Just In
- 1 hr ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 1 hr ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 2 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 6 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು
ಸಾಮಾನ್ಯವಾಗಿ ತರಕಾರಿ ಅಂಗಡಿಯಲ್ಲಿ ಕಡಿಮೆ ಮಾರಾಟವಾಗುವ ತರಕಾರಿ ಎಂದರೆ ಮೂಲಂಗಿ. ಏಕೆಂದರೆ ಅಗ್ಗ ಎಂಬ ಕಾರಣಕ್ಕೆ ಹೋಟೆಲಿನಲ್ಲಿ ಸಾಂಬಾರ್ ಮಾಡಲು ಹೆಚ್ಚು ಬಳಸುವುದು ಒಂದು ಕಾರಣವಾದರೆ, ಇದು ಹಸಿಯಾಗಿ ಸೇವಿಸಿದಾಗ ಕೊಂಚ ಖಾರವಿದ್ದು ಇದಕ್ಕಿಂತ ನೋಡಲು ಸುಂದರವಾಗಿರುವ ಕ್ಯಾರೆಟ್ ಮತು ಬೀಟ್ರೂಟ್ಗಳತ್ತ ಮನ ಬದಲಿಸುತ್ತಾರೆ. ಎಲ್ಲಾ ತರಕಾರಿಗಳಿಗೂ ಇರುವ ಒಳ್ಳೆಯ ಗುಣಗಳಂತೆಯೇ ಮೂಲಂಗಿಯಲ್ಲಿಯೂ ಉತ್ತಮ ಗುಣವಿದೆ. ಅದೆಂದರೆ ಮೂಲವ್ಯಾಧಿಯನ್ನು ಗುಣಪಡಿಸುವ ಮತ್ತು ಮರುಕಳಿಸದಂತೆ ಕಾಪಾಡುವ ಗುಣ. ಈ ವಿಧಾನದಿಂದ ಮೂಲವ್ಯಾಧಿ ಗುಣಪಡಿಸಬಹುದು
ಮೂಲವ್ಯಾಧಿ ಅಥವಾ ಇದಕ್ಕೆ ಸಂಬಂಧಿತ ತೊಂದರೆಯಿಂದ ಬಳಲುತ್ತಿರುವವರೆಗೆ ಮೂಲಂಗಿ ಆಹಾರಕ್ಕಿಂತಲೂ ಹೆಚ್ಚಾಗಿ ಔಷಧಿಯ ರೂಪದಲ್ಲಿಯೇ ಅಪ್ಯಾಯಮಾನವಾಗಿದೆ. ಒಂದು ವೇಳೆ ನಿಮಗೆ ಮೂಲವ್ಯಾಧಿ ಇದ್ದರೆ ಅಥವಾ ಈಗತಾನೇ ಪ್ರಾರಂಭವಾಗಿರುವ ಸೂಚನೆಗಳು ಸಿಕ್ಕರೆ ತಕ್ಷಣ ಇಂದಿನಿಂದಲೇ ನಿಮ್ಮ ದಿನದ ಊಟದಲ್ಲಿ ಮೂಲಂಗಿ ಸೇರಿಸಿಕೊಳ್ಳಲು ಮರೆಯಬೇಡಿ. ಮೂಲವ್ಯಾಧಿ ನಿವಾರಣೆಗೆ 20 ರೀತಿಯ ಮನೆಮದ್ದು
ಆದರೆ
ನೀವು
ಈಗ
ತೆಗೆದುಕೊಳ್ಳುತ್ತಿರುವ
ಔಷಧಿಯನ್ನು
ನಿಲ್ಲಿಸಬಾರದು,
ಅದನ್ನು
ಎಂದಿನಂತೆ
ಮುಂದುವರೆಸಿಕೊಂಡು
ಹೋಗಬೇಕು,
ಜೊತೆಯಲ್ಲಿ
ಮೂಲಂಗಿಯನ್ನೂ
ಆಹಾರದೊಡನೆ
ಸೇರಿಸಿಕೊಳ್ಳಬೇಕು.
ಇದರಿಂದ
ಮೂಲವ್ಯಾಧಿ
ಗುಣಪಡುವ
ವೇಗ
ವೃದ್ಧಿಗೊಂಡು
ಅತಿ
ಶೀಘ್ರದಲ್ಲಿ
ಸಾಮಾನ್ಯಸ್ಥಿತಿಗೆ
ಬರುತ್ತದೆ.
ಇದು
ಹೇಗೆ
ಸಹಾಯಕರವಾಗಿದೆ
ಎಂಬುದನ್ನು
ಕೆಳಗಿನ
ಸ್ಲೈಡ್
ಶೋನಲ್ಲಿ
ವಿವರಿಸಲಾಗಿದೆ
ಮುಂದೆ
ಓದಿ...
