Just In
- 44 min ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 53 min ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- News ಮತದಾನಕ್ಕೆ ಕೌಂಟ್ಡೌನ್: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಸಿದ್ಧತೆ ಹೇಗಿದೆ?-ಮಾಹಿತಿ
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೈತರ ಕಪ್ಪು ಬಂಗಾರ, ಕರಿಮೆಣಸು ಕಾಳಿನ ಪವರ್...
ಸಾಂಬಾರ ಕ್ಷೇತ್ರದಲ್ಲಿ ರಾಜನೆನಿಸಿಕೊಂಡಿರುವ ರೈತರ ಕಪ್ಪು ಬಂಗಾರವೆಂದು ಕರೆಯಲ್ಪಡುವ ಕರಿಮೆಣಸು ಯಾವ ಅಡುಗೆ ಮನೆಯಲ್ಲಿ ಹುಡುಕಿದರೂ ಸಿಗದಿರಲು ಸಾಧ್ಯವಿಲ್ಲ. ಇಂತಹ ಕರಿಮೆಣಸು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಆರೋಗ್ಯ ಸ್ನೇಹಿಯೂ ಹೌದು. ಇದರ ಬಗ್ಗೆ ಹಲವಾರು ವರ್ಷಗಳಿಂದ ನಡೆಸುತ್ತಿರುವ ಸಂಶೋಧನೆಗಳಿಂದ ಇದು ಸಾಬೀತಾಗಿದೆ.
ಕರಿಮೆಣಸಿನಲ್ಲಿ ಅಗಾಧ ಪ್ರಮಾಣದ ಔಷಧಿಯ ಗುಣಗಳು ಇವೆ. ಇವು ದೇಹದ ಆರೋಗ್ಯವನ್ನು ಕಾಪಾಡುವುದರೊಂದಿಗೆ ಬೇಸಿಗೆ ಕಾಲದಲ್ಲೂ ನಮ್ಮನ್ನು ಉಲ್ಲಾಸಿತವಾಗಿರುವಂತೆ ಮಾಡುತ್ತದೆ. ಇದು ತಿನ್ನಲು ಖಾರ ಮಾತ್ರ ಆದರೆ ಇದರಲ್ಲಿ ಗುಣಗಳು ನಮ್ಮ ಆರೋಗ್ಯಕ್ಕೆ ಹೆಚ್ಚು ಲಾಭಕಾರಿ. ಇದರ ನೀರನ್ನು ಪ್ರತಿದಿನ ಸೇವಿಸುತ್ತಾ ಇದ್ದರೆ ಮತ್ತೆ ನಿಮಗೆ ವೈದ್ಯರನ್ನು ಕಾಣುವ ಸಂದರ್ಭವೇ ಬರದು. ಮಧುಮೇಹ ಮತ್ತು ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟುವಲ್ಲಿ ಇದು ಸಹಕಾರಿಯಾಗಿದೆ. ಹಾಗಾದರೆ ಇನ್ನೇಕೆ ತಡ, ತಕ್ಷಣ ಕರಿಮೆಣಸಿನ ನೀರು ಮಾಡಿ ಕುಡಿಯಿರಿ, ಆರೋಗ್ಯ ವೃದ್ಧಿಸಿ. 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!
ಕರಿಮೆಣಸಿನ
ನೀರನ್ನು
ತಯಾರಿಸುವುದು
ಹೇಗೆ?
ಒಂದು
ಪಾತ್ರೆಗೆ
ಎರಡು
ಲೋಟ
ನೀರು
ಹಾಕಿ.
ಈ
ನೀರಿಗೆ
ಎರಡು
ಚಮಚ
ಕರಿಮೆಣಸಿನ
ಹುಡಿ
ಹಾಕಿ.
ತದನಂತರ
ಕರಿಮೆಣಸಿನ
ಹುಡಿಯನ್ನು
ನೀರಿನಲ್ಲಿ
ಕುದಿಸಿ
ಮತ್ತು
ಅದಕ್ಕೆ
ಸ್ವಲ್ಪ
ಉಪ್ಪು
ಮತ್ತು
ಎರಡು
ಗುಲಾಬಿ
ಎಸಲುಗಳನ್ನು
ಹಾಕಿ.
ಇದನ್ನು
ತೆಗೆದು
ಸೋಸಿಕೊಳ್ಳಿ
ಮತ್ತು
ಬಿಸಿಯಾಗಿರುವಾಗಲೇ
ಅದನ್ನು
ಕುಡಿಯಿರಿ.
ಇದನ್ನು
ಬಿಸಿ
ಅಥವಾ
ತಂಪಾಗಿರುವಾಗಲೇ
ಕುಡಿಯಿರಿ...
