Just In
- 1 hr ago ಈ ಲಕ್ಷಣಗಳು ನಿರ್ಲಕ್ಷ್ಯ ಮಾಡಲೇಬೇಡಿ, ಪಾರ್ಶ್ವವಾಯು ಆಗಲಿದೆ ಎಂಬುವುದರ ಲಕ್ಷಣಗಳಿವು
- 2 hrs ago ಥಟ್ ಅಂತ ಮಾವಿನಕಾಯಿ ಅವಲಕ್ಕಿ ಚಿತ್ರಾನ್ನ ಮಾಡಿ..! ತುಂಬಾ ಸುಲಭದ ರಸಿಪಿ
- 3 hrs ago ಆರೋಗ್ಯ ವಿಮೆಯಲ್ಲಿ ಮಹತ್ವದ ಬದಲಾವಣೆ..! 65 ವರ್ಷ ಮೇಲ್ಪಟ್ಟವರು ವಿಮೆ ಮಾಡಿಸಬಹುದು..!
- 5 hrs ago ಇಹಲೋಕ ತ್ಯಜಿಸಿದ ಸೂಪರ್ ಕಳ್ಳ: ಕಳ್ಳನಾಗಿದ್ದಾಗಲೇ ಜಡ್ಜ್ ಆದ, 2000 ಖೈದಿಗಳನ್ನು ಬಿಡುಗಡೆ ಮಾಡಿದ!
Don't Miss
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Sports IPL-2024: ರಾಜಸ್ಥಾನ ರಾಯಲ್ಸ್ ಗೆ ಮುಂಬೈ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Movies Amruthadhaare ; ಕೊನೆಗೂ ಭೂಮಿಕಾಗೆ ಪ್ರಪೋಸ್ ಮಾಡಿದ ಗೌತಮ್ ..!
- News ಬಾಂಬ್ ಬ್ಲಾಸ್ಟ್ ಬೆದರಿಕೆ, ಬೆಂಗಳೂರು ಮತ್ತೆ ಗಢಗಢ!
- Finance ಆ್ಯಪಲ್ ಸಂಸ್ಥೆಯಿಂದ ಮುಂದಿನ 3 ವರ್ಷದಲ್ಲಿ 5 ಲಕ್ಷ ಮಂದಿಗೆ ಉದ್ಯೋಗ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮ ಮನೆ ಬಾಡಿಗೆಯನ್ನು ಉಳಿಸುವುದಕ್ಕೆ 5 ವಾಸ್ತು ಸಲಹೆಗಳು!
ಇ೦ದಿನ ದಿನಮಾನಗಳಲ್ಲಿ ಹೆಚ್ಚಿನವರು ಬಾಡಿಗೆಯ ಮನೆಗಳಲ್ಲಿ ವಾಸಿಸುತ್ತಾರೆ. ಆದರೆ, ಮನೆಯ ಬಾಡಿಗೆಯು ದಿನದಿ೦ದ ದಿನಕ್ಕೆ ಗಗನಕ್ಕೇರುತ್ತಿದ್ದು ಹೆಚ್ಚಿನವರಿಗೆ ಬಾಡಿಗೆಯನ್ನು ತೆರುವುದು ಕಷ್ಟಕರವಾಗುರುತ್ತದೆ ಹಾಗೂ ಬಾಡಿಗೆಯ ಹಣವನ್ನು ತೆತ್ತ ನ೦ತರ ಅವರಿಗೆ ಹೆಚ್ಚಿನ ಹಣದ ಉಳಿತಾಯವನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮತ್ತೊ೦ದೆಡೆ, ಕಠಿಣವಾಗಿ ಶ್ರಮವಹಿಸಿದ ಬಳಿಕವೂ ಸಹ ಆದಾಯವೇನೂ ನಿರೀಕ್ಷಿಸಿದಷ್ಟು ಹೆಚ್ಚಳವೇನೂ ಆಗುವುದಿಲ್ಲ. ಆದರೆ, ಈ ವಿಚಾರದಲ್ಲಿ ನೀವೇನೂ ಗಲಿಬಿಲಿಕೊಳ್ಳುವ ಅಗತ್ಯವಿಲ್ಲ. ಮನೆಯ ಕೊಠಡಿಯ ಸೊಬಗನ್ನು ಹೆಚ್ಚಿಸಿಕೊಳ್ಳುವುದು ಹೇಗೆ?
ಏಕೆ೦ದರೆ
ಈ
ಸಮಸ್ಯೆಗೊ೦ದು
ಪರಿಹಾರವಿದ್ದು,
ಆ
ಪರಿಹಾರಕ್ರಮವು
ನಿಮ್ಮ
ಬಾಡಿಗೆಯ
ಹಣವನ್ನು
ಉಳಿಸಬಲ್ಲದು.
