Just In
- 33 min ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 1 hr ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 3 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 5 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
Don't Miss
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Movies STD ಬೂತ್ನಲ್ಲಿ ಕೆಲಸ ಮಾಡುವಾಗ 500 ರೂ. ಸಂಬಳ; ಶೋ ಆರಂಭಿಸಿದ ಮೇಲೆ ಗಳಿಸಿದ್ದೆಷ್ಟು ಕೋಟಿ?
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಪ್ಪಾಯಿ ಬೀಜದಲ್ಲಿದೆ, ಸರ್ವ ರೋಗ ನಿಯಂತ್ರಿಸುವ ಪವರ್
ಪಪ್ಪಾಯಿ ಹಣ್ಣು ಎಂದರೇ ನಮ್ಮಲ್ಲಿ ಹೆಚ್ಚಿನವರಿಗೆ ಇಷ್ಟವಿಲ್ಲದ ಹಣ್ಣು. ಅದರಲ್ಲೂ ಪಪ್ಪಾಯಿಯ ಬೀಜವೇ? ಇಸ್ಸೀ.. ಎಂದೇ ಮೂಗು ಮುರಿಯಬಹುದು. ಕೆಲ ವರ್ಷಗಳ ಹಿಂದಿನವರೆಗೂ ಮಲೆನಾಡಿನ ಅಪ್ಪಟ ಸಾಂಬಾರ ಪದಾರ್ಥವಾಗಿದ್ದ ಕಾಳುಮೆಣಸಿಗೆ ವಿಶ್ವಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಮತ್ತು ಬೆಲೆ ಇತ್ತು. ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ
ಆದರೆ ಲಾಭಕೋರತನ ಮನೋಭಾವದ ವ್ಯಾಪಾರಿಗಳು ನೋಡಲು ಕೊಂಚ ಕಾಳುಮೆಣಸಿನಂತೆಯೇ ಇರುವ ಪಪ್ಪಾಯಿ ಬೀಜಗಳನ್ನು ಚೆನ್ನಾಗಿ ಒಣಗಿಸಿ ಕಲಬೆರಕೆ ಮಾಡಿ ವಿದೇಶಕ್ಕೆ ಕಳುಹಿಸಿದ್ದರ ಪರಿಣಾಮವಾಗಿ ಭಾರತದ ಅಷ್ಟೂ ಕಾಳುಮೆಣಸನ್ನು ಅಲ್ಲಿನ ಗುಣಮಟ್ಟ ತಂತ್ರಜ್ಞರು ನಿರಾಕರಿಸಿದ್ದರಿಂದ ಭಾರತ ವಿಶ್ವಮಾರುಕಟ್ಟೆಯಲ್ಲಿ ಮುಜುಗರ, ಅವಮಾನ ಮತ್ತು ಕವಡೆಕಾಸಿನ ಬೆಲೆಗೆ ನಮ್ಮ ಕಾಳುಮೆಣಸನ್ನು ಮಾರಬೇಕಾಗಿ ಬಂದಿತ್ತು. ಇದೇ ಕಾರಣಕ್ಕೆ ಇಂದು ಕಾಳುಮೆಣಸಿಗೆ ಬೆಲೆ ಇಳಿದಿರುವುದು. ಇದೇ ರೀತಿ ವನಿಲ್ಲಾದಲ್ಲಿ ತಂತಿಯ ತುಂಡುಗಳನ್ನೂ ಸೇರಿಸಿ ಇದನ್ನೂ ಅಧ್ವಾನವಾಗಿಸಿದ್ದಾರೆ.
ಆದರೆ ಕೆಲಸಕ್ಕೆ ಬಾರದು ಎಂದು ಪಪ್ಪಾಯಿಯ ಬೀಜಗಳನ್ನು ಏಕಾಏಕಿ ಕಳಪೆ ಎನ್ನಲಾಗದು. ಏಕೆಂದರೆ ಇತ್ತೀಚಿನ ಸಂಶೋಧನೆಗಳು ಇದರಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಎನ್ನುತ್ತವೆ. ವಿಶೇಷವಾಗಿ ಹೊಟ್ಟೆಹುಳದ ತೊಂದರೆಗೆ ಇದೊಂದು ಸಮರ್ಥ ಮದ್ದು ಎಂದು ತಿಳಿಸುತ್ತಿವೆ. ಉತ್ತಮ ಪರಿಣಾಮಕ್ಕಾಗಿ ಪಪ್ಪಾಯಿ ಹಣ್ಣಿನಿಂದ ನಿವಾರಿಸಿದ ಹಸಿಬೀಜವನ್ನು ನುಂಗಬೇಕು. ಆದರೆ ಇದು ಅತಿ ಕಹಿಯಾಗಿರುವ ಕಾರಣ ಇದನ್ನು ಅರೆದು ನಯವಾದ ಲೇಪನಮಾಡಿ ಇತರ ಸಾಲಾಡ್ಗಳೊಂದಿಗೆ ಸೇರಿಸಿ ಸೇವಿಸಬಹುದು. ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!
