Just In
- 2 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 3 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 6 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 8 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News SSLC Result 2024: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಯಾವಾಗ? ಪರಿಶೀಲಿಸುವುದೇಗೆ?-ಮಾಹಿತಿ, ವಿವರ
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆಲ್ಲಿಕಾಯಿ ಜ್ಯೂಸ್+ಮೆಂತೆ ಹುಡಿ-ಬರೋಬ್ಬರಿ 7 ಕಾಯಿಲೆಗೆ ರಾಮಬಾಣ!
ನೈಸರ್ಗಿಕ ರೀತಿಯಲ್ಲಿ ಆರೋಗ್ಯವನ್ನುಕಾಪಾಡಿಕೊಳ್ಳಬೇಕಾದರೆ ನೆಲ್ಲಿಕಾಯಿ ಜ್ಯೂಸ್ ಮತ್ತು ಮೆಂತೆಯ ಹುಡಿಯನ್ನು ಹಾಕಿಕೊಂಡು ಮಾಡುವ ಪಾನೀಯದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.
ಹವಾಮಾನ ಬದಲಾವಣೆ, ಕಲುಷಿತ ವಾತಾವರಣದಿಂದಾಗಿ ಇಂದಿನ ದಿನಗಳಲ್ಲಿ ಆಗಾಗ ಅನಾರೋಗ್ಯ ಕಾಡುವುದು. ಕೆಲವರ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿರುವ ಕಾರಣದಿಂದ ಅವರು ಆರೋಗ್ಯವಂತರಾಗಿರುತ್ತಾರೆ. ಪ್ರತಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸಣ್ಣ ರೋಗ ಕೂಡ ದೊಡ್ಡ ಸಮಸ್ಯೆಯಾಗಿ ಕಾಡುವುದು. ಇದಕ್ಕಾಗಿ ಆಗಾಗ ವೈದ್ಯರಲ್ಲಿಗೆ ತೆರಳಿ ಔಷಧಿ ತರುತ್ತೇವೆ.
ಅನಾರೋಗ್ಯ ಆಗಾಗ ಕಾಡಿದಾಗ ಹಣ ಕೂಡ ವೆಚ್ಚವೆಚ್ಚವಾಗುವುದು. ಇದು ನಿಮ್ಮ ಸಂಪಾದನೆ ಹಾಗೂ ಕೂಡಿಕೆಯಲ್ಲಿ ಭಾರೀ ಪಾಲನ್ನು ಪಡೆಯುತ್ತದೆ. ಇದಕ್ಕಾಗಿ ಆಯುರ್ವೇದ ಪಾನೀಯದಿಂದ ಆರೋಗ್ಯವನ್ನು ಕಾಪಾಡಿಕೊಂಡು ಹೋಗಿ ಯಾವುದೇ ಕಾಯಿಲೆಯು ನಿಮ್ಮ ದೇಹದೊಳಗೆ ಬರದಂತೆ ರಕ್ಷಿಸುತ್ತದೆ. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ
ನೈಸರ್ಗಿಕ ರೀತಿಯಲ್ಲಿ ಆರೋಗ್ಯವನ್ನುಕಾಪಾಡಿಕೊಳ್ಳಬೇಕಾದರೆ ನೆಲ್ಲಿಕಾಯಿ ಜ್ಯೂಸ್ ಮತ್ತು ಮೆಂತೆಯ ಹುಡಿಯನ್ನು ಹಾಕಿಕೊಂಡು ಮಾಡುವ ಪಾನೀಯದಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಮೂರು ಚಮಚ ನೆಲ್ಲಿಕಾಯಿ ಜ್ಯೂಸ್ಗೆ ಒಂದು ಚಮಚ ಮೆಂತೆ ಹುಡಿಯನ್ನು ಹಾಕಿಕೊಂಡು ಪ್ರತೀದಿನ ಸೇವನೆ ಮಾಡಿದರೆ ಒಳ್ಳೆಯ ಆರೋಗ್ಯವು ನಿಮ್ಮದಾಗುವುದು...