ಉತ್ತಮ ಪ್ರಮಾಣದ ನಾರಿನಾಂಶಗಳನ್ನು ಒಳಗೊಂಡಿದೆ
ಮೂಲಂಗಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಇದು ಮಲವನ್ನು ಸಡಿಲಗೊಳಿಸುವುದು ಮಾತ್ರವಲ್ಲ ಜೀರ್ಣಕ್ರಿಯೆ ಸುಲಭವಾಗುವಂತೆಯೂ ನೋಡಿಕೊಳ್ಳುತ್ತದೆ. ಇದರಲ್ಲಿ ಚಯಾಪಚಯ ಕ್ರಿಯೆಗೆ ಪೂರಕವಾದ ರಾಫ್ಯಾನಿನ್ (raphanin), ಗ್ಲೂಕೋಸಿಲಿನೇಟ್, ವಿಟಮಿನ್ ಸಿ ಮೊದಲಾದವುಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಕರುಳಿನ ಒಳಭಾಗದ ಉರಿಯೂತ ಮತ್ತು ಇದರಿಂದಾಗಿ ಉದ್ಭವವಾಗಿದ್ದ ಮೂಲವ್ಯಾಧಿಯ ಗಂಟುಗಳನ್ನು ಕರಗಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಉತ್ತಮ ಪ್ರಮಾಣದ ನಾರಿನಾಂಶಗಳನ್ನು ಒಳಗೊಂಡಿದೆ
ಇದರಲ್ಲಿ ಕೆಲವು ಆವಿಯಾಗುವ ತೈಲಗಳಿದ್ದು ಕರುಳಿನ ಊತವನ್ನು ಮತ್ತು ತುರಿಕೆಯನ್ನು ನಿವಾರಿಸುತ್ತದೆ. ಅಲ್ಲದೇ ಇದರ ಉರಿಯೂತ ನಿವಾರಕ ಗುಣ ಮೂಲವ್ಯಾಧಿಯ ಕಾರಣ ಎದುರಾಗಿದ್ದ ನೋವನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಒಟ್ಟಾರೆಯಾಗಿ ನೋಡುವುದಾದರೆ ಮೂಲವ್ಯಾಧಿ ಮತ್ತು ಇದರಿಂದಾಗುವ ನೋವನ್ನು ಮೂಲಂಗಿ ನಿವಾರಿಸಲು ನೆರವಾಗುತ್ತದೆ.
ಮೂಲಂಗಿಯ ಬಳಕೆ ಹೇಗೆ?
ಮೂಲವ್ಯಾಧಿ ಯಾವ ಮಟ್ಟದಲ್ಲಿದೆ ಎಂಬುದನ್ನು ಅನುಸರಿಸಿ ಬಿಳಿ ಮೂಲಂಗಿಯನ್ನು ಎರಡು ವಿಧಾನಗಳಲ್ಲಿ ಉಪಯೋಗಿಸಬಹುದು.
ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲಿದ್ದರೆ...
ಒಂದು ವೇಳೆ, ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲಿದ್ದರೆ: ಒಂದು ಚಿಕ್ಕಚಮಚ ಜೇನು ಮತ್ತು ನೂರು ಗ್ರಾಂ ಬಿಳಿಮೂಲಂಗಿಯ ತುರಿಗೆ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿ. ಇದರಿಂದ ನೋವು ಒಂದೇ ದಿನದಲ್ಲಿ ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಮೂಲವ್ಯಾಧಿ ಪ್ರಾರಂಭಿಕ ಹಂತದಲ್ಲಿದ್ದರೆ...
ಆಸನದ್ವಾರದ ತುರಿಕೆ, ಮಲಬದ್ಧತೆ ಸಹಾ ಕಡಿಮೆಯಾಗುತ್ತದೆ. ಇದರ ರುಚಿ ನಿಮಗೆ ಹಿಡಿಸದೇ ಇದ್ದರೆ ಮೂಲಂಗಿಯನ್ನು ಮಿಕ್ಸಿಯಲ್ಲಿ ನೀರಿನೊಂದಿಗೆ ಗೊಟಾಯಿಸಿ ಇದಕ್ಕೆ ಕೊಂಚವೇ ಉಪ್ಪು ಸೇರಿಸಿ ದಿನಕ್ಕೆ ಎರಡು ಬಾರಿ ಒಂದೊಂದು ಲೋಟ ಕುಡಿಯಬಹುದು.
ಮೂಲವ್ಯಾಧಿ ಈಗಾಲೇ ವ್ಯಾಪಿಸಿದ್ದರೆ...
ಒಂದು ವೇಳೆ ಮೂಲವ್ಯಾಧಿ ಈಗಾಲೇ ವ್ಯಾಪಿಸಿದ್ದರೆ, ಹೀಗೆ ಮಾಡಿ ಒಂದು ಮೂಲಂಗಿಯನ್ನು ಚೆನ್ನಾಗಿ ಅರೆದು ಲೇಪನ ತಯಾರಿಸಿ. ಅರೆಯಲು ನೀರಿನ ಬದಲು ಹಾಲನ್ನು ಬಳಸಿ. ಈ ಲೇಪನವನ್ನು ಮೂಲವ್ಯಾಧಿ ಇದ್ದೆಡೆ ಲೇಪಿಸಿ. ಇದರಿಂದ ನೋವು, ಊತ ಮತ್ತು ತುರಿಕೆ ಶೀಘ್ರವಾಗಿ ಕಡಿಮೆಯಾಗುತ್ತದೆ.