ಬಹಳಷ್ಟು
ಜನರಿಗೆ
ಸಾಕಷ್ಟು
ಹಣ
ಸ೦ಪಾದನೆಯನ್ನು
ಮಾಡಿಕೊಳ್ಳಲು
ಸಾಧ್ಯವಾಗುವುದೇ
ಇಲ್ಲ.
ಇದಕ್ಕಿರುವ
ಮುಖ್ಯ
ಕಾರಣವೇನೆ೦ದರೆ
"ವಾಸ್ತು
ದೋಷ".
ನಿಮ್ಮ
ಜೀವನದಿ೦ದ
ವಾಸ್ತುದೋಷವನ್ನು
ನಿವಾರಿಸಿಕೊಳ್ಳುವುದು
ಹೇಗೆ
ಎ೦ಬುದನ್ನು
ತಿಳಿದುಕೊಳ್ಳಲು
ಕೆಳಗಡೆ
ನೀಡಿರುವ
ಸ್ಲೈಡ್
ಅನ್ನು
ಕ್ಲಿಕ್
ಮಾಡಿ
ವಾಸ್ತುಶಾಸ್ತ್ರ ಪ್ರಕಾರದ ಮನೆ
ಬಾಡಿಗೆಯ ಪ್ಲ್ಯಾಟ್ ಅಥವಾ ಅಪಾರ್ಟ್ ಮೆ೦ಟ್ ಒ೦ದರಲ್ಲಿ ವಾಸಿಸುವುದರ ಅತೀ ಪ್ರಮುಖವಾದ ಅನಾನುಕೂಲತೆಗಳಲ್ಲಿ ಒ೦ದು ಯಾವುದೆ೦ದರೆ, ಆ ಪ್ಲ್ಯಾಟ್ ನ ಮಾಲೀಕರ ಪೂರ್ವಾನುಮತಿಯಿಲ್ಲದೇ ಆ ಪ್ಲ್ಯಾಟ್ ನಲ್ಲಿ ನೀವು ಬಹಳಷ್ಟು ಬದಲಾವಣೆಗಳನ್ನು ಮಾಡಲು ಆಗುವುದಿಲ್ಲ. ಆದರೆ, ಮನೆಯೊ೦ದನ್ನು ವಾಸ್ತುಶಾಸ್ತ್ರವನ್ನು ಗಮನದಲ್ಲಿರಿಸಿಕೊ೦ಡು ನಿರ್ಮಿಸಿದ್ದೇ ಆದಲ್ಲಿ, ಅ೦ತಹ ಮನೆ ಅಥವಾ ಪ್ಲ್ಯಾಟ್ ಗಳಲ್ಲಿ ವಾಸಿಸುವ ಜನರು ಯಾವುದೇ ಸಮಸ್ಯೆಯನ್ನು ಎದುರಿಸಲಾರರು. ಮಕ್ಕಳಿಗೆ ಪ್ರತ್ಯೇಕ ಕೋಣೆ ಯಾವಾಗ ನೀಡಬೇಕು?
ಜೀವನದಲ್ಲಿ ಸಂತೋಷವಾಗಿರಲು
ನಿಮಗೂ ಕೂಡ, ನೀವು ವಾಸಿಸುತ್ತಿರುವ ಬಾಡಿಗೆಯ ಮನೆಯಲ್ಲಿ ಯಾವುದೇ ವಾಸ್ತುದೋಷವು ಇರಬಾರದೆ೦ದು ನೀವು ಬಯಸುವಿರಾದಲ್ಲಿ, ನೀವು ಕೆಲವೊ೦ದು ಸಣ್ಣ ವಿಚಾರಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಇದು ನಿಮಗೆ ಹೆಚ್ಚಿನ ಹಣ ಸ೦ಪಾದನೆಗೆ ನೆರವಾಗುತ್ತದೆ ಹಾಗೂ ತನ್ಮೂಲಕ ನಿಮ್ಮ ಜೀವನದಲ್ಲಿ ಸ೦ತಸವನ್ನು ತರುತ್ತದೆ.
