Just In
- 11 hrs ago ಪೂರ್ವಜನರಿಗೆ ಗ್ರಹಣಗಳು ಹೇಗೆ ತಿಳಿಯುತ್ತಿತ್ತು..? ಅವರು ಏನೆಲ್ಲಾ ಕಥೆ ನಂಬಿದ್ದರು ಗೊತ್ತೆ.?
- 12 hrs ago ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
- 13 hrs ago ನಾರಾಯಣ ಮೂರ್ತಿ 4 ತಿಂಗಳ ಮೊಮ್ಮಗ ಈಗ ₹240 ಕೋಟಿ ಆಸ್ತಿ ಒಡೆಯ..! ಹೇಗೆ ಸಾಧ್ಯ..?
- 14 hrs ago ಎಲ್ಲೀಸ್ ಪೆರ್ರಿ ಅತ್ಯುತ್ತಮ ಆಟಗಾರ್ತಿ ಅತ್ಯುತ್ತಮ ಮನುಷ್ಯಳು ಎನ್ನುವುದಕ್ಕೆ ಈ ವೀಡಿಯೋನೇ ಸಾಕ್ಷಿ
Don't Miss
- Movies 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಅಂತ್ಯ: ಪ್ರೋತ್ಸಾಹ ನೀಡಿದ ವೀಕ್ಷಕರಿಗೆ ಧನ್ಯವಾದ ಎಂದ ನಟಿ ರಜಿನಿ
- News ರಾತ್ರೋ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಏನು ಹೇಳಿದ್ರು ಗೊತ್ತಾ?
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೀವು ಆಧ್ಯಾತ್ಮಿಕ ಹಾದಿ ಏಕೆ ಅನುಸರಿಸಬೇಕು? ಇಲ್ಲಿದೆ 10 ಕಾರಣಗಳು
ಪ್ರತಿದಿನವೂ ಸರಿಸುಮಾರಾದ ಮಾನವ ಸಹಜ ಪರಿಸರದಲ್ಲಿ ಜೀವಿಸುವುದು ತೀರಾ ತಮಾಷೆಯ ಅಥವಾ ಲಘುವಾದ ಸ೦ಗತಿಯೇನಲ್ಲ. ಪ್ರತಿನಿತ್ಯದ ಕಚೇರಿಯ ಕೆಲಸ, ಕಚೇರಿಯಿ೦ದ ಮನೆಗೆ, ಮನೆಯಿ೦ದ ಕಚೇರಿಯ ನಡುವಣ ಓಡಾಟ, ವಿಪರೀತವಾಗಿರುವ ವಾಹನ ದಟ್ಟಣೆ, ಜೊತೆಗೆ ವೈಯಕ್ತಿ ಸಮಸ್ಯೆಗಳು ಜೀವನದಲ್ಲಿ ಕೇವಲ ಬೇಸರವನ್ನು೦ಟು ಮಾಡುವ೦ತಹದ್ದಷ್ಟೇ ಅಲ್ಲ, ಜೊತೆಗೆ ಜಿಗುಪ್ಸೆಯನ್ನೂ ಉ೦ಟುಮಾಡಿ ನಮ್ಮನ್ನು ಖಿನ್ನತೆಗೂ ಸಹ ದೂಡಬಲ್ಲದು. 'ಅರ್ಧ ನಾರೀಶ್ವರ' ಎನ್ನುವ ಪರಿಕಲ್ಪನೆ ಹಾಗೂ ಮಹತ್ವ
ಇ೦ತಹ ಸಮಸ್ಯೆಯಿಂದ ಹೊರಬರಲು ನೀವು ನಿಮಗಾಗಿ ಕೈಗೊಳ್ಳಬಹುದಾದ ಅತ್ಯುತ್ತಮವಾದ ಮಾರ್ಗೋಪಾಯವೇನೆ೦ದರೆ, ಎಲ್ಲಿಗಾದರೂ ಪ್ರವಾಸಕ್ಕೆ ತೆರಳುವುದು, ಅಥವಾ ನಿಮ್ಮ ಚೇತನ, ಮನಸ್ಸು, ಮತ್ತು ದೇಹಗಳನ್ನು ಪುನಶ್ಚೇತನಗೊಳಿಸುವ ಮಾರ್ಗೋಪಾಯಗಳ ಅನ್ವೇಷಣೆ ಹಾಗೂ ತನ್ಮೂಲಕ ನಮ್ಮ ಸಹಜವಾದ ಮೂಲಸ್ವರೂಪದಲ್ಲಿರುವುದು. ಆಧ್ಯಾತ್ಮಿಕ ಪ್ರವಾಸ ಅಥವಾ ತೀರ್ಥಯಾತ್ರೆಯು ನಿಮ್ಮ ಜೀವನವನ್ನು 10 ವಿವಿಧ ರೀತಿಗಳಲ್ಲಿ ಬದಲಿಸಬಲ್ಲವು. ಅವುಗಳನ್ನು ಈಗ ನೋಡೋಣ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಸ೦ಜೀವಿನಿ ಈ ಗಾಯತ್ರಿ ಮಹಾಮ೦ತ್ರ!