ಪ್ರಮುಖ
ಎಚ್ಚರಿಕೆ
ಎಂದರೆ
ಪಪ್ಪಾಯಿ
ಹಣ್ಣನ್ನಾಗಲೀ,
ಕಾಯಿಯನ್ನಾಗಲೀ,
ಬೀಜವನ್ನಾಗಲೀ
ಗರ್ಭಿಣಿಯರು,
ಹಾಲೂಣಿಸುತ್ತಿರುವ
ತಾಯಿಯರು
ಮತ್ತು
ಗರ್ಭಧರಿಸುವ
ಪ್ರಯತ್ನದಲ್ಲಿರುವವರು
ಸರ್ವಥಾ
ಸೇವಿಸಕೂಡದು.
ಅಲ್ಲದೇ
ಮಕ್ಕಳೂ
ವೈದ್ಯರ
ಸಲಹೆಯ
ಹೊರತಾಗಿ
ಈ
ಬೀಜಗಳನ್ನು
ಸೇವಿಸಬಾರದು.
ಆದರೆ
ಹಣ್ಣನ್ನು
ಸೇವಿಸಬಹುದು.
ಏಕೆಂದರೆ
ಇದರ
ಬೀಜದಲ್ಲಿರುವ
ರಾಸಯನಿಕಗಳು
ಪ್ರಬಲವಾಗಿದ್ದು
ಮಕ್ಕಳ
ಕೋಮಲ
ಅಂಗಗಳಿಗೆ
ಹಾನಿಯುಂಟುಮಾಡಬಹುದು.
ಬನ್ನಿ,
ಈ
ಬೀಜಗಳ
ಪ್ರಯೋಜನಗಳ
ಬಗ್ಗೆ
ಅರಿಯೋಣ..
ಪ್ರಯೋಜನ #1
ಪಪ್ಪಾಯಿ ಬೀಜಗಳಲ್ಲಿಯೂ ಪಪಾಯಿನ್ ಎಂಬ ಅಂಶವಿದ್ದು ಇದು ಜೀರ್ಣಕ್ರಿಯೆಗೆ ಅಪಾರವಾದ ಸಹಾಯ ಮಾಡುತ್ತದೆ.
ಪ್ರಯೋಜನ #2
ಹೊಟ್ಟೆಯಲ್ಲಿ ಹುಳಗಳಿದ್ದರೆ ದಿನಕ್ಕೆ ಎರಡು ಬಾರಿ ಸುಮಾರು ಹತ್ತರಷ್ಟು ಬೀಜಗಳನ್ನು ಅರೆದು ತಿನ್ನಬೇಕು. ಇದರಲ್ಲಿರುವ ತೀಕ್ಷ್ಣ ರಾಸಾಯನಿಕಗಳು ಹೊಟ್ಟೆ, ಕರುಳು, ಅಪೆಂಡಿಕ್ಸ್ ಮೊದಲಾದೆಡೆ ಅಡಗಿ ಕುಳಿತಿದ್ದ ಕ್ರಿಮಿಗಳನ್ನು ನಾಶಪಡಿಸುತ್ತದೆ. ಸರಿಸುಮಾರು ತನ್ನ ಬಾಯಿಯಿಂದ ಕರುಳಿನ ಒಳಭಾಗವನ್ನು ಕಚ್ಚಿಹಿಡಿದು ಹೊರಬರಲು ನಿರಾಕರಿಸುವ ಲಾಡಿಹುಳಕ್ಕೂ ಈ ಬೀಜಗಳು ತಕ್ಕ ಬುದ್ಧಿ ಕಲಿಸಿ ಹೊರಹಾಕುತ್ತವೆ.
ಪ್ರಯೋಜನ #3
ಪಪ್ಪಾಯಿ ಬೀಜಗಳು ನೈಸರ್ಗಿಕವಾದ ಸಂತಾನನಿಯಂತ್ರಕಗಳಾಗಿದ್ದು ಇದರ ಸೇವನೆಯಿಂದ ಪುರುಷರಲ್ಲಿ ವೀರ್ಯದ ಪ್ರಾಬಲ್ಯವನ್ನು ಕಡಿಮೆಗೊಳಿಸಿ ಗರ್ಭಾಂಕುರವಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
ಪ್ರಯೋಜನ #4
ಕೆಲವು ಬಗೆಯ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಯಲು ಈ ಬೀಜಗಳು ಸಮರ್ಥವಾಗಿವೆ.
ಪ್ರಯೋಜನ #5
ಈ ಬೀಜಗಳು ಉತ್ತಮವಾದ ಉರಿಯೂತ ನಿವಾರಕಗಳಾಗಿರುವ ಕಾರಣ ಸಂಧಿವಾತ, ಸಂಧಿಗಳಲ್ಲಿ ಉರಿ, ನೋವು, ಬಾವು ಮೊದಲಾದ ತೊಂದರೆಗಳನ್ನು ಕಡಿಮೆಗೊಳಿಸುತ್ತದೆ.
