Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಧ್ಯಯನ ವರದಿ: ಉಪ್ಪಿನಿಂದ ಹಸಿವು ಹೆಚ್ಚಳ-ದೇಹದ ಶಕ್ತಿ ವರ್ಧನೆ!
ಉಪ್ಪಿನಂಶ ಇರುವ ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು ಸೇವಿಸಿದರೆ ಬಾಯಾರಿಕೆಯ ಬದಲಿಗೆ ಸಿಕ್ಕಾಪಟ್ಟೆ ಹಸಿವು ಜಾಸ್ತಿಯಾಗುತ್ತದೆ ಎಂದು ಸಂಶೋಧನೆಯ ತಂಡಗಳು ತಿಳಿಸಿವೆ....
ಇಂದಿನ ದಿನಗಳಲ್ಲಿ ಬೊಜ್ಜು ಸ್ಥೂಲಕಾಯತೆ ಎಲ್ಲರನ್ನು ಕಾಡುತ್ತಿರುವ ವ್ಯಾಧಿಯಾಗಿ ಮಾರ್ಪಟ್ಟಿದೆ. ಆಹಾರದ ಮೇಲೆ ನಿಯಂತ್ರಣ ಇಲ್ಲದಿರುವುದು, ಆಧುನಿಕ ಜೀವನ ಪದ್ಧತಿ, ಸೂಕ್ತ ವ್ಯಾಯಾಮದ ಕೊರತೆ, ನಿದ್ರಾಹೀನತೆ ಹೀಗೆ ಸಾಕಷ್ಟು ಕಾರಣಗಳಿಂದ ಸ್ಥೂಲಕಾಯತೆ ನಿಮ್ಮನ್ನು ಕಾಡುತ್ತದೆ. ಇದರ ಪರಿಣಾಮವಾಗಿಯೇ ಇಂದು ಹೆಚ್ಚಿನವರು ಅತಿ ಸಣ್ಣ ಪ್ರಾಯದಲ್ಲಿಯೇ ಹಲವಾರು ರೋಗಗಳಿಗೆ ಒಳಗಾಗುತ್ತಿದ್ದಾರೆ.
ಕೆಲವರಾದರೂ ಈ ವಿಷಯದಲ್ಲಿ ಎಚ್ಚೆತ್ತುಕೊಂಡು ತಮ್ಮ ಆರೋಗ್ಯದ ಕಡೆಗೆ ಗಮನ ನೀಡುವ ಸಲುವಾಗಿ ಯೋಗ ಕೇಂದ್ರ, ಜಿಮ್ ಸೆಂಟ್, ಓಟ, ನಡಿಗೆ ಮೊದಲಾದ ದೈಹಿಕ ಚಟುವಟಿಕೆಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇತರರ ಮೂದಲಿಕೆ ಅಂತೆಯೇ ತಮ್ಮನ್ನು ಕಾಡುತ್ತಿರುವ ಮಾನಸಿಕ ಕೀಳರಿಮೆಯೇ ಇವರಲ್ಲಿ ಇಂತಹ ಬದಲಾವಣೆಗಳನ್ನು ಮಾಡಲು ಕಾರಣವಾಗಿವೆ. ಉಪ್ಪಿನಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದೇ?
ನೀವು ಡಯೆಟ್ ವಿಧಾನವನ್ನು ಅನುಸರಿಸುತ್ತಿದ್ದೀರಿ ಎಂದಾದಲ್ಲಿ ಉಪ್ಪಿನ ಆಹಾರದ ಸೇವನೆಯನ್ನು ನಾವು ಇಲ್ಲಿ ಸಲಹೆ ನೀಡುತ್ತಿದ್ದೇವೆ. ಒಂದು ಸಂಶೋಧನೆಯ ಪ್ರಕಾರ ಉಪ್ಪಿನ ಪ್ರಮಾಣ ಹೆಚ್ಚಾದರೆ ಬಾಯಾರಿಕೆ ಕಡಿಮೆಯಾಗಿ, ಹಸಿವಿನ ಪ್ರಮಾಣ ಹೆಚ್ಚಾಗಿತ್ತೆಂದು ತಿಳಿಸಿದ್ದಾರೆ ಇದರಿಂದ ನಿಮ್ಮಲ್ಲಿ ಹೆಚ್ಚು ಶಕ್ತಿ ಸಾಮರ್ಥ್ಯ ಉಂಟಾಗುತ್ತದೆ ಎಂಬುದಾಗಿಯೂ ಕೂಡ ಈ ಸಂಶೋಧನೆಯೊಂದು ತಿಳಿಸಿದೆ.
ಈ
ಸಂಶೋಧನೆಯಲ್ಲಿ
10
ಪುರುಷರ
ಎರಡು
ತಂಡಗಳನ್ನು
ವಿಮಾನಗಳಲ್ಲಿ
ಇರಿಸಲಾಗಿತ್ತು.
ಮೊದಲ
ಗುಂಪನ್ನು
105
ದಿನಗಳ
ಕಾಲ
ಅಧ್ಯಯನ
ಮಾಡಲಾಯಿತು
ನಂತರ
ಎರಡನೇ
ತಂಡವನ್ನು
205
ದಿನಗಳ
ಕಾಲ
ಅಧ್ಯಯನ
ನಡೆಸಲಾಯಿತು.
ತಮ್ಮ
ಆಹಾರಗಳಲ್ಲಿ
ಮೂರು
ಬಗೆಯ
ಉಪ್ಪನ್ನು
ನೀಡಿ
ಅವರಿಗೆ
ಆಹಾರವನ್ನು
ನೀಡಲಾಯಿತು.
ಉಪ್ಪು
ಬೆರೆಸಿದ
ಬೆಚ್ಚನೆಯ
ನೀರು,
ಆಯಸ್ಸು
ನೂರು!
ಬಳಿಕ ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪಿನಂಶ ಇರುವುದು ಪತ್ತೆಯಾಗಿತ್ತು, ಏಕೆಂದರೆ ಹೆಚ್ಚು ಪ್ರಮಾಣದ ಉಪ್ಪಿನ ಸೇವನೆಯು ಮೂತ್ರದಲ್ಲಿ ಕೂಡ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಲಿದೆ. ಅಂತೆಯೇ ಇದು ಮೂತ್ರದ ಸಂಪೂರ್ಣ ಪ್ರಮಾಣವನ್ನು ಹೆಚ್ಚಿಸಲಿದೆ ಎಂದಾಗಿತ್ತು. ಆದರೆ ಇವರುಗಳು ಕಡಿಮೆ ಪ್ರಮಾಣದ ನೀರು ಸೇವಿಸಿದ್ದು ಮೂತ್ರದಲ್ಲಿರುವ ನೀರಿನ ಪ್ರಮಾಣ ಉಪ್ಪಿನ ಸೇವನೆಯಿಂದ ಉಂಟಾಗಿರುವುದು ಎಂಬುದಾಗಿ ಕಂಡುಬಂದಿದೆ. ಈ ಉಪ್ಪು ಮೂತ್ರದಲ್ಲಿ ಹಾಗೆಯೇ ನಿಲ್ಲಲಿದ್ದು ನೀರು ಕಿಡ್ನಿಗೆ ಮರಳಿ ದೇಹವನ್ನು ತಲುಪುತ್ತದೆ.