ಶಕ್ತಿ ವೃದ್ಧಿಸುವುದು
ಬೇಸಿಗೆಯಲ್ಲಿ ಕರಿಮೆಣಸಿನ ನೀರನ್ನು ಕುಡಿಯುವುದು ತುಂಬಾ ಆರೋಗ್ಯಕಾರಿ. ನಿಮಗೆ ತುಂಬಾ ಬೆವರಿದಾಗ ಅಥವಾ ಶಕ್ತಿ ಕಳೆದುಕೊಂಡಾಗ ಕರಿಮೆಣಸಿನ ನೀರನ್ನು ಕುಡಿದರೆ ದೇಹಕ್ಕೆ ಮರಳಿ ಶಕ್ತಿ ಬರುವುದು.
ಮಲಬದ್ಧತೆ ನಿವಾರಣೆ
ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯ. ಮಲಬದ್ಧತೆ ನಿವಾರಣೆಗೆ ಕರಿಮೆಣಸಿನ ನೀರನ್ನು ದಿನಕ್ಕೆ ಎರಡು ಸಲ ಕುಡಿಯಬೇಕು. ಇದು ಮಲವು ಸರಾಗವಾಗಿ ಹೋಗಲು ನೆರವಾಗುವುದು.
ನಿರ್ಜಲೀಕರಣ ನಿವಾರಣೆ
ಇತರ ಹಲವಾರು ಸಮಸ್ಯೆಗಳೊಂದಿಗೆ ನಿರ್ಜಲೀಕರಣವು ಉಂಟಾಗುವುದು. ನಿರ್ಜಲೀಕರಣವಾದಾಗ ದೇಹದ ಅಂಗಾಂಗಗಳು ನಿಧಾನವಾಗಿ ತಮ್ಮ ಶಕ್ತಿಯನ್ನು ಕಳಕೊಳ್ಳುವುದು. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ನೀವು ಕರಿಮೆಣಸಿನ ನೀರನ್ನು ಕುಡಿದರೆ ನಿರ್ಜಲೀಕರಣವನ್ನು ತಡೆಯಬಹುದು.
ತೂಕ ಕಳೆದುಕೊಳ್ಳಲು ಸಹಕಾರಿ
ತೂಕ ಕಳೆದುಕೊಳ್ಳಬೇಕೆಂದರೆ ಕರಿಮೆಣಸಿನ ನೀರನ್ನು ಬಳಸುವುದು ತುಂಬಾ ಮುಖ್ಯ. ಇದು ತುಂಬಾ ಖಾರವಾಗಿರುವ ನೀರಾಗಿರುವ ಕಾರಣ ದೇಹವು ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲರಿ ದಹಿಸುತ್ತದೆ.
ತಿನ್ನುವ ಬಯಕೆ ತಡೆಯುವುದು
ತಿನ್ನುವ ಬಯಕೆಯಿಂದಾಗಿ ನೀವು ಹೆಚ್ಚಿನ ತೂಕವನ್ನು ಪಡೆಯುತ್ತೀರಿ. ಕರಿಮೆಣಸಿನ ನೀರಿನಿಂದ ಇದನ್ನು ತಡೆಯಬಹುದಾಗಿದೆ. ಇದು ಹೆಚ್ಚಿನ ಖಾರವನ್ನು ಹೊಂದಿರುವ ಕಾರಣ ತಿನ್ನುವ ಬಯಕೆಯನ್ನು ಕ್ಷಣ ಮಾತ್ರದಲ್ಲಿ ತಡೆಯುವುದು.
ಮೂಳೆಗಳಿಗೆ ಒಳ್ಳೆಯದು
ಮೂಳೆಗಳ ನೋವಿನಿಂದ ನೀವು ಬಳಲುತ್ತಿದ್ದೀರಾ? ಹಾಗಾದರೆ ಕರಿಮೆಣಸಿನ ನೀರನ್ನು ಕುಡಿಯಿರಿ. ನಿಮಗೆ ವಯಸ್ಸಾಗುತ್ತಿರುವಂತೆ ಇದು ನಿಮ್ಮ ಮೂಳೆಗಳನ್ನು ರಕ್ಷಿಸುವುದು.
ಅನಾರೋಗ್ಯದಿಂದ ಮುಕ್ತಿ
ದಿನದಲ್ಲಿ ಎರಡು ಸಲ ಈ ನೀರನ್ನು ಕುಡಿದರೆ ಕ್ಯಾನ್ಸರ್ ಹಾಗೂ ಮಧುಮೇಹದಂತಹ ರೋಗಗಳಿಂದ ನಿಮ್ಮನ್ನು ಇದು ದೂರವಿಡುವುದು. ಇದು ಚಯಾಪಚಾಯ ಕ್ರಿಯೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವುದು. ದಿನಾಲೂ ಕರಿಮೆಣಸಿನ ನೀರನ್ನು ಕುಡಿದು ಇದರ ಲಾಭ ಪಡೆದುಕೊಳ್ಳಿ.