ಪ್ರಯೋಜನ #6
ಕೆಲವು ಮಾರಕ ಬ್ಯಾಕ್ಟೀರಿಯಾಗಳಾದ ಸ್ಟಾಫ್, ಈ ಕೊಲೈ, ಸಾಲ್ಮೋನೆಲ್ಲಾ ಮೊದಲಾದವುಗಳ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ಈ ಬ್ಯಾಕ್ಟೀರಿಯಾಗಳಿಂದ ಎದುರಾಗುವ ಟೈಫಾಯ್ಡ್, ಡೆಂಗ್ಯೂ ಮತ್ತಿತರ ವೈರಸ್ ಆಧಾರಿತ ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ.
ಪ್ರಯೋಜನ #7
ಈ ಬೀಜಗಳ ಸೇವನೆಯಿಂದ ಯಕೃತ್ನ ಜೀವಕೋಶಗಳು ನಿಧಾನವಾಗಿ ಮರಗಟ್ಟಿ ನಿಶ್ಚೇಷ್ಟಿತಗೊಳಿಸುವ cirrhosis of the liver ಎಂಬ ತೊಂದರೆಯಿಂದ ರಕ್ಷಣೆ ಪಡೆಯಬಹುದು. ಉತ್ತಮ ಪರಿಣಾಮಕ್ಕಾಗಿ ಈ ಬೀಜಗಳನ್ನು ಕೊಂಚ ಲಿಂಬೆರಸದೊಂದಿಗೆ ಸೇವಿಸಬೇಕು.
ಪ್ರಯೋಜನ #8
ಈ ಬೀಜಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಮೂತ್ರಪಿಂಡಗಳೂ ಸುಸ್ಥಿತಿಯಲ್ಲಿರುತ್ತವೆ.
ಪರಾವಲಂಬಿ ಕ್ರಿಮಿಗಳನ್ನು ಕೊಲ್ಲುತ್ತದೆ
ಕೆಲವೊಮ್ಮೆ ಕರುಳುಗಳಲ್ಲಿರುವ ಲಾಡಿಹುಳ ಮೊದಲಾದವು ಎಷ್ಟು ಗಟ್ಟಿಯಾಗಿ ಅಂಟಿಕೊಂಡಿರುತ್ತವೆ ಎಂದರೆ ಸುಲಭವಾಗಿ ನಿವಾರಣೆ ಸಾಧ್ಯವಿಲ್ಲ. ಇದಕ್ಕೆ ಸಾಮಾನ್ಯವಾಗಿ ಮಿಲ್ಕ್ ಆಫ್ ಮೆಗ್ನೀಶಿಯಾ ಎಂಬ ದ್ರವವನ್ನು ನೀಡಲಾಗುತ್ತದೆ. ಕ್ಷಾರೀಯವಾದ ಈ ದ್ರವ ಕ್ರಿಮಿಯನ್ನು ಸಡಿಲಿಸಿ ವಿಸರ್ಜನೆ ಮೂಲಕ ದೇಹದಿಂದ ಹೊರಹಾಕುತ್ತದೆ. ಆದರೆ ಈ ದ್ರವ ಇಲ್ಲದಿದ್ದಾಗ ಪಪ್ಪಾಯಿ ಬೀಜದ ಪುಡಿ ಸೇರಿಸಿದ ಹಾಲು ಅಥವಾ ನೀರು ಸಹಾ ಇದೇ ಕೆಲಸ ಮಾಡುತ್ತದೆ.
ಸಂಧಿವಾತಕ್ಕೂ ಉತ್ತಮ
ಇದರ ಉರಿಯೂತ ನಿವಾರಕ ಗುಣ ಸಂಧಿವಾತವನ್ನು ಗುಣಪಡಿಸಲು ಮತ್ತು ಮೂಳೆಗಳು ಹೆಚ್ಚಿನ ದೃಢತೆ ಪಡೆಯಲು ನೆರವಾಗುತ್ತದೆ.
ಆದ್ದರಿಂದ ಇಷ್ಟೆಲ್ಲಾ ಉಪಯೋಗಗಳನ್ನು ಹೊಂದಿರುವ ಪಪ್ಪಾಯಿ ಬೀಜವನ್ನು ಮುಂದಿನ ಬಾರಿ ಪಪ್ಪಾಯಿ ಹಣ್ಣನ್ನು ಕತ್ತರಿಸಿದ ಬಳಿಕ ಅದರ ಕಪ್ಪು ಬೀಜಗಳನ್ನು ಎಸೆಯದೇ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಬಳಿಕ ಕುಟ್ಟಿ ಪುಡಿಮಾಡಿ ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿದರೆ ಸುಮಾರು ಒಂದು ವರ್ಷದವರೆಗೂ ಉಪಯೋಗಿಸಬಹುದು.