Just In
Don't Miss
- Movies ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದೂ ಧರ್ಮದಲ್ಲಿ ಇವರು 'ಕೋಪಿಷ್ಠ ದೇವರು' ಎಂದೇ ಪ್ರಸಿದ್ಧಿ!
ಹಿಂದೂ ಧರ್ಮದಲ್ಲಿ ಕೆಲವು ದೇವರುಗಳು ಶಾಂತ ಮೂರ್ತಿಗಳಾದರೆ ಇನ್ನು ಕೆಲವರು ದೇವರುಗಳಿಗೆ ಕೋಪ ಜಾಸ್ತಿ. ಇಂತಹ ದೇವರುಗಳು ಕೋಪದಲ್ಲಿದ್ದಾಗ ನಿಮ್ಮ ಯಾವುದೇ ಪೂಜೆ, ಪುರಸ್ಕಾರಗಳು, ಭಕ್ತಿಯೂ ನಡೆಯಲ್ಲ...!
ಸಾವಿರಾರು ವರ್ಷಗಳಿಂದಲೂ ಇರುವಂತಹ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತವೆ ಪುರಾಣಗಳು. ಕೆಲವು ದೇವರುಗಳು ಭಕ್ತರ ಭಕ್ತಿಗೆ ಬೇಗನೆ ಒಲಿದರೆ ಇನ್ನು ಕೆಲವು ದೇವರುಗಳನ್ನು ಒಲಿಸಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ಜಗತ್ತಿನ 'ಚಿತ್ತವನ್ನೇ ಕೆದಕುವ' ಹಿಂದೂ ಧರ್ಮದ ಆಚಾರ-ವಿಚಾರ
ಹಿಂದೂ ಧರ್ಮದಲ್ಲಿ ಕೆಲವು ದೇವರುಗಳು ಶಾಂತ ಮೂರ್ತಿಗಳಾದರೆ ಇನ್ನು ಕೆಲವರು ದೇವರುಗಳಿಗೆ ಕೋಪ ಜಾಸ್ತಿ. ಇಂತಹ ದೇವರುಗಳು ಕೋಪದಲ್ಲಿದ್ದಾಗ ನಿಮ್ಮ ಯಾವುದೇ ಪೂಜೆ, ಪುರಸ್ಕಾರಗಳು, ಭಕ್ತಿಯೂ ನಡೆಯಲ್ಲ. ಆದರೆ ಶಾಂತ ಸ್ವರೂಪಕ್ಕೆ ಬಂದಾಗ ನಿಮ್ಮ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾಗುತ್ತದೆ. ಹಿಂದೂ ಧರ್ಮದಲ್ಲಿ ಇರುವಂತಹ ಕೋಪಿಷ್ಠ ದೇವರುಗಳು ಯಾರು ಎಂದು ನಾವು ತಿಳಿದುಕೊಳ್ಳುವ...
ಕಾಳಿಮಾತೆ
ಕಾಳಿಮಾತೆಯನ್ನು ಹಿಂದೂಗಳು ಹೆಚ್ಚಾಗಿ ಪೂಜಿಸುತ್ತಾರೆ. ಕಾಳಿಯು ದುಷ್ಟರನ್ನು ನಾಶ ಮಾಡಿ ಭಕ್ತರಿಗೆ ಸುಖವನ್ನು ನೀಡುತ್ತಾಳೆ. ಈಕೆ ಶಿವನ ಮಡದಿ. ಆಕೆಯನ್ನು ಸಾವಿನ ದೇವತೆಯೆಂದು ಪರಿಗಣಿಸಲಾಗಿದೆ. ಕಾಳಿಯ ಅವತಾರವು ಪ್ರಾಣಿಯೊಂದರ ಚರ್ಮವನ್ನು ಸುತ್ತಿಕೊಂಡು ಕೈಯಲ್ಲಿ ತಲೆಬುರುಡೆಯನ್ನು ಇಟ್ಟುಕೊಂಡಿದ್ದಾಳೆ.
ಕಾಳಿಮಾತೆ
ಜನರ ದುಷ್ಟ ಕೃತ್ಯಗಳಿಂದ ಕೋಪಗೊಳ್ಳುವ ಆಕೆ ಇದನ್ನು ಧ್ವಂಸ ಮಾಡಿಬಿಡುತ್ತಾಳೆ. ಇದರಿಂದಾಗಿ ಡಕಾಯಿತರು ಕಾಳಿಯನ್ನು ಪೂಜಿಸುತ್ತಾರೆ. ಕಾಳಿ ಮಾತೆಯನ್ನು ಪೂಜಿಸಿದರೆ ತಮ್ಮ ದುಷ್ಕೃತ್ಯಗಳನ್ನು ಆಕೆ ಕ್ಷಮಿಸುತ್ತಾಳೆ ಎನ್ನುವ ನಂಬಿಕೆ ಅವರದ್ದಾಗಿದೆ. ಅಘೋರಿಗಳ ಮಹಾನ್ ಶಕ್ತಿಗೆ ಮೂಲ ಕಾಳಿ ಮಾತೆಯೇ?
