Just In
- 2 hrs ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 5 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 14 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 14 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀತ, ಕೆಮ್ಮು, ಗಂಟಲು ನೋವಿನ ಸಮಸ್ಯೆಗೆ ಸುಲಭೋಪಾಯ
ಶೀತ, ಕೆಮ್ಮು ಮತ್ತು ಕಟ್ಟುವಿಕೆಯಂತಹ ಸಮಸ್ಯೆಗಳು ಬೇರೆ ಬೇರೆ ಋತುಮಾನಗಳಲ್ಲಿ ಕಾಣಿಸಿಕೊಳ್ಳುವಂಹ ಸಮಸ್ಯೆಗಳಾಗಿವೆ. ಹವಾಮಾನ ಬದಲಾವಣೆಯಿಂದಾಗಿ ಹೆಚ್ಚಿನವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ.
ಇನ್ನು ಧೂಳು ಮತ್ತು ಕಲುಷಿತ ವಾತಾವರಣ ಈ ಸ್ಥಿತಿಯನ್ನು ಹೆಚ್ಚು ಕೆಟ್ಟದಾಗಿಸಲಿದ್ದು ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ. ರಾತ್ರಿ ಮಲಗಿರುವ ಸಮಯದಲ್ಲಿ ಕೂಡ ಕೆಮ್ಮು ನೆಗಡಿ ನಿಮಗೆ ಎಚ್ಚರವಾಗುವಂತೆ ಮಾಡಿ ನಿಮಗೆ ತೊಂದರೆಯನ್ನು ಉಂಟುಮಾಡುತ್ತದೆ. ಇದರಿಂದ ಉಸಿರಾಟದಲ್ಲಿ ನಿಮಗೆ ಸಮಸ್ಯೆಯುಂಟಾಗುತ್ತದೆ.
ಈ ಸಮಯದಲ್ಲಿ ನಿಮಗೆ ತೋಚಿರುವ ಔಷಧಿಗಳನ್ನು ಸೇವಿಸುವುದಕ್ಕಿಂತ ಮುನ್ನ ವೈದ್ಯರನ್ನು ಹೋಗಿ ಕಾಣಿ. ನಂತರ ಔಷಧಗಳನ್ನು ಸೇವಿಸಿ. ನೈಸರ್ಗಿಕ ವಿಧಾನದಲ್ಲಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಇನ್ನಷ್ಟು ಸುಲಭ ವಿಧಾನವಾಗಿದ್ದು ಇದರಿಂದ ಕೂಡ ಕೆಮ್ಮು, ಶೀತ ಮತ್ತು ಕಟ್ಟುವಿಕೆ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದು. ಹಾಗಿದ್ದರೆ ನೈಸರ್ಗಿಕ ವಿಧಾನವನ್ನು ನಿಮ್ಮದಾಗಿಸಿಕೊಂಡು ಪರಿಹಾರ ಕಂಡುಕೊಳ್ಳಲು ಈ ಲೇಖನದಲ್ಲಿ ಸಲಹೆ ಇದೆ. ಹಾಗಿದ್ದರೆ ಈ ನೈಸರ್ಗಿಕ ರೆಸಿಪಿಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬುದನ್ನು ಕಂಡುಕೊಳ್ಳೋಣ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು
ಸಾಮಾಗ್ರಿಗಳು
1.
ಫಿಲ್ಟರ್
ಮಾಡದೇ
ಇರುವ
ಹಸಿ
ಆಪಲ್
ಸೀಡರ್
ವಿನೇಗರ್
-
1/4
ಕಪ್
2.
ಲಿಂಬೆ
ರಸ
-
1/4
ಕಪ್
3.
ಹಸಿ
ಜೇನು
-
2
ಚಮಚಗಳು
4.
ಒಣ
ಶುಂಠಿ
ಪುಡಿ
-
1
ಚಮಚ
5.
