Just In
Don't Miss
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎದೆಯುರಿ ಸಮಸ್ಯೆ- ಒಂದೆರಡು ದಿನಗಳಲ್ಲಿಯೇ ನಿಯಂತ್ರಣಕ್ಕೆ!
ಎದೆಯ ನಟ್ಟನಡುವಿನಲ್ಲಿ ಉರಿ ಅಥವಾ ತೀಕ್ಷ್ಣವಾದ ನೋವು ಕಾಣಿಸಿಕೊಂಡರೆ ಅದು ಬಹುತೇಕ ಎದೆಯುರಿಯ (heartburn) ಪ್ರಭಾವವಾಗಿರಬಹುದು. ಇದು ಹೊಟ್ಟೆಯ ಮೇಲ್ಭಾಗದಿಂದ ಹಿಡಿದು ಗಂಟಲವರೆಗೂ ವ್ಯಾಪಿಸಬಹುದು... ಮುಂದೆ ಓದಿ
ಎದೆಯುರಿ ಅಥವಾ ಹೊಟ್ಟೆಯ ಉರಿ ಊಟದ ಬಳಿಕ ಎದುರಾಗುವ ಸಾಮಾನ್ಯ ತೊಂದರೆಯಾಗಿದ್ದು ಹೊಟ್ಟೆಯಲ್ಲಿ ಅಜೀರ್ಣತೆಯಿಂದ ಉಂಟಾದ ಆಮ್ಲೀಯ ಗಾಳಿ ಅನ್ನನಾಳದ ಮೂಲಕ ಹೊರಬರಲು ಯತ್ನಿಸುವಾಗ ಹೊಟ್ಟೆಯ ಮೇಲ್ಭಾಗ ಮತ್ತು ಅನ್ನನಾಳದ ಒಳಗೆ ಮಾಡುವ ಉರಿಯಾಗಿದೆ. ಇನ್ನು ಎದೆಯುರಿ ಸಮಸ್ಯೆಗೆ ದಯವಿಟ್ಟು ಕಂಗಾಲಾಗದಿರಿ!
gastro esophageal reflux disease ಎಂದು ಕರೆಯಲಾಗುವ ಈ ಸ್ಥಿತಿ ಬಂದಾಗ ತಡೆಯಲು ಸಾಧ್ಯವಾಗದೇ ಉರಿ ಅನುಭವಿಸಬೇಕಾಗುತ್ತದೆ. ಬನ್ನಿ, ಈ ತೊಂದರೆಯನ್ನು ಸುಲಭ ಮನೆಮದ್ದುಗಳಿಂದ ಹೇಗೆ ಶಮನಿಸಬಹುದು ಎಂಬುದನ್ನು ನೋಡೋಣ...
ಎದೆಯುರಿ ಎಂದರೇನು?
ಹುಳಿತೇಗು, ಎದೆಯುರಿ, ಹೊಟ್ಟೆಯುರಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ತೊಂದರೆ ಎದೆಯ ಮೇಲ್ಭಾಗ ಅಂದರೆ ಗಂಟಲಿನ ಕೊಂಚವೇ ಕೆಳಗೆ ಅತೀವ ಉರಿಯನ್ನು ಉಅಂಟುಮಾಡುತ್ತದೆ. ಇದಕ್ಕೆ ಹೊಟ್ಟೆಯಲ್ಲಿ ಉತ್ಪತ್ತಿಯಾದ ಆಮ್ಲೀಯ ರಸ ಮತ್ತು ವಾಯುಗಳು ಕಾರಣವಾಗಿದ್ದು ಒತ್ತಡ ತಾಳಲಾರದೇ ಮೇಲ್ಮುಖವಾಗಿ ಒತ್ತಲ್ಪಡುತ್ತವೆ. ಇದಕ್ಕೆ ಆಸಮರ್ಪಕವಾದ ಆಹಾರಗಳ ಸಂಯೋಜನೆ, ಆಸಮರ್ಪಕ ಭಂಗಿಯಲ್ಲಿ ಪವಡಿಸುವುದು, ಹೊಟ್ಟೆಯ ಭಾಗದಲ್ಲಿ ಒತ್ತಡ ಹೇರುವುದು ಮೊದಲಾದವು ಎದೆಯುರಿಗೆ ಕಾರಣವಾಗಿದೆ. ಎದೆಯುರಿಗೆ pyrosis, cardialgia, ಅಥವಾ acid indigestion ಎಂಬ ಹೆಸರುಗಳೂ ಇವೆ.