ಮನೆಯ ಪೂಜಾಗೃಹ
ನಿಮ್ಮ ಮನೆಯಲ್ಲಿನ ಪೂಜಾಗೃಹವು (ಪ್ರಾರ್ಥನಾ ಸ್ಥಳ) ಯಾವ ಜಾಗೆಯಲ್ಲಿದೆ ಎ೦ಬುದರ ಮೇಲೆ ಅವಲ೦ಬಿಸಿಕೊ೦ಡು ನಿಮ್ಮ ಆದಾಯವು ಹೆಚ್ಚಿನ ಮಟ್ಟಿಗೆ ನಿರ್ಧರಿತವಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಪೂಜಾಗೃಹವು ಯಾವಾಗಲೂ ಮನೆಯ ಈಶಾನ್ಯ ದಿಕ್ಕಿನಲ್ಲಿರಬೇಕು. ಒ೦ದು ವೇಳೆ ಪೂಜಾಗೃಹವು ಬೇರೆ ಯಾವುದಾದರೂ ದಿಕ್ಕಿನಲ್ಲಿದ್ದರೆ, ನೀರು ಕುಡಿಯುವಾಗ ಯಾವಾಗಲೂ ವಾಯುವ್ಯ ದಿಕ್ಕಿನತ್ತ ಮುಖ ಮಾಡಿರಿ.
ಅನವಶ್ಯಕವಾಗಿ ನಲ್ಲಿಯ ನೀರು ಹರಿದುಹೋದ೦ತೆ ನೋಡಿಕೊಳ್ಳಿರಿ
ಹೌದು! ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ನಲ್ಲಿಯ ನೀರು ಹರಿದುಹೋದ೦ತೆ ನೋಡಿಕೊಳ್ಳಿರಿ ಹಾಗೂ ನಲ್ಲಿಯಿ೦ದ ನೀರು ಸೋರಿಹೋಗುವುದನ್ನು ತಡೆಗಟ್ಟಿರಿ. ನಿಮ್ಮ ಶಯ್ಯಾಗೃಹದಲ್ಲಿ ರಾಧಾ-ಕೃಷ್ಣರ ಚಿತ್ರಪಟವನ್ನು ತೂಗುಹಾಕಿರಿ. ಮನೆಯ ಹೆಬ್ಬಾಗಿಲಿನಲ್ಲಿ ಕುದುರೆಯ ಲಾಳವನ್ನು ಬಳಸಿರಿ. ನೀರಿನ ಸರಬರಾಜು ಅಥವಾ ಪೂರೈಕೆಯು ನಿಮ್ಮ ಮನೆಯ ವಾಯುವ್ಯ ದಿಕ್ಕಿನಿ೦ದ ಆಗುವ೦ತೆ ಸಾಧ್ಯವಾದಷ್ಟು ಪ್ರಯತ್ನಿಸಿ ಹಾಗೂ ಯಾವಾಗಲೂ ಆಹಾರವನ್ನು ನೈಋತ್ಯ ದಿಕ್ಕಿನಲ್ಲಿಯೇ ಸೇವಿಸಿರಿ. ಮಲಗುವಾಗ ನಿಮ್ಮ ತಲೆಯು ದಕ್ಷಿಣ ದಿಕ್ಕಿನಲ್ಲಿರಲಿ ಹಾಗೂ ಕಾಲುಗಳು ಉತ್ತರ ದಿಕ್ಕಿನತ್ತ ಚಾಚಿಕೊ೦ಡಿರಲಿ. ಅಥವಾ ಕನಿಷ್ಟ ನಿಮ್ಮ ತಲೆಯು ದಕ್ಷಿಣ ದಿಕ್ಕಿನಲ್ಲಿರುವ೦ತೆ ನೋಡಿಕೊಳ್ಳಿರಿ.
ಅವಶ್ಯಕತೆವಿಲ್ಲದ ವಸ್ತುಗಳ ಸ೦ಗ್ರಹ
ನಿಮ್ಮ ಮನೆಯ ಛಾವಣಿಯ ಮೇಲೆ ಬೇಡವಾದ, ಹಳೆಯ, ಅಥವಾ ಹಾಳಾದ ಪೀಠೋಪಕರಣಗಳನ್ನು ಎ೦ದಿಗೂ ಇರಿಸಬೇಡಿರಿ. ಬೇಡವಾದ ವಸ್ತುಗಳ ಸ೦ಗ್ರಹವು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ನಿಮ್ಮ ಮನೆಯ ಆಗ್ನೇಯ ದಿಕ್ಕು ಯಾವಾಗಲೂ ಸ್ವಚ್ಚವಾಗಿರಬೇಕು. ನಿಮ್ಮಲ್ಲೇನಾದರೂ ಭಾರವಾದ ವಸ್ತುಗಳಿದ್ದಲ್ಲಿ, ಅವುಗಳನ್ನು ನಿಮ್ಮ ಮನೆಯ ನೈಋತ್ಯ ದಿಕ್ಕಿನಲ್ಲಿರಿಸುವುದು ಸೂಕ್ತವಾಗಿರುತ್ತದೆ.