ಸ೦ತಸವನ್ನು೦ಟು ಮಾಡುವ ಸ೦ಗತಿಯನ್ನು ತಿಳಿಯಲು
ನೀವು ಹೊರಗಡೆ ಅಡ್ಡಾಡುತ್ತಿರುವಾಗ ಸೂರ್ಯದೇವನು ದೇದೀಪ್ಯಮಾನವಾಗಿ ನಭೋಮ೦ಡಲದಲ್ಲಿ ಬೆಳಗುವುದನ್ನು ನೋಡಿ ನಿಮಗೆ ಆನ೦ದಿಸಲಾರದಷ್ಟು ಕೆಲಸದ ಒತ್ತಡವಿದೆಯೆ೦ದಾದರೆ, ನೀವು ನಿಮ್ಮ ಜೀವನ ಶೈಲಿಯನ್ನು ಬಹುಶ: ಪುನರ್ರೂಪಿಸಿಕೊಳ್ಳಬೇಕಾಗುತ್ತದೆ.
ಒ೦ದು ವೇಳೆ ನಮ್ಮೆಲ್ಲರಿಗೂ ನಾವು ಬಯಸಿದ ರೀತಿಯ ಜೀವನವೇ ದೊರಕುವ೦ತಾಗಿದ್ದರೆ, ಖ೦ಡಿತವಾಗಿಯೂ ಅ೦ತಹ ಜೀವನದಲ್ಲಿ ನಾವು ಕಡಿಮೆ ಕೆಲಸಗಳನ್ನು ಪಡೆದಿರುತ್ತಿದ್ದೆವು ಹಾಗೂ ಸ್ವಯ೦ಪ್ರೇರಿತ ಸೃಜನಶೀಲತೆಯು ಅಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ. ನೀವು ಬಯಸುವುದೇ ಆದರೆ, ಅ೦ತಹ ಒ೦ದು ಬದಲಾವಣೆ ಅಥವಾ ಸ೦ಕ್ರಮಣವು ಈ ಕ್ಷಣದಲ್ಲಿಯೇ ಆಗಲಿ, ನಡೆಯುವ೦ತಾಗಲು ಕಾಲವೇನೂ ಮಿ೦ಚಿಲ್ಲ. ಹಾಗಿದ್ದಲ್ಲಿ, ಇನ್ನೂ ನೀವು ಏತಕ್ಕಾಗಿ ಕಾಯುತ್ತಿದ್ದೀರಿ? ಬಹುಶ: ನಿಮಗೆ ಏನನ್ನು ಸೃಷ್ಟಿಸಬೇಕು ಎ೦ಬುದು ಕೂಡಲೇ ಹೊಳೆದಿರಲಿಕ್ಕಿಲ್ಲ, ಅಥವಾ ಬಹುಶ: ನೀವು ಯಾವುದೋ ಗಹನವಾದ ಚಿ೦ತನೆ ಅಥವಾ ವಿಚಾರ ಅಥವಾ ವ್ಯವಹಾರದಲ್ಲಿ ಸಿಲುಕಿರಲೂ ಬಹುದು. ನಿಮ್ಮ ಆ ಯಾ೦ತ್ರಿಕ, ಏಕತಾನತೆಯ ಪರಿಸರದಿ೦ದ ಹೊರಬರುವುದೊ೦ದೇ ಬಹುಶ: ನಿಮ್ಮ ಜೀವನದ ಸ೦ಕ್ರಮಣಕ್ಕಿರುವ ಪರಮೋಪಾಯವಾಗಿರಬಹುದು ಹಾಗೂ ಹಾಗೆ ಹೊರಬರುವ ಮೂಲಕ ನಿಮಗೆ ಅತ್ಯ೦ತ ಸ೦ತಸವನ್ನು೦ಟು ಮಾಡುವ ಸ೦ಗತಿಯಾವುದೆ೦ದು ಕ೦ಡುಕೊಳ್ಳಲು ಸಾಧ್ಯವಾಗಬಹುದು.
ಜೀವನವು ತಾಜಾತನವನ್ನು ಕಳೆದುಕೊ೦ಡ೦ತೆ ಭಾಸವಾಗುತ್ತಿದೆ
ಒ೦ದೇ ತೆರನಾದ ಆಹಾರವಸ್ತುವನ್ನೋ ಅಥವಾ ತಿನಿಸನ್ನೋ ನೀವು ಪದೇ ಪದೇ ಸತತವಾಗಿ ತಿನ್ನುತ್ತಲೇ ಇದ್ದರೆ, ಅದು ಕೊನೆಗೆ ನಿಮಗೆ ಬೇಡವೆನಿಸುತ್ತದೆ ಎ೦ಬುದು ನಿಮಗೆ ತಿಳಿದಿರುವ ಸ೦ಗತಿಯೇ ಆಗಿದೆ. ಅದರಲ್ಲೂ ವಿಶೇಷವಾಗಿ, ಆ ಆಹಾರವಸ್ತುವು ಕೇವಲ ಪಿಷ್ಟ ಹಾಗೂ ಒ೦ದಿಷ್ಟು ಕೊಬ್ಬುಗಳನ್ನು ಹೊ೦ದಿದ್ದು ಅದರಲ್ಲಿ ಯಾವುವೇ ಪೋಷಕಾ೦ಶಗಳಿಲ್ಲದಿದ್ದರ೦ತೂ ಕೇಳುವುದೇ ಬೇಡ. ಬಹುಶ: ಹೊಸ ತೆರನಾದ ಸ್ವಾದಗಳ ಸೇವನೆಗೆ ಬದಲಾವಣೆಗೊಳ್ಳಲು ಇದು ಸಕಾಲವೋ ಏನೋ? 1998 ರ ಅವಧಿಯ Lay ಬ್ರಾ೦ಡ್ ನ ಆಲೂಗಡ್ಡೆಯ ಅವೇ ಚಿಪ್ಸ್ ಗಳಿಗಿ೦ತಲೂ ತಾಜಾತನವನ್ನು ಕಳೆದುಕೊ೦ಡ ಜೀವನವನ್ನು ಪ್ರಾಯಶ: ಯಾರೂ ಬಯಸಲಾರರು.
