Just In
- 42 min ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 2 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 3 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 16 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
Don't Miss
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೀಟ್ರೂಟ್-ಕಿತ್ತಳೆ ಹಣ್ಣಿನ ಜ್ಯೂಸ್ನಲ್ಲಿರುವ ಪವರ್....
ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೆ ಕಾಫಿ, ಟೀ ಸೇವಿಸುವುದು ಸಾಮಾನ್ಯ. ಡಾಕ್ಟರ್ ಬಳಿ ಹೋಗಿ ನಮಗೆ ಇರುವ ಒಂದು ಐದು ಸಮಸ್ಯೆಯನ್ನು ಹೇಳಿಕೊಂಡರೆ, ಅವರು ಹೇಳುವ ಪರಿಹಾರಗಳಲ್ಲಿ ಐದರಲ್ಲಿ ಒಂದು ಕಾಫಿ-ಟೀ ಸೇವಿಸಬೇಡಿ ಎಂದಿರುತ್ತದೆ. ಆ ಮಟ್ಟಿಗೆ ನಮ್ಮ ಅನಾರೋಗ್ಯಕ್ಕೆ ಈ ಕಾಫಿ-ಟೀಗೆ ಅಷ್ಟು ಮಟ್ಟಿಗಿನ ನಂಟು. ಹಿಂದಿನ ಕಾಲದಲ್ಲಿ ನಮ್ಮವರು ಈ ಕಾಫಿ-ಟೀ ಗಳನ್ನು ಸೇವಿಸುತ್ತಿರಲಿಲ್ಲ.
ಇವೆಲ್ಲಾ ಇತ್ತೀಚಿನ ಶತಮಾನಗಳಲ್ಲಿ ಭಾರತಕ್ಕೆ ಬಂದವು. ಇತ್ತೀಚಿನ ದಶಕಗಳಲ್ಲಿ ನಮ್ಮ ಮನೆಗಳಿಗೆ ಕಾಲಿಟ್ಟವು. ಆದರೆ ಈಗ ನಮ್ಮ ಪಾಲಿಗೆ ಬಿಟ್ಟು ಹೋಗದ ಚಟಗಳಾಗಿ ಪರಿಣಮಿಸಿವೆ. ಸರಿ ಇವುಗಳನ್ನು ಬಿಟ್ಟು ಆರೋಗ್ಯಕರವಾಗಿರುವುದು ಯಾವುದನ್ನಾದರು ಸೇವಿಸಬೇಕು ಬೆಳ್ಳಂಬೆಳಗ್ಗೆ ಎಂದುಕೊಳ್ಳುವವರಿಗೆ ನಮ್ಮ ಆಯ್ಕೆ ಯಾವುದೆಂದರೆ ಕಿತ್ತಳೆ ಮತ್ತು ಬೀಟ್ ರೂಟ್ ರಸ.
ಹೌದು ಕಿತ್ತಳೆ ಮತ್ತು ಬೀಟ್ರೂಟ್ ರಸವು ನಮ್ಮ ಆರೋಗ್ಯವನ್ನು ಸುಧಾರಿಸುವ ಅಂಶಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಬೆಳಗ್ಗೆಯೇ ಸೇವಿಸುವುದರಿಂದ ನಿಮ್ಮ ಇಡೀ ದಿನ ಉಲ್ಲಾಸಕಾರಿಯಾಗಿರುವುದರಲ್ಲಿ ಸಂಶಯವೇ ಇಲ್ಲ. ಬನ್ನಿ ಇನ್ನು ತಡ ಮಾಡದೆ ಈ ಜ್ಯೂಸ್ ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ. ಬೀಟ್ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...
ಅಗತ್ಯವಾಗಿರುವು
ಪದಾರ್ಥಗಳು
*ಬೀಟ್ರೂಟ್
-
½
*ಕಿತ್ತಳೆ
ರಸ-
½
ಕಪ್
½ ಕಪ್ ಕಿತ್ತಳೆ ರಸಕ್ಕೆ ಕೆಲವು ಬೀಟ್ರೂಟ್ಗಳನ್ನು ಬೆರೆಸಿಕೊಂಡು ಬ್ಲೆಂಡರಿನಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ ಈ ರಸವನ್ನು ಶೋಧಿಸಿಕೊಳ್ಳಿ. ಬೆಳಗ್ಗೆಯೇ ಇದನ್ನು ಸೇವಿಸಿ. ಇದರಿಂದ ನಿಮಗೆ ಹಲವಾರು ಡಿಸಾರ್ಡರ್ಗಳು ಬರುವುದು ತಪ್ಪುತ್ತದೆ. ಬನ್ನಿ ಯಾವ ಯಾವ ಆರೋಗ್ಯಕಾರಿ ಪ್ರಯೋಜನಗಳು ಇದನ್ನು ಸೇವಿಸುವುದರಿಂದ ಬರುತ್ತದೆ ಎಂದು ನೋಡೋಣ.
ರಕ್ತದೊತ್ತಡವನ್ನು
ಕಡಿಮೆ
ಮಾಡುತ್ತದೆ
ನೈಟ್ರಿಕ್
ಆಮ್ಲ
ಮತ್ತು
ವಿಟಮಿನ್
ಸಿ
ಅಂಶಗಳು
ಈ
ಜ್ಯೂಸಿನಲ್ಲಿ
ಸ್ವಾಭಾವಿಕವಾಗಿ
ದೊರೆಯುತ್ತದೆ.
ಇವು
ರಕ್ತನಾಳಗಳನ್ನು
ಹಿಗ್ಗಿಸಲು
ನೆರವಾಗುತ್ತವೆ.
