Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಯುರ್ವೇದ ಟಿಪ್ಸ್: ರಕ್ತ ಶುದ್ಧೀಕರಿಸುವ ನೈಸರ್ಗಿಕ ಜ್ಯೂಸ್
ದೇಹದ ಮಲಿನ ರಕ್ತವನ್ನು ಶುದ್ಧೀಕರಿಸಲು ನಿಸರ್ಗ ಕೆಲವು ಸಾಮಾಗ್ರಿಗಳನ್ನು ನೀಡಿದ್ದು ಇದರ ಸರಿಯಾದ ಸೇವನೆಯಿಂದ ಒಂದೇ ವಾರದಲ್ಲಿ ರಕ್ತ ಶುದ್ಧಿಯಾಗುತ್ತದೆ.
ಆಗಾಗ ನೀವು ಸುಲಭವಾಗಿ ಕಾಯಿಲೆಗೆ ತುತ್ತಾಗುತ್ತಿದ್ದೀರಾ? ಹಾಗಾದರೆ ನಿಮ್ಮ ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗಿರುವ ಸಾಧ್ಯತೆ ಇದೆ. ಅಂದರೆ ರಕ್ತ ಆಮ್ಲಜನಕವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಂಡಿದೆ ಎಂದು ಅರ್ಥೈಸಿಕೊಳ್ಳಬಹುದು.
ಮಲಿನ ರಕ್ತ ದೇಹವೆಲ್ಲಾ ಹರಿಯುತ್ತಾ ಹತ್ತು ಹಲವು ಸೋಂಕುಗಳನ್ನು ಹರಡುವ ಸಾಧ್ಯತೆಯ ಮೂಲಕ ಹಲವು ಪ್ರಮುಖ ಅಂಗಾಂಗಗಳಿಗೆ ಹಾನಿಯುಂಟುಮಾಡಬಹುದು. ಮಲಿನ ರಕ್ತವನ್ನು ಶುದ್ಧೀಕರಿಸಲು ನಿಸರ್ಗ ಕೆಲವು ಸಾಮಾಗ್ರಿಗಳನ್ನು ನೀಡಿದ್ದು ಇದರ ಸರಿಯಾದ ಸೇವನೆಯಿಂದ ಒಂದೇ ವಾರದಲ್ಲಿ ರಕ್ತ ಶುದ್ಧಿಯಾಗುತ್ತದೆ. ಸರಳ ಮನೆಮದ್ದು: 'ರಕ್ತ ಶುದ್ಧೀಕರಿಸುವ' ಅದ್ಭುತ ಜ್ಯೂಸ್
ಈ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ಪೇಯವನ್ನು ಕುಡಿಯುವ ಮೂಲಕ ರಕ್ತದಲ್ಲಿನ ಮಲಿನ ಮತ್ತು ವಿಷಕಾರಿ ವಸ್ತುಗಳು ಪ್ರತ್ಯೇಕಿಸಲ್ಪಟ್ಟು ವಿಸರ್ಜಿಸಲು ಸಾಧ್ಯ. ಮಲಿನ ಪದಾರ್ಥಗಳು ನಾವು ಸೇವಿಸುವ ಆಹಾರ, ಗಾಳಿ ಮತ್ತು ನೀರಿನ ಮೂಲಕ ದೇಹಕ್ಕೆ ಆಗಮಿಸಿರುತ್ತವೆ. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ...
ಅಗತ್ಯವಿರುವ ಸಾಮಾಗ್ರಿಗಳು:
*ಹಸಿಶುಂಠಿಯ ರಸ: ಮೂರು ದೊಡ್ಡ ಚಮಚ
*ಈಗ ತಾನೇ ಹಿಂಡಿ ತೆಗೆದ ಕಿತ್ತಳೆಯ ರಸ - 4 ದೊಡ್ಡ ಚಮಚ
*ಅರಿಶಿನ ಪುಡಿ- 1 ಚಿಕ್ಕ ಚಮಚ
ಮಾಡುವ ವಿಧಾನ....