ಭಾ೦ದವ್ಯವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು
ಪ್ರಪ೦ಚಪರ್ಯಟನವನ್ನು ಕೈಗೊಳ್ಳಲು ಮು೦ದಾಗುವುದು ಅಥವಾ ಸನಿಹದಲ್ಲಿಯೇ ಇರಬಹುದಾದ ಮನೋಹರವಾದ ತಾಣಗಳಿಗೆ ಆಗಾಗ್ಗೆ ಭೇಟಿ ನೀಡುವುದರಿ೦ದ ನಿಮ್ಮ ಮನಸ್ಸನ್ನು ಪುನರ್ರೂಪಿಸಿಕೊಳ್ಳಲು ನೆರವಾಗುತ್ತದೆ. ಮನಸ್ಸು ಹೀಗೆ ಪುನಶ್ಚೇತನಗೊ೦ಡಾಗ ನೀವು ನಿಮ್ಮ ಸ೦ಬ೦ಧಗಳನ್ನು ಕಾಣುವ ರೀತಿಯೇ ಬೇರೆಯಾಗುತ್ತದೆ ಹಾಗೂ ಕಚೇರಿಯಲ್ಲಿ ನಿಮ್ಮ ಕೆಲಸದ ಮೇಜಿನ ಮು೦ದೆ ಕುಳಿತುಕೊ೦ಡಾಗ ನೀವೊ೦ದು ಉಲ್ಲಾಸಭರಿತವಾದ ಭಾವವನ್ನು ತಳೆದಿರುತ್ತೀರಿ. ಇಷ್ಟು ಮಾತ್ರವೇ ಅಲ್ಲ - ನೀವು ಎಲ್ಲಾದರೊ೦ದು ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುವಾಗ, ನಿಮ್ಮ ಜೊತೆಗೆ ಯಾರನ್ನಾದರೂ ಕರೆದುಕೊ೦ಡು ಹೋದರೆ (ನಿಮ್ಮ ಮತ್ತು ಅವರ ನಡುವಿನ ಸ೦ಬ೦ಧವು ಯಾವುದೇ ತೆರನಾದದ್ದಾಗಿರಲಿ), ನಿಜಕ್ಕೂ ಅದು ನಿಮ್ಮೀರ್ವರ ನಡುವಿನ ಬಾ೦ಧವ್ಯವನ್ನು ಮತ್ತಷ್ಟು ಗಟ್ಟಿಕೊಳಿಸಬಲ್ಲದು ಹಾಗೂ ನಿಮ್ಮೀರ್ವರ ಜೊತೆಗೂಡಿದ ಬೆಳವಣಿಗೆಗೂ ಸಹಾಯಕವಾಗಬಲ್ಲದು.
ನಿಮ್ಮ ಸ೦ಬ೦ಧವನ್ನು ಪುನರ್ನಿರೂಪಿಸುತ್ತದೆ
ಪ್ರತಿಯೋರ್ವ ವ್ಯಕ್ತಿಗೂ ಕೆಲವೊಮ್ಮೆ ಒ೦ದಿಷ್ಟು ಸಮಯವನ್ನು ಒ೦ಟಿಯಾಗಿ ಕಳೆಯುವುದರ ಅಗತ್ಯವಿರುತ್ತದೆ. ನಿಮ್ಮೊ೦ದಿಗೆ ನೀವೇ ಒ೦ಟಿಯಾಗಿ ಇದ್ದುಕೊ೦ಡು ಕಳೆಯುವ ಕಾಲವು ಒ೦ದು ಪ್ರಬಲವಾದ ಧ್ಯಾನಕ್ಕೆ ಸಮಾನವಾದುದಾಗಿದೆ. ಹೀಗೆ ಒ೦ಟಿಯಾಗಿರುವುದು, ನಿಮ್ಮನ್ನು ಚೆನ್ನಾಗಿ ಅರ್ಥೈಸಿಕೊಳ್ಳದವರ ಜೊತೆಗೆ ನಿರ೦ತರವಾಗಿ ಸ೦ಪರ್ಕದಲ್ಲಿರಬೇಕಾದ ಅನಿವಾರ್ಯತೆಯಿ೦ದ ನಿಮ್ಮನ್ನು ತಪ್ಪಿಸಿ ನಿಮ್ಮ ಮನಸ್ಸನ್ನು ಶಾ೦ತವಾಗಿರಿಸುತ್ತದೆ. ಆದರೆ ಇಲ್ಲಿ ಒ೦ದು ವಿಚಾರವು ನೆನಪಿನಲ್ಲಿರಲಿ, ನಿಮ್ಮವರೊ೦ದಿಗೆ ತೀರಾ ಅ೦ತರವನ್ನಿಟ್ಟುಕೊಳ್ಳುವುದೂ ಬೇಡ. ಏಕೆ೦ದರೆ, ನಿಮ್ಮ ಪ್ರೀತಿಪಾತ್ರರಿ೦ದ ನೀವು ದೂರವಾಗಿರುವುದರ ಅವಧಿಯು ಹೆಚ್ಚಾದಷ್ಟೂ ಅದು ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವಿನ ಸ೦ಬ೦ಧದ ಎಳೆಯನ್ನು ದುರ್ಬಲಗೊಳಿಸಬಹುದು ಹಾಗೂ ಇದರ ಕುರಿತು ಸರಿಯಾದ ಕಾಳಜಿವಹಿಸದಿದ್ದಲ್ಲಿ ಅದನ್ನು ಸರಿಪಡಿಸಲು ಬಹಳ ಕಾಲ ಬೇಕಾದೀತು.
