Just In
- 1 hr ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- 1 hr ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
- 2 hrs ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 3 hrs ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
Don't Miss
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಗೆ ಮಾರ್ಬಲ್ ಕಲ್ಲು ಬಳಸುತ್ತಿದ್ದೀರಾ?
ಮನೆಯ ಒಳಾಂಗಣಕ್ಕೆ ಸಂಗಮರಿ ಕಲ್ಲಿನ ಬಳಕೆ ಮನೆಗೆ ಹೊಸ ಮೆರುಗನ್ನು ನೀಡುತ್ತದೆ. ನಿಮ್ಮ ಮನೆಯ ಒಳಹಾಸಿಗೆ ಮತ್ತು ಕೋಣೆಯ ರೂಮುಗಳಿಗೆ ದುಬಾರಿ ಬೆಲೆಯ ಸಂಗಮರಿ ಕಲ್ಲುಗಳನ್ನು ಬಳಸಿದ್ದರೆ ಅವುಗಳ ಬಗ್ಗೆ ಒಂದಷ್ಟು ಕಾಳಜಿ ಅತ್ಯಗತ್ಯ.
ಮಾರ್ಬಲ್ ಬಳಕೆಯ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಇಲ್ಲಿವೆ:
* ಆ್ಯಸಿಡ್ ಅಂಶವುಳ್ಳ ದ್ರವ ಅಥವಾ ಆಹಾರ ಪದಾರ್ಥಗಳು ಸಂಗಮರಿ ಕಲ್ಲಿನ ನೆಲದ ಮೇಲೆ ಬಿದ್ದರೆ ಕಲೆ ಉಳಿಯುತ್ತದೆ ಅಥವಾ ಹೊಳಪು ಮಾಸಿಹೋಗುತ್ತದೆ. ಮಾಸಿಹೋದ ಕಲೆ ನಾಣ್ಯದ ಗಾತ್ರದಷ್ಟೇ ಇರಬಹುದು ಅಥವಾ ಉಳಿದ ಟೈಲ್ಸ್ ಗಳಿಗೂ ಹರಡಬಹುದು. ಹೀಗಾಗಿ, ಯಾವುದೇ ದ್ರವ ಪದಾರ್ಥಗಳಿರಲಿ, ಹಣ್ಣಿನ ರಸಗಳು, ಕಾರ್ಬೋನೇಟ್ ಪಾನೀಯಗಳು, ವೈನ್ ಅಥವಾ ಚಹ ಚೆಲ್ಲಿದರೂ ಕೂಡ ಸ್ವಚ್ಚವಾದ ಬಟ್ಟೆಯನ್ನು ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಕೆಲವು ಹನಿ ಅಮೋನಿಯಾ ಸೇರಿಸಿದ ಬಟ್ಟೆಯಿಂದ ಉಜ್ಜಿ ತೆಗೆಯಿರಿ.
* ಗುರುತು ಅಥವಾ ಕಲೆ ಉಳಿದುಹೋಗುವ ಮತ್ತೊಂದು ರೀತಿಯೆಂದರೆ ಆ್ಯಸಿಡ್ ಹೊಂದಿರುವ ಸೋಪಿನ ಪುಡಿಗಳ ಬಳಕೆ. ಸಂಗಮರಿ ನೆಲಹಾಸನ್ನು ಸ್ವಚ್ಚಗೊಳಿಸಲು ವಿನೆಗರ್ ಅಥವಾ ಇನ್ನುಳಿದ ಆ್ಯಸಿಡಿಕ್ ಉತ್ಪನ್ನಗಳನ್ನು ಎಂದಿಗೂ ಬಳಸಬೇಡಿ. ಮಾರ್ಬಲ್ ಗಳು ಸೂಕ್ಮ್ಮವಾಗಿದ್ದು ಸಹಜ ಪಿಎಚ್ ಯುಕ್ತ ದ್ರವಗಳಿಂದಲೇ ಸ್ವಚ್ಚಗೊಳಿಸಬೇಕು. ಸ್ಥಳೀಯವಾಗಿ ಸಿಗುವ ಕಳಪೆ ಗುಣಮಟ್ಟದ ಕ್ಲೀನರ್ ಗಳನ್ನು ಬಳಸಿದರೆ ಶಾಶತ್ವತವಾಗಿ ಹೊಳಪು ಮಾಯವಾಗುತ್ತದೆ.
* ಸಂಗಮವರಿ ಕಲ್ಲಿನಲ್ಲಿ ಅತಿ ಸೂಕ್ಷ್ಮ ರಂದ್ರಗಳಿರುತ್ತವೆ. ಆಹಾರ ಪದಾರ್ಥಗಳಿಂದ, ಪಾಟ್ ಗಳಿಂದ, ಕಬ್ಬಿಣದ ಪೀಠೋಪಕರಣಗಳ ಕಾಲುಗಳಿಂದ, ಎಣ್ಣೆ, ಶಾಯಿ ಇತ್ಯಾದಿಗಳಿಂದ ಸುಲಭವಾಗಿ ಹಾನಿಗೊಳ್ಳುತ್ತವೆ. ಅಡುಗೆ ಎಣ್ಣೆ ಅಥವಾ ಇನ್ಯಾವುದೇ ತರದ ಎಣ್ಣೆಯಂಶವುಳ್ಳ ಪದಾರ್ಥಗಳು ಕಲೆ ಉಳಿಸುತ್ತವೆ. ಹೀಗಾಗಿ, ತಕ್ಷಣ ನೆಲವನ್ನು ಸ್ವಚ್ಚಗೊಳಿಸಬೇಕು.
* ನಿರಂತರವಾಗಿ ನೆಲವನ್ನು ಸ್ವಚ್ಚಗೊಳಿಸುತ್ತ ಧೂಳು ತೊಳೆಯುತ್ತಿದ್ದರೆ ಅದರ ಸಹಜ ಹೊಳಪನ್ನು ಹಾಗಯೇ ಉಳಿಸಿಕೊಳ್ಳಬಹುದು. ಮ್ರದುವಾದ ಬಟ್ಟೆಯಿಂದ ಧೂಳನ್ನು ಒರೆಸಬೇಕು. ಬಿಸಿಯಾದ ನೀರು ಬಳಸುವ ಬದಲು ಉಗುರು ಬೆಚ್ಚಗಿನ ನೀರು ಬಳಸಿ. ಗಟ್ಟಿಯಾದ ಪದಾರ್ಥ ಬೀಳದ ಹೊರತು ಗಟ್ಟಿಯಾಗಿ ಉಜ್ಜಬೇಕಾದ ಅವಶ್ಯಕತೆಯಿಲ್ಲ.