ಶುಂಠಿ, ಕಿತ್ತಳೆ ಮತ್ತು ಅರಿಸಿನ ಮೂರರಲ್ಲೂ ವಿವಿಧ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ವಿವಿಧ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ಧಾಳಿಯನ್ನು ಎದುರಿಸಲು ಸಮರ್ಥವೂ ಆಗಿವೆ. ಈ ಬ್ಯಾಕ್ಟೀರಿಯಾ ನಿರೋಧಕ ಗುಣವೇ ರಕ್ತ ಶುದ್ಧೀಕರಿಸಲೂ ಬಳಕೆಯಾಗುತ್ತದೆ. ಈ ಮೂರೂ ಸಾಮಾಗ್ರಿಗಳನ್ನು ಒಂದು ಕಪ್ನಲ್ಲಿ ಚೆನ್ನಾಗಿ ಬೆರೆಸಿ ದಿನದ ಪ್ರಥಮ ಆಹಾರವಾಗಿ ಸೇವಿಸಿ ಕೊಂಚ ಹೊತ್ತಿನ ಬಳಿಕ ಉಪಾಹಾರ ಸೇವಿಸಬೇಕು. ಬನ್ನಿ, ಶುಂಠಿಯ ಸೇವನೆಯಿಂದ ಬೇರಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:
ಮಲಬದ್ಧತೆ, ಅಜೀರ್ಣಕ್ಕೆ
ಮಲಬದ್ಧತೆ, ಅಜೀರ್ಣ, ಆಮ್ಲೀಯತೆ ಮೊದಲಾದ ತೊಂದರೆಗಳ ನಿವಾರಣೆಗೆ ಶುಂಠಿಯ ರಸ ಅತ್ಯುತ್ತಮವಾಗಿದೆ.
ನೈಸರ್ಗಿಕ ಉರಿಯೂತ ನಿವಾರಕ
ಶುಂಠಿ ನೈಸರ್ಗಿಕ ಉರಿಯೂತ ನಿವಾರಕವಾಗಿದ್ದು ಈ ಗುಣ ಹತ್ತು ಹಲವು ಬಗೆಯ ನೋವುಗಳನ್ನು, ಬಾವುಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ
ಶುಂಠಿಯಲ್ಲಿ ಹಲವು ಬಗೆಯ ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹಲವು ಬಗೆಯ ರೋಗಗಳನ್ನು ಬರದಂತೆ ತಡೆಯುತ್ತದೆ.
ಮೈಗ್ರೇನ್ ತಲೆನೋವಿಗೆ
ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲೂ ಶುಂಠಿ ಉತ್ತಮವಾಗಿದೆ. ಮೈಗ್ರೇನ್ ನೋವಿಗೆ ಅಂತ್ಯ ಹಾಡುವ ಹತ್ತು ಗಿಡಮೂಲಿಕೆಗಳು
ಮುಂಜಾನೆಯ ವಾಕರಿಕೆ
ಗರ್ಭಿಣಿಯರಿಗೆ ಕಾಡುವ ಮುಂಜಾನೆಯ ವಾಕರಿಕೆಯನ್ನು ಕಡಿಮೆ ಮಾಡಲೂ ಶುಂಠಿಯ ಸೇವನೆ ಉತ್ತಮವಾಗಿದೆ. ಗರ್ಭಾವಸ್ಥೆಯಲ್ಲಿ ವಾಕರಿಕೆ ಸಮಸ್ಯೆ-ಇಲ್ಲಿದೆ ಸಿಂಪಲ್ ಟಿಪ್ಸ್
ಸಂಧಿವಾತವನ್ನು ಕಡಿಮೆ ಮಾಡಲು
ಸಂಧಿವಾತವನ್ನು ಕಡಿಮೆ ಮಾಡಲೂ ಶುಂಠಿ ಸಮರ್ಥವಾಗಿದೆ. ಬಾವು ಮತ್ತು ಸೆಡೆತಗೊಂಡ ಸ್ನಾಯುಗಳನ್ನು ಸಡಿಲಿಸುವ ಮೂಲಕ ಸಂಧಿವಾತವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಸಂಧಿವಾತ ಸಮಸ್ಯೆಗೆ ಸರಳ ಜ್ಯೂಸ್ ರೆಸಿಪಿ-ಶೀಘ್ರ ಪರಿಹಾರ...
ಮಧುಮೇಹ ನಿಯಂತ್ರಣ...
ರಕ್ತದಲ್ಲಿನ ಹೆಚ್ಚಿನ ಪ್ರಮಾಣದ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ಮಧುಮೇಹದ ಕೆಲವು ಪರಿಣಾಮಗಳನ್ನೂ ಕಡಿಮೆ ಮಾಡಬಹುದು....
ಹೃದಯ ಸಂಬಂಧಿ ಕಾಯಿಲೆ ನಿಯಂತ್ರಣ
ನಿಯಮಿತವಾಗಿ ಸೇವಿಸುತ್ತಾ ಬಂದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ಹಾಗೂ ನರಸಂಬಂಧಿ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.
ಮಾಸಿಕ ದಿನ
ಮಹಿಳೆಯರಿಗೆ ಕಾಡುವ ಮಾಸಿಕ ದಿನಗಳ ಕೆಳಹೊಟ್ಟೆನೋವನ್ನೂ ಕಡಿಮೆ ಮಾಡಲು ಶುಂಠಿ ನೆರವಾಗುತ್ತದೆ.