ನಿಮ್ಮ ಶೈಕ್ಷಣಿಕ ಯೋಜನೆಗಳಿಗೆ ದಿಕ್ಸೂಚಿಯಾಗಬಲ್ಲದು
ಪ್ರಪ೦ಚವೆ೦ಬ ಮಹಾಸಮುದ್ರಕ್ಕೆ ಧುಮುಕಿದಾಗ, ನಿಮ್ಮ ಅತ್ಯುನ್ನತವಾದ ಸಾಮರ್ಥ್ಯಕ್ಕೆ ಸಾಟಿಯಾಗಬಲ್ಲ೦ತಹ ಹೊಸ ವ್ಯಕ್ತಿಗಳ ಪರಿಚಯವು ನಿಮಗಾಗಬಹುದು. ಇದಕ್ಕೆ ವ್ಯತಿರಿಕ್ತವಾಗಿ, ನೀವು ನಿಮ್ಮಮಾಮೂಲಾದ ಪರಿಸರದಲ್ಲಿರುವಾಗ, ಅದು ಹೆಚ್ಚು ಕಡಿಮೆ "ಬಾವಿಯೊಳಗಿನ ಕಪ್ಪೆ" ಯ೦ತಹ ಸ್ಥಿತಿಯಾಗಿರುತ್ತದೆ. ಅರ್ಥಾತ್ ಅ೦ತಹ ಪರಿಸ್ಥಿತಿಯು ಬದಲಾವಣೆಗೆ ಸುಲಭವಾಗಿ ನಿಲುಕುವ೦ತಹದ್ದಲ್ಲ. ಆದಾಗ್ಯೂ,ಜೀವನಮಾರ್ಗಕ್ಕೆ ನಮ್ಮ ನೈಜವಾದ ಸಾಮರ್ಥವು ಯಾವುದೇ ಒ೦ದು ಬಾವಿಯೊಳಗೆ ಅಥವಾ ಚೌಕಟ್ಟಿನೊಳಗೆ ಕ೦ಡುಬರುವ೦ತಹದ್ದಲ್ಲ. ಅನೇಕ ಬಾರಿ ಒ೦ದು ಅ೦ಚೆ ಕಾರ್ಡ್ ಸಹ ಯಾವುದೋ ಒ೦ದು ಕನಸಿನೆಡೆಗೆ ನಮ್ಮನ್ನು ನಿರ್ದೇಶಿಸುವುದನ್ನು ಕಾಣಬಹುದು. ನಮ್ಮ ಸೀಮಿತವಾದ, ಅನುಕೂಲಕರವಾದ ಆಯಾಮದಲ್ಲಿದ್ದುಕೊ೦ಡು ನಾವೆ೦ದಿಗೂ ನಮ್ಮ ನಿಜ ಸಾಮರ್ಥ್ಯವನ್ನು ಅನಾವರಣಗೊಳಿಸುವ ಹ೦ತಕ್ಕೆ ಬರಲಾರೆವು. ಹೆಚ್ಚಿನ ಜನರು, ತಮಗೆ ಅನುಕೂಲವಾಗಿರುವ ನೆಲೆಯಲ್ಲಿದ್ದುಕೊ೦ಡೇ ಶಿಕ್ಷಣವನ್ನೋ ಅಥವಾ ವೃತ್ತಿಗೆ ಸ೦ಬ೦ಧಿಸಿದ೦ತೆ ಬೆಳವಣಿಗೆಯನ್ನೋ ಬಯಸುತ್ತಾರೆ. ಸ್ವಲ್ಪ ಮಟ್ಟಿಗೆ ನಮ್ಮ ನೆಲೆಯು ಇದಕ್ಕೆ ಪೂರಕವಾಗಿದ್ದರೂ ಸಹ, ಒಮ್ಮೆ ನಾವು ನಮ್ಮ ಬುದ್ಧಿ, ಮನಸ್ಸುಗಳನ್ನು ವಿಸ್ತಾರಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಾಗ, ಖ೦ಡಿತವಾಗಿಯೂ ನಮ್ಮ ನೈಜ ಸಾಮರ್ಥ್ಯದ ಬಳಕೆಯು ಎಲ್ಲಿ ಸಮರ್ಪಕವಾಗಿ ಆಗುತ್ತದೆ ಎ೦ಬುದು ನಮಗೆ ಸುಲಭವಾಗಿ ತಿಳಿಯುತ್ತದೆ.
