗೆಯನ್ನು ಪಡೆದ ಪಾಂಡವರು ಮತ್ತು ದ್ರೌಪದಿ ತಮ್ಮ ಪ್ರಯಾಣವನ್ನು ಆರಂಭಿಸಿದರು.
ಮೊದಲು ಅವರು ದ್ವಾರಕೆಗೆ ಹೊರಟರು. ಅಲ್ಲಿ ಅವರು ಸಮುದ್ರದಲ್ಲಿ ಮುಳುಗಿದ ದ್ವಾರಕೆಯನ್ನು ನೋಡಿದರು. ಅಲ್ಲಿ ಅಗ್ನಿಯು ಪ್ರತ್ಯಕ್ಷನಾಗಿ ಅರ್ಜುನನಿಗೆ ಹೀಗೆ ಹೇಳಿದನು " ನಿನ್ನ ಗಾಂಢೀವ ತಮ್ಮ ಉದ್ದೇಶವನ್ನು ಪೂರೈಸಿವೆ, ಇವುಗಳನ್ನು ನಾನು ವರುಣ ದೇವನಿಂದ ಪಡೆದಿದ್ದೆ, ಈಗ ಅವುಗಳನ್ನು ಹಿಂದಿರುಗಿಸುವ ಸಮಯ ಬಂದಿದೆ" ಎಂದನು. ನಂತರ ಅರ್ಜುನನು ತನ್ನ ಗಾಂಢೀವಗಳಿಗೆ ಪೂಜೆಯನ್ನು ಸಲ್ಲಿಸಿ, ಅಗ್ನಿಗೆ ಅದನ್ನು ಹಿಂದಿರುಗಿಸಿದನು.
ಹೀಗೆ ಮುಂದೆ ಸಾಗಿದ ಪಾಂಡವರು ಹಿಮವನವನ್ನು ತಲುಪಿದರು. ಮುಂದೆ ಸಾಗುವಾಗ ಕ್ರಮವಾಗಿ ದ್ರೌಪದಿ, ಸಹದೇವ, ನಕುಲ, ಅರ್ಜುನ ಮತ್ತು ಭೀಮ ಕುಸಿದು ಬಿದ್ದು ಸತ್ತರು. ಆದರೆ ಕೇವಲ ಒಂದು ನಾಯಿ ಮಾತ್ರ ಯುಧಿಷ್ಟಿರನ ಜೊತೆಯಲ್ಲಿ ತುತ್ತ ತುದಿಯವರೆಗೆ ತಲುಪಿತು. ಆಗ ಸ್ವತಃ ದೇವೇಂದ್ರನೇ ಯುಧಿಷ್ಟಿರನನ್ನು ಸ್ವರ್ಗಕ್ಕೆ ಕರೆದೊಯ್ಯಲು ಆಗಮಿಸಿದನು. ಯುಧಿಷ್ಟಿರನು ಮಾನವ ಶರೀರದ ಸಮೇತ ಸ್ವರ್ಗಕ್ಕೆ ಹೋಗುವ ವರವನ್ನು ಪಡೆದಿದ್ದನು. ಅವನು ಈ ಮಹಾನ್ ಸಾಧನೆಗೆ ಅರ್ಹನು ಸಹ ಆಗಿದ್ದನು.
ಆಗ ಆ ನಾಯಿಯು ಯುಧಿಷ್ಟಿರನ ತಂದೆಯಾದ ಯಮ ಧರ್ಮನಾಗಿ ರೂಪುಗೊಂಡಿತು. ಸ್ವರ್ಗದ ಆ ಸಭಾ ಭವನದಲ್ಲಿ ಕೃಷ್ಣನು ದೇವಾನು ದೇವತೆಗಳಿಂದ ಸುತ್ತುವರೆದಿರುವುದನ್ನು, ಕರ್ಣನು ದ್ವಾದಶಾದಿತ್ಯರಲ್ಲಿ ಒಬ್ಬನಾಗಿ ಕುಳಿತಿರುವುದನ್ನು, ಭೀಷ್ಮನು ಅಷ್ಟವಸುಗಳಲ್ಲಿ ಒಬ್ಬನಾಗಿರುವುದನ್ನು ಮತ್ತು ತನ್ನ ಪೂರ್ವಜರು ಹಾಗು ಯುದ್ಧದಲ್ಲಿ ಮಡಿದ ಅತಿರಥ- ಮಹಾರಥರು ಅಲ್ಲಿ ನೆಲೆಗೊಂಡಿರುವುದನ್ನು ಯುಧಿಷ್ಟಿರನು ನೋಡಿದನು. ಅವನಿಗೆ ಅಚ್ಚರಿ ಎನ್ನುವಂತೆ ದುರ್ಯೋಧನನು ಸಹ ಅಲ್ಲಿ ಇದ್ದನು. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!
ಆಗ
ನಾರದನು
ಯುಧಿಷ್ಟಿರನಿಗೆ
ಕಾರಣವನ್ನು
ವಿವರಿಸಿದನು.
ದುರ್ಯೋಧನನು
ಎಂದಿಗು
ಹೇಡಿಯಂತೆ
ವರ್ತಿಸಲಿಲ್ಲ.
ಅವನು
ಒಬ್ಬ
ಒಳ್ಳೆಯ
ರಾಜನಾಗಿದ್ದನು.
ಅವನು
ರಣ
ರಂಗದಲ್ಲಿ
ಹೋರಾಡಿ
ವೀರ
ಮರಣವನ್ನು
ಪಡೆದನು.
ಅದರಲ್ಲೂ
ಅವನು
ನಿಧನ
ಹೊಂದಿದ್ದು,
ಶಮಂತಪಂಚಕವೆಂಬ
ಪವಿತ್ರ
ಸ್ಥಳದಲ್ಲಿ.
ಈ
ಎಲ್ಲಾ
ಕಾರಣಗಳಿಂದಾಗಿ
ಅವನು
ಸ್ವರ್ಗಕ್ಕೆ
ಬರುವ
ಅರ್ಹತೆಯನ್ನು
ಸಂಪಾದಿಸಿದನು.
ಆದರೆ
ಯುಧಿಷ್ಟಿರನು
ತನ್ನ
ಜೀವನದಲ್ಲಿ
ಒಂದೇ
ಒಂದು
ಸುಳ್ಳನ್ನು
ಹೇಳಿದ್ದನು.
ಇದರ
ಹೊರತಾಗಿ
ಅವನ
ಜೀವನ
ಪಾಪ
ಮುಕ್ತವಾಗಿತ್ತು.
ಈ
ತಪ್ಪಿಗಾಗಿ
ಅವನನ್ನು
ಸ್ವರ್ಗಕ್ಕೆ
ಕರೆ
ತರುವಾಗ
ನರಕದ
ದಾರಿಯಲ್ಲಿ
ಕರೆ
ತರಲಾಯಿತು.
ಯುಧಿಷ್ಟಿರನ
ತಮ್ಮಂದಿರು
ಮತ್ತು
ಇತರರು
ತಮ್ಮ
ಪಾಪಗಳಿಗಾಗಿ
ಕೆಲವು
ಗಂಟೆಗಳ
ಕಾಲ
ನರಕದಲ್ಲಿ
ಕಳೆದು
ನಂತರ
ಸ್ವರ್ಗಕ್ಕೆ
ಬಂದರು.