ಎದೆಯುರಿಗೆ ಪರಿಹಾರ
ಅರ್ಧ ಲಿಂಬೆಯ ರಸ ಅಥವಾ ಒಂದು ದೊಡ್ಡ ಚಮಚ ಲಿಂಬೆಯ ಸಿದ್ಧ ರಸವನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಇದಕ್ಕೆ ಕೊಂಚ ಜೇನು ಸೇರಿಸಿ ಬೆಳಿಗ್ಗೆದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಕುಡಿದರೆ ರಾತ್ರಿಯ ಊಟದ ಪರಿಣಾಮವಾಗಿ ಉಂಟಾಗಿದ್ದ ಎದೆಯುರಿ ಕಡಿಮೆಯಾಗುತ್ತದೆ.
ಏಳೆಂಟು ಒಣದ್ರಾಕ್ಷಿ
ಒಂದು ವೇಳೆ ಈ ವಿಧಾನ ಇಷ್ಟವಾಗದಿದ್ದರೆ ಅಥವಾ ಮಧ್ಯಾಹ್ನದ ಊಟದ ಬಳಿಕ ತೊಂದರೆ ಎದುರಾದರೆ ಸುಮಾರು ಏಳೆಂಟು ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಊಟದ ಬಳಿಕ ನೀರಿನ ಸಹಿತ ಕುಡಿಯಬೇಕು. ಈ ನೀರನ್ನೂ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ದಿನದ ಆಹಾರಗಳ ಸೇವನೆಯಿಂದ ಎದೆಯುರಿ ಉಂಟಾಗುವುದಿಲ್ಲ.
ದಿನಕ್ಕೊಂದು ಬಾಳೆಹಣ್ಣು ತಿನ್ನಿ
ಊಟದ ಬಳಿಕ ಬಾಳೆಹಣ್ಣನ್ನು ತಿನ್ನುವ ಮೂಲಕ ಆಮ್ಲ ಉತ್ಪತ್ತಿಯಾಗದೇ ಇರಲು ಸಾಧ್ಯವಾಗುತ್ತದೆ. ಅಲ್ಲದೇ ಹೊಟ್ಟೆ ತುಂಬಿದಂತೆ ಅನ್ನಿಸುವುದರಿಂದ ಅನಗತ್ಯವಾಗಿ ಹೆಚ್ಚಿನ ಆಹಾರ ಸೇವನೆಯನ್ನು ತಡೆಯುತ್ತದೆ.
ತುಳಸಿ ಎಲೆಗಳನ್ನು ಜಗಿಯಿರಿ
ಎದೆಯುರಿಯನ್ನು ತಕ್ಷಣ ಕಡಿಮೆಗೊಳಿಸಲು ಉತ್ತಮ ವಿಧಾನವೆಂದರೆ ತುಳಸಿ ಎಲೆಗಳನ್ನು ಜಗಿಯುವುದು. ಅದರಲ್ಲೂ ಎದೆಯುರಿಯೊಂದಿಗೆ ವಾಕರಿಕೆಯೂ ಆವರಿಸಿದ್ದರೆ ಈ ಎಲೆಗಳು ತಕ್ಷಣ ಶಮನ ನೀಡುತ್ತವೆ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶೀತ ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತವೆ.ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?
ತಣ್ಣಗಿನ ಹಸಿ ಹಾಲು ಕುಡಿಯಿರಿ
ತಕ್ಷಣಕ್ಕೆ ಎದೆಯುರಿಯನ್ನು ಶಮನಗೊಳಿಸಲು ಇನ್ನೊಂದು ಸಮರ್ಥ ವಿಧಾನವೆಂದರೆ ತಣ್ಣಗಿನ ಹಸಿ ಹಾಲನ್ನು ಕುಡಿಯುವುದು. ಇದರಿಂದಲೂ ಎದೆಯುರಿ ಮತ್ತು ವಾಕರಿಕೆ ತಕ್ಷಣ ಕಡಿಮೆಯಾಗುತ್ತದೆ.