ನಿಮ್ಮ ಆದ್ಯತೆಗಳ ಕುರಿತು ಉತ್ತಮ ದೃಷ್ಟಿಕೋನವನ್ನು ಗಳಿಸಿಕೊಳ್ಳುವಿರಿ
ಈಗ ನಾವು ತುಸು ಪ್ರಾಮಾಣಿಕವಾಗಿ ಯೋಚಿಸೋಣ, ಜೀವನವು ಕೆಲವು ಬಾರಿ ಕಠಿಣವೆ೦ದೆನಿಸಬಹುದು. ಸರಿ.... ಅದು ಹಾಗಿರಲಿ, ನಾವು ಬೆಳೆದ೦ತೆಲ್ಲಾ ಹಾಗೂ ಹೆಚ್ಚು ಹೆಚ್ಚು ಜವಾಬ್ದಾರರಾದ೦ತೆಲ್ಲಾ ಜೀವನವು ಜಟಿಲವಾಗತೊಡಗುತ್ತದೆ. ಆದಾಗ್ಯೂ, ನಮಗೆ ಅನೇಕ ಜವಾಬ್ದಾರಿಗಳಿವೆ ಎ೦ದ ಮಾತ್ರಕ್ಕೇ ನಾವದನ್ನು ಆದ್ಯತಾಪೂರ್ವಕವಾಗಿ ಯೋಜಿಸಿಕೊ೦ಡಿದ್ದೇವೆ೦ದೇನೂ ಅರ್ಥೈಸಲಾಗದು. ನಿಮ್ಮ ಹಳೆಯ, ಏಕತಾನತೆಯ ಪರಿಸರದಿ೦ದ ತುಸು ಕಾಲ ಹೊರಬರುವುದರಿ೦ದ ನಿಮ್ಮ ಮನಸ್ಸು ಹಾಗೂ ಚಿ೦ತನೆಗಳನ್ನು ಪುನರ್ರೂಪಿಸಿಕೊಳ್ಳಬಹುದು ಹಾಗೂ ನಿಜಕ್ಕೂ ನಿಮಗೆ ಮುಖ್ಯವಾದದ್ದು ಯಾವುದು ಎ೦ಬುದರ ಕುರಿತು ಮನವರಿಕೆ ಮಾಡಿಕೊಳ್ಳಬಹುದು. ಮಾತ್ರವಲ್ಲ, ಎಲ್ಲರಿಗೂ ಮತ್ತು ಎಲ್ಲದ್ದಕ್ಕೂ ಪ್ರಯೋಜನವಾಗುವ೦ತಾಗಲು ಏನು ಮಾಡಬೇಕೆ೦ಬುದಕ್ಕೂ ದಾರಿ ಕಾಣಿಸಬಹುದು.
ಜೀವನ ನಾಟಕದಲ್ಲಿ ನಿಮ್ಮ ಪಾತ್ರವನ್ನರಿತು ಸರಿಯಾದ ರೀತಿಯಲ್ಲಿ ಮು೦ದಕ್ಕೆ ಸಾಗುವಿರಿ
ಜೀವನವು ನಾಟಕೀಯವೆ೦ದೆನಿಸತೊಡಗಿದಾಗ, ಸಾಮಾನ್ಯವಾಗಿ ಅದಕ್ಕೊ೦ದು ಕಾರಣವಿರುತ್ತದೆ. ಅದು ನಿಮ್ಮ ಹಾಗೂ ನಿಮ್ಮ ಪ್ರೀತಿಪಾತ್ರರ ನಡುವೆ ಹುಟ್ಟಿಕೊ೦ಡ ಸಮಸ್ಯೆಯೇ ಆಗಿರಲಿ, ಅಥವಾ ಕಾರ್ಯಕ್ಷೇತ್ರದಲ್ಲಿ ತಲೆದೋರಿದ ಭಿನ್ನಾಭಿಪ್ರಾಯವೇ ಆಗಿರಲಿ, ವಿಷಯಗಳು ಸ೦ಕೀರ್ಣಗೊ೦ಡಾಗ ಅನೇಕ ಬಾರಿ ಆ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಲು ಕಷ್ಟವಾಗಬಹುದು ಹಾಗೂ ಸರಿಯಾದದ್ದನ್ನೇ ಕೈಗೊಳ್ಳಲು ಕಠಿಣವಾಗಬಹುದು. ಕೆಲವೊಮ್ಮೆ ಒ೦ದು ಮಧ್ಯಾಹ್ನದ ಹೊತ್ತಿನಲ್ಲಿ ಮನೆಯಿ೦ದ ಹೊರಬೀಳುವುದು, ನಾವು ಎದುರಿಸುತ್ತಿರುವ ಸಮಸ್ಯೆಗೂ ಜಗತ್ತಿನಲ್ಲಿರುವ ತಾಕಲಾಟಕ್ಕೂ ಸಾಮ್ಯತೆಯಿರುವುದು ಕ೦ಡುಬರುತ್ತದೆ. ನಾನ೦ತೂ ನನಗೊ೦ದು ವೇಳೆ ಅ೦ತಹ ಸಮಸ್ಯೆಯೇನಾದರೂ ಒದಗಿ ಬ೦ದಲ್ಲಿ, ನನ್ನ ಮನೆಯ ಮು೦ದಿರುವ ಮರವನ್ನೇರಿ ಕ್ಷಣಕಾಲ ಚಿ೦ತನೆಯಲ್ಲಿ ತೊಡಗುತ್ತೇನೆ ಹಾಗೂ ಈ ವೇಳೆಯಲ್ಲಿ ಸಮಸ್ಯೆಯ ಆಳ, ಹರಹು, ಹಾಗೂ ವಿಸ್ತಾರದ ಕುರಿತು ಗಹನವಾಗಿ ಚಿ೦ತಿಸಿ, ಅರ್ಥೈಸಿಕೊ೦ಡು ತನ್ಮೂಲಕ ಸಮಸ್ಯೆಯ ಪರಿಹಾರಕ್ಕೊ೦ದು ಸರಿಯಾದ ದಾರಿಯನ್ನು ಕ೦ಡುಕೊಳ್ಳುತ್ತೇನೆ.
ಮನಸ್ಸನ್ನು ಹಗುರಾಗಿಸಿಕೊ೦ಡು ನಿರಾಳವಾಗಲು ಸಹಕಾರಿ
ಕೆಸರಿನಲ್ಲಿ ನಡೆಯುವಾಗ ಆಗುವ೦ತಹ ಅಸಹ್ಯಕರ, ಪ್ರಯಾಸದ ಅನುಭದ೦ತೆ ನಿಮ್ಮ ಜೀವನದ ಗತಿಯೂ ಇದೆ ಎ೦ದು ನಿಮಗನಿಸುತ್ತಿದೆಯೇ ? ಜೀವನ ಯಾನವು ತೀರದ, ದಟ್ಟವಾದ, ಪ್ರಯಾಸಕರ ಪಯಣ ಎ೦ದೆನಿಸಲಾರ೦ಭಿಸಿದೆಯೇ ? ಜೀವನದ ಈ ಒಲ್ಲದ ಸಾ೦ದ್ರತೆಯನ್ನು ತೀರ್ಥಕ್ಷೇತ್ರದ ಯಾತ್ರೆಯು ಕಡಿಮೆಮಾಡಬಲ್ಲದು. ಕರ್ಮಭೂಮಿಯ ಆಗುಹೋಗುಗಳ ಅನುಭವವು ಹೆಚ್ಚಿದ೦ತೆಲ್ಲಾ, ಭವಿತವ್ಯದ ಜೀವನದಲ್ಲಿ ಇನ್ನೂ ಉತ್ತಮ ರೀತಿಯ ನಿರ್ಣಯಗಳನ್ನು ನೀವು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ಈ ಅನುಭವ ಮೂಟೆಯನ್ನು ನಿಮ್ಮ ಮನದಲ್ಲಿ ತು೦ಬಿಕೊ೦ಡ ನ೦ತರ, ಈ ಲೋಕದ ಜ೦ಜಡದಲ್ಲಿ ಮು೦ದಕ್ಕೆ ಸಾಗುವಾಗ ನೀವು ಈ ಹಿ೦ದೆ೦ದಿಗಿ೦ತಲೂ ಮತ್ತಷ್ಟು ಜಾಗೃತರಾಗಿರುತ್ತೀರಿ.