ಮಧುಮೇಹಿಗಳಿಗೆ
ಈ ನೈಸರ್ಗಿಕ ಪಾನೀಯದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಮಧುಮೇಹದ ಲಕ್ಷಣಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡುವುದು.
ತೂಕ ಕಳೆದುಕೊಳ್ಳಲು
ಈ ನೈಸರ್ಗಿಕ ಪಾನೀಯವು ದೇಹವು ಹೆಚ್ಚಿನ ಮಟ್ಟದಲ್ಲಿ ಪ್ರೋಟೀನ್ ಹೀರಿಕೊಳ್ಳಲು ನೆರವಾಗುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗಿ ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಬಹುದು.
ಹೃದಯದ ಕಾಯಿಲೆ ನಿವಾರಣೆ
ನೆಲ್ಲಿಕಾಯಿ ಮತ್ತು ಮೆಂತೆಯಲ್ಲಿ ಇರುವಂತಹ ಶಕ್ತಿಶಾಲಿ ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಹೃದಯದ ಸ್ನಾಯುಗಳನ್ನು ಬಲಗೊಳಿಸಿ ಹಲವಾರು ರೀತಿಯ ಹೃದಯದ ಕಾಯಿಲೆಯನ್ನು ತಡೆಯುತ್ತದೆ.
ಪ್ರತಿರೋಧಕ ಶಕ್ತಿ ಹೆಚ್ಚಳ
ಈ ನೈಸರ್ಗಿಕ ಪಾನೀಯದಲ್ಲಿ ವಿಟಮಿನ್ ಸಿ ಇರುವ ಕಾರಣದಿಂದ ಇದು ದೇಹದಲ್ಲಿನ ಎಲ್ಲಾ ಕೋಶಗಳನ್ನು ಬಲಗೊಳಿಸುವುದು ಮತ್ತು ಪ್ರತಿರೋಧಕ ವ್ಯವಸ್ಥೆಗೆ ಬಲ ನೀಡುವುದು. ಇದರಿಂದ ಸಾಮಾನ್ಯ ಕಾಯಿಲೆಗಳು ದೂರವಿರುತ್ತದೆ.
ಮೂತ್ರನಾಳದಲ್ಲಿ ಕಲ್ಲಾಗುವುದನ್ನು ತಡೆಯುವುದು
ನೆಲ್ಲಿಕಾಯಿ ಜ್ಯೂಸ್ ಮತ್ತು ಮೆಂತ್ಯೆಯ ಮಿಶ್ರಣದಲ್ಲಿರುವ ವಿಟಮಿನ್ ಸಿ ಮೂತ್ರನಾಳ ಹಾಗೂ ಯಕೃತ್ ನಲ್ಲಿ ಇರುವಂತಹ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಇದರಿಂದ ಮೂತ್ರನಾಳದಲ್ಲಿ ಕಲ್ಲಾಗುವುದು ತಪ್ಪುತ್ತದೆ.
ಅಲ್ಸರ್(ಹುಣ್ಣು) ಗುಣಪಡಿಸುವುದು
ಈ ಪಾನೀಯದಲ್ಲಿ ಇರುವಂತಹ ವಿಟಮಿನ್ ಸಿ ಉರಿಯೂತ ಕಡಿಮೆ ಮಾಡಿ ಬಾಯಿ ಹಾಗೂ ಹೊಟ್ಟೆಯ ಹುಣ್ಣನ್ನು ನೈಸರ್ಗಿಕವಾಗಿ ಶಮನ ಮಾಡುವುದು.
ದೃಷ್ಟಿ ಸುಧಾರಣೆ
ನೆಲ್ಲಿಕಾಯಿ ಜ್ಯೂಸ್ ಹಾಗೂ ಮೆಂತೆಯಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಕಣ್ಣಿನ ನರಗಳಿಗೆ ಬಲವನ್ನು ನೀಡಿ ಕಣ್ಣಿನ ದೃಷ್ಟಿಯನ್ನು ಸುಧಾರಿಸುವುದು.