ಶಿವ
ಒಳ್ಳೆಯ ಪತಿಯಲ್ಲಿರುವ ಮೂರ್ತಿರೂಪವೇ ಶಿವನೆಂದು ಪರಿಗಣಿಸಲಾಗಿದೆ. ಶಿವನನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ. ಆದರೆ ಆತನಿಗೆ ಕೋಪ ಬಂದಾಗ ತಾಂಡವ ನೃತ್ಯ ಮಾಡುತ್ತಾನೆ. ಹಿಂದೂ ಪುರಾಣಗಳ ಪ್ರಕಾರ ಶಿವನಿಗೆ ಹೆಚ್ಚು ಕೋಪ ಬಂದಾಗ ಆತ ತನ್ನ ಮೂರನೇ ಕಣ್ಣನ್ನು ತೆರೆದು ಎಲ್ಲವನ್ನೂ ಧ್ವಂಸ ಮಾಡಿಬಿಡುತ್ತಾನೆ.ಮುಕ್ಕಣ್ಣ ಶಿವನ ಮೂರನೆಯ ಕಣ್ಣಿನ ರೋಚಕ ಕಹಾನಿ...
ದುರ್ಗೆ
ದುರ್ಗೆಯನ್ನು ಹಿಂದೂ ಧರ್ಮದಲ್ಲಿ ಮಾತೆಯೆಂದು ಪೂಜಿಸಲಾಗುತ್ತದೆ. ಮಹಿಷಾಸುರನನ್ನು ಕೊಂದಿರುವ ಕಾರಣದಿಂದಾಗಿ ಆಕೆಯನ್ನು ಮಹಿಷಾಸುರ ಮರ್ದಿನಿ ಎಂದು ಕರೆಯಲಾಗುತ್ತದೆ. ದುರ್ಗೆ ಶಕ್ತಿಯ ಸಂಕೇತ. ಹತ್ತು ಕೈಗಳು ಇರುವಂತಹ ದುರ್ಗೆಯ ಪ್ರತಿಯೊಂದು ಕೈಯಲ್ಲಿ ಒಂದೊಂದು ರೀತಿಯ ಆಯುಧಗಳಿವೆ. ಮಹಿಳೆಯ ಶಕ್ತಿ ಮತ್ತು ಕ್ರೋಧವನ್ನು ದುರ್ಗೆಯೆಂದು ಪರಿಗಣಿಸಲಾಗಿದೆ.
ಶನಿ ದೇವರು
ಅತ್ಯಂತ ವೇಗವಾಗಿ ಕೋಪಗೊಳ್ಳುವ ದೇವರೆಂದರೆ ಅದು ಶನಿ ದೇವರು. ಇದರಿಂದಾಗಿ ಪ್ರತಿಯೊಬ್ಬರೂ ಶನಿದೇವರನ್ನು ಪೂಜಿಸಿ ಆಶೀರ್ವಾದ ಪಡೆಯಲು ಬಯಸುತ್ತಾರೆ. ಶನಿದೇವರ ಕೋಪಕ್ಕೆ ತುತ್ತಾಗಲು ಯಾರು ಬಯಸುವುದಿಲ್ಲ. ಶನಿ ದೇವರು ಆಶೀರ್ವದಿಸಿದರೆ ಅವರು ಹೆಚ್ಚಿನ ಸುಖವನ್ನು ಪಡೆಯುತ್ತಾರೆ. ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?
ಶನಿ ದೇವರು
ಇದೇ ವೇಳೆ ಅವರ ಮೇಲೆ ಶನಿ ದೇವರು ಕೋಪಗೊಂಡರೆ ಎಲ್ಲವೂ ನಿರ್ನಾಮವಾಗುತ್ತದೆ. ಶನಿ ದೇವರನ್ನು ಕಡುನೀಲಿ ಬಣ್ಣವೆಂದು ಹೇಳಲಾಗುತ್ತದೆ. ಪ್ರತಿಯೊಂದು ಜ್ಯೋತಿಷ್ಯಶಾಸ್ತ್ರದ ಮೇಲೆ ಶನಿ ದೇವರ ಪ್ರಭಾವವಿರುತ್ತದೆ.