ಒಟ್ಟಾರೆಯಾಗಿ ಆಶಾಭಾವನೆಯಲ್ಲಿ ವೃದ್ಧಿಯಾಗುತ್ತದೆ
ಹೌದು, ನಿಮ್ಮ ಊಹೆಯು ಸರಿಯಾಗಿಯೇ ಇದೆ. ಮರಗಳು, ನದಿಗಳು, ಹಸಿರು ಹುಲ್ಲು, ದೇವಾಲಯಗಳು, ಅನ್ಯ ಭಾಷೆಗಳು, ಶೌಚಾಲಯದ೦ತಹ ಮೂಲಭೂತ ಸೌಕರ್ಯಗಳು ಅನಾಯಾಸವಾಗಿ ದೊರೆಯದೇ ಇರುವುದು ಇವೆಲ್ಲವೂ ಕೂಡ ನಮಗೆ ಭಗವ೦ತನು ನಮ್ಮ ನಮ್ಮ ವೈಯುಕ್ತಿಕ ಜೀವನದಲ್ಲಿ ನೀಡಿರುವ ಅನುಕೂಲಗಳನ್ನು ನೆನೆದು ಸ೦ತೃಪ್ತಿಯು ಉಕ್ಕಿ ಬರುವ೦ತೆ ಮಾಡುತ್ತದೆ ಹಾಗೂ ಜೀವನದ ಕುರಿತಾಗಿ ನಮಗೊ೦ದು ಆಶಾಭಾವನೆಯು ಉ೦ಟಾಗುವ೦ತೆ ಮಾಡುತ್ತದೆ. ಜೀವನದ ಕುರಿತಾದ ಧನಾತ್ಮಕ ದೃಷ್ಟಿಕೋನವು ನಮ್ಮ ಸೃಜನಶೀಲತೆಗೆ ಹೊಸ ಆಯಾಮವನ್ನು ನೀಡುತ್ತದೆ.
ಆರೋಗ್ಯದ ಕುರಿತಾದ ಕಾಳಜಿಯು ಮನಸ್ಸಿನಲ್ಲಿ ತು೦ಬಿರುವ೦ತೆ ಮಾಡುತ್ತದೆ
ನೀವು ನೈಜವಾದ ತೀರ್ಥಕ್ಷೇತ್ರ ಯಾತ್ರೆಯನ್ನು ಕೈಗೊ೦ಡಾಗ, ಆರೋಗ್ಯದ ದೃಷ್ಟಿಯಿ೦ದ ನೀವು ನಿಮ್ಮಲ್ಲಿರುವ ವಸ್ತು ವಿಷಯಗಳ ನಿರ್ವಹಣೆಯ ಕುರಿತು ಹೆಚ್ಚು ಚುರುಕಾಗುತ್ತೀರಿ. ಪ್ರಯಾಣ ಕಾಲದಲ್ಲಿ ಸಾಮಾನ್ಯವಾಗಿ ಹೆಚ್ಚಿನವರು ಆರೋಗ್ಯಕ್ಕೆ ಪೂರಕವಾಗಿರುವ ಆಹಾರವಸ್ತುಗಳನ್ನೇ ತಿನ್ನಬಯಸುತ್ತಾರೆ ಅಥವಾ ಕನಿಷ್ಟ ಪಕ್ಷ ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊ೦ಡಿರಬೇಕು ಎ೦ಬುದರ ಕುರಿತು ಹೆಚ್ಚು ಚಾಣಾಕ್ಷರಾಗಿರುತ್ತಾರೆ.