Just In
- 17 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಟಲು ನೋವಿನ ಕಿರಿಕಿರಿಯೇ? ಹಾಗಾದರೆ ಇನ್ನು ಚಿಂತೆ ಬಿಡಿ!
ಕಿರಿಕಿರಿ ತರಿಸುವ ತೊಂದರೆಗಳು ಎಂದರೆ ಸೋರುವ ಮೂಗು, ಗಂಟಲಲ್ಲಿ ತುರಿಕೆ ಇತ್ಯಾದಿ. ನಾಲ್ಕು ಜನರ ನಡುವೆ ಇರುವಾಗ ಗಂಟಲಲ್ಲಿ ತುರಿಕೆಯಾದರೆ ಕೆಮ್ಮಲೂ ಆಗದೇ ಕೆಮ್ಮದಿರಲೂ ಆಗದೇ ಇಬ್ಬಂದಿ ಅನುಭವಿಸುವಂತಾಗುತ್ತದೆ. ತಕ್ಷಣ ಇದನ್ನು ಕಡಿಮೆ ಮಾಡಬೇಕೆಂದರೆ ಹೇಗೆ ಎಂದು ಆ ಕ್ಷಣ ಎಲ್ಲರೂ ಯೋಚಿಸುತ್ತಾರೆ.
ಆದರೆ ಹೊರಬಂದ ಬಳಿಕ ಮರೆತೇ ಬಿಡುತ್ತಾರೆ. ಜಾಣರು ಮಾತ್ರ ಮರೆಯದೇ ಇದಕ್ಕೆ ಸೂಕ್ತ ವಿಧಾನವನ್ನು ಅನುಸರಿಸುತ್ತಾರೆ. ನೀವು ಜಾಣರಾಗಬೇಕಾದರೆ ಹಲವಾರು ವರ್ಷಗಳಿಂದ ನಮ್ಮ ಹಿರಿಯರು ಈ ತೊಂದರೆಯನ್ನು ಹೇಗೆ ಸಮರ್ಥವಾಗಿ ನಿಭಾಯಿಸಿದ್ದರು ಎಂಬುದನ್ನು ಕಂಡುಕೊಂಡರೆ ಸಾಕು. ನಿಮಗೆ ಸೂಕ್ತವಾದ ವಿಧಾನ ಅನುಸರಿಸಿದರೆ ಈ ಗಂಟಲ ಕೆರೆತ ಸುಲಭವಾಗಿ ಇಲ್ಲವಾಗುತ್ತದೆ. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!
ಆದರೆ ಗಂಟಲ ಕೆರೆತ ತಕ್ಷಣ ನಿವಾರಣೆಯಾಗಬೇಕೆಂದರೆ ಕೊಂಚ ಕಹಿಯನ್ನು ಅನುಭವಿಸುವುದು ಅನಿವಾರ್ಯ. ಅಂದರೆ ಕಹಿಬೇವಿನ ಬಳಕೆಯಿಂದ ಗಂಟಲ ಕೆರೆತ ಶೀಘ್ರವಾಗಿ ಇಲ್ಲವಾಗುತ್ತದೆ. ಬನ್ನಿ, ಇದನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ...
ಬೇವಿನ ನೀರಿನಿಂದ ಗಳಗಳ ಮಾಡುವುದು
ಬೇವಿನ ನೀರಿನಿಂದ ಗಳಗಳ ಅಥವಾ ಗಲಬರಿಕೆ ಮಾಡಿಕೊಳ್ಳುವ ಮೂಲಕ ಗಂಟಲ ಕೆರೆತ ಶೀಘ್ರವಾಗಿ ಗುಣವಾಗುತ್ತದೆ. ಸುಮಾರು ಇಪ್ಪತ್ತರಿಂದ ಮೂವತ್ತು ಎಲೆಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಹಾಕಿ ಐದು ನಿಮಿಷ ಕುದಿಯುತ್ತಿರುವಂತೆ ಮಾಡಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ.
ಬೇವಿನ ನೀರಿನಿಂದ ಗಳಗಳ ಮಾಡುವುದು
ನೀರು ಸುಮಾರು ಉಗುರುಬೆಚ್ಚಾಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರಿನಿಂದ ಗಂಟಲ ಕೆರೆತವಿದ್ದಾಗ ಮುಕ್ಕಳಿಸಿ, ವಿಶೇಷವಾಗಿ ಬಾಯಿ ಮೇಲೆತ್ತಿ ಗಂಟಲಿನಲ್ಲಿ ಗಳಗಳ ಮಾಡಿ. ಇದರ ಅದ್ಭುತ ಪರಿಣಾಮವನ್ನು ತಕ್ಷಣವೇ ಅರಿಯಿರಿ.
ಜೇನಿನೊಂದಿಗೆ ಬರೆಸಿ ಕುಡಿಯಿರಿ
ಬೇವು ಮತ್ತು ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಗಂಟಲ ಕೆರೆತವಾಗದಂತೆ ನೋಡಿಕೊಳ್ಳುತ್ತದೆ.
ಜೇನಿನೊಂದಿಗೆ ಬರೆಸಿ ಕುಡಿಯಿರಿ
ಹಿಂದಿನ ವಿಧಾನದಂತೆ ಬೇವು ಬೇಯಿಸಿ ತಣಿಸಿ ಸೋಸಿದ ನೀರಿಗೆ ಕೊಂಚ ಜೇನು ಬೆರೆಸಿ ಒಂದು ಚಿಕ್ಕ ಲೋಟದಷ್ಟು ಕುಡಿಯಿರಿ. ಈ ವಿಧಾನದಿಂದಲೂ ಗಂಟಲ ಕೆರೆತ ತಕ್ಷಣ ಗುಣವಾಗುತ್ತದೆ.
ಕಹಿಬೇವನ್ನು ಅಗಿಯಿರಿ!
ಈ ವಿಧಾನ ಕೊಂಚ ಕಹಿಯಾದರೂ ಇದರ ಪರಿಣಾಮ ಮಾತ್ರ ಸಿಹಿ. ಹಸಿ ಅಥವಾ ಒಣಗಿರುವ ಕೆಲವು ಎಲೆಗಳನ್ನು ಬಾಯಿಯಲ್ಲಿ ಹಾಕಿ ಅಗಿದು ರಸವನ್ನು ನುಂಗಿರಿ, ನಾರನ್ನು ಉಗಿಯಿರಿ.
ಕಹಿಬೇವನ್ನು ಅಗಿಯಿರಿ!
ಈ ವಿಧಾನದಿಂದ ಭಾರಿಯಾದ ಗಂಟಲ ಕೆರೆತವೂ ತಕ್ಷಣವೇ ಮಾಯವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಮೂರು ಹೊತ್ತು ಈ ವಿಧಾನ ಅನುಸರಿಸಿ.