ಆ
ಮೂಲಕ
ನಿಮ್ಮ
ದೇಹದಲ್ಲಿ
ರಕ್ತ
ಪರಿಚಲನೆ
ಹೆಚ್ಚಾಗುತ್ತದೆ
ಮತ್ತು
ರಕ್ತದೊತ್ತಡ
ಕಡಿಮೆಯಾಗುತ್ತದೆ.
ಕ್ಯಾನ್ಸರ್
ನಿಯಂತ್ರಿಸುತ್ತದೆ
ಅಧ್ಯಯನಗಳ
ಪ್ರಕಾರ
ಕಿತ್ತಳೆ
ಮತ್ತು
ಬೀಟ್ರೂಟ್
ರಸದಲ್ಲಿ
ಫೈಟೋನ್ಯೂಟ್ರಿಯೆಂಟ್ಗಳು
ಲಭ್ಯವಿರುತ್ತವೆ.
ಇವು
ಪ್ರೋಸ್ಟೇಟ್,
ಸ್ತನ
ಮತ್ತು
ಪ್ಯಾಂಕ್ರಿಯಾಟಿಕ್
ಕ್ಯಾನ್ಸರ್
ಮೇಲೆ
ಪರಿಣಾಮಕಾರಿಯಾಗಿ
ಹೋರಾಡುತ್ತವೆಯಂತೆ.
ಜನನ
ಕಾಲದ
ನ್ಯೂನತೆಗಳನ್ನು
ನಿವಾರಿಸುತ್ತದೆ
ಕಿತ್ತಳೆ
ಮತ್ತು
ಬೀಟ್ರೂಟ್
ರಸವನ್ನು
ಗರ್ಭಿಣಿಯರು
ಪ್ರತಿ
ನಿತ್ಯ
ಸೇವಿಸಿದರೆ
ಮಗುವಿನ
ಜನನ
ಕಾಲದ
ನ್ಯೂನತೆಗಳನ್ನು
ನಿವಾರಿಸಬಹುದಂತೆ.
ಇದರಿಂದ
ಮಗುವಿಗೆ
ಹುಟ್ಟುವ
ಮೊದಲೆ
ವಿಟಮಿನ್
ಬಿ,
ಸಿ,
ಮತ್ತು
ಫೋಲೆಟ್
ಲಭಿಸುತ್ತದೆ.
ಅಲ್ಸರ್ಗಳನ್ನು
ನಿವಾರಿಸುತ್ತದೆ
ಈ
ಸ್ವಾಭಾವಿಕ್
ಜ್ಯೂಸಿನಲ್ಲಿ
ಆಂಟಿ-ಇನ್ಫ್ಲಮ್ಮೇಟರಿ
ಅಂಶಗಳು
ಇದ್ದು,
ಇವು
ಅಲ್ಸರ್ಗಳನ್ನು
ನಿವಾರಿಸುತ್ತದೆ
ಎಂದು
ತಿಳಿದು
ಬಂದಿದೆ.
ರೋಗ
ನಿರೋಧಕ
ಶಕ್ತಿಯನ್ನು
ಹೆಚ್ಚಿಸುತ್ತದೆ
ಈ
ಮನೆ
ಮದ್ದಿನಲ್ಲಿ
ವಿಟಮಿನ್
ಸಿ,
ಮ್ಯಾಂಗನೀಸ್
ಮತ್ತು
ಇತರೆ
ಪೋಷಕಾಂಶಗಳು
ಅಧಿಕವಾಗಿ
ಇರುತ್ತವೆ.
ಇವುಗಳನ್ನು
ಸೇವಿಸುವುದರಿಂದ
ನಿಮ್ಮ
ದೇಹದ
ರೋಗ
ನಿರೋಧಕ
ಶಕ್ತಿಯು
ಹೆಚ್ಚಾಗುತ್ತದೆ
ಮತ್ತು
ನೀವು
ಆರೋಗ್ಯಕರವಾಗುತ್ತೀರಿ.
ಅನಿಮಿಯಾಗೆ
ಒಳ್ಳೆಯ
ಮದ್ದು
ಕಿತ್ತಳೆ
ಮತ್ತು
ಬೀಟ್ರೂಟ್
ರಸವನ್ನು
ಸೇವಿಸುವುದರಿಂದ
ಅನಿಮಿಯಾ
ಸಮಸ್ಯೆಯನ್ನು
ನಿವಾರಿಸಿಕೊಳ್ಳಬಹುದಂತೆ.
ಏಕೆಂದರೆ
ಈ
ಜ್ಯೂಸ್
ನಿಮ್ಮ
ದೇಹವು
ಕಬ್ಬಿಣಾಂಶವನ್ನು
ಹೀರಿಕೊಳ್ಳುವಂತೆ
ಮಾಡುತ್ತದೆ.
ಹೃದ್ರೋಗ
ಬರದಂತೆ
ತಡೆಯುತ್ತದೆ
ಕಿತ್ತಳೆ
ಮತ್ತು
ಬೀಟ್ರೂಟ್
ರಸವು
ನಿಮ್ಮ
ರಕ್ತ
ನಾಳಗಳಲ್ಲಿ
ಕೊಲೆಸ್ಟ್ರಾಲ್
ಕಟ್ಟಿಕೊಳ್ಳುವುದನ್ನು
ತಡೆಯುತ್ತವೆ.
ಆ
ಮೂಲಕ
ಇದು
ನಿಮ್ಮ
ಹೃದಯದ
ಆರೋಗ್ಯವನ್ನು
ಕಾಪಾಡುತ್ತದೆ
ಎಂದು
ಹೇಳಲಾಗುತ್ತದೆ.