ಮೆಣಸಿನ
ಪುಡಿ
-
1/2
ಚಮಚ
6.ಕಾಳು
ಮೆಣಸಿನ
ಹುಡಿ
-
ಚಿಟಿಕೆಯಷ್ಟು
7. ಅರಿಶಿನ ಹುಡಿ - 1/2 ಚಮಚ
8. ಮಿಶ್ರಣ ಮಾಡುವ ಪಾತ್ರೆ
9.ತಂತಿ ಕೂರ್ಚ (ವಿಸ್ಕ್)
10.ಅಳತೆ ಮಾಡುವ ಕಪ್ಸ್
11.ಸಂಗ್ರಹಿಸಿಡಲು ಡಬ್ಬ ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?
ತಯಾರಿ
ವಿಧಾನ
1.
ಮಿಶ್ರಣ
ಮಾಡುವ
ಪಾತ್ರೆಯನ್ನು
ತೆಗೆದುಕೊಳ್ಳಿ
2.
ಹಸಿ
ಆಪಲ್
ಸೀಟರ್
ವಿನೇಗರ್
ಅನ್ನು
ಪಾತ್ರೆಗೆ
ಹಾಕಿ.
3.
ಇದಕ್ಕೆ
ಲಿಂಬೆ
ರಸವನ್ನು
ಹಿಂಡಿ
4.
ಈ
ಮಿಶ್ರಣಕ್ಕೆ
ಜೇನನ್ನು
ಸೇರಿಸಿ.
5.
ಮೆಣಸಿನ
ಪುಡಿಯನ್ನು
ಹಾಕಿ.
ನಿಮಗೆ
ಮೆಣಸಿನ
ಹುಡಿ
ಸಿಗಲಿಲ್ಲ
ಎಂದಾದಲ್ಲಿ,
ಮೆಣಸಿನ
ಪದರಗಳನ್ನು
ಬಳಸಿ
6.
ಒಣ
ಶುಂಠಿ
ಹುಡಿಯನ್ನು
ಹಾಕಿ.
7.
ಅರಿಶಿನ
ಸೇರಿಸಿ
8.
ಕಾಳುಮೆಣಸಿನ
ಪುಡಿಯನ್ನು
ಉದುರಿಸಿ.
9.
ಈಗ
ವಿಸ್ಕ್
ಬಳಸಿ
ಎಲ್ಲಾ
ಸಾಮಾಗ್ರಿಗಳನ್ನು
ಚೆನ್ನಾಗಿ
ಕಲಸಿಕೊಳ್ಳಿ.
10.
ನಿಮ್ಮ
ಮನೆಯಲ್ಲೇ
ತಯಾರು
ಮಾಡಿದ
ನೈಸರ್ಗಿಕ
ಔಷಧಿ
ಸಿದ್ಧವಾಗಿದೆ.
11.
ಇದನ್ನು
ಗ್ಲಾಸ್
ಕಂಟೈನರ್ಗೆ
ಸುರಿಯಿರಿ
ಮತ್ತು
ರೆಫ್ರಿಜರೇಟರ್ನಲ್ಲಿ
ಎತ್ತಿಟ್ಟುಕೊಳ್ಳಿ.
ಇದನ್ನು
ಹಲವಾರು
ವಾರಗಳವರೆಗೆ
ನಿಮಗೆ
ಬಳಸಿಕೊಳ್ಳಬಹುದು.
ಈ
ಔಷಧವನ್ನು
ಬಳಸುವುದು
ಹೇಗೆ?
ಈ
ರೆಸಿಪಿಯಲ್ಲಿ
ಬಳಸಲಾದ
ಈ
ಎಲ್ಲಾ
ಸಾಮಾಗ್ರಿಗಳು
ಸುಲಭವಾಗಿ
ದೊರೆಯುತ್ತದೆ.
ಇನ್ನು
ಇದರ
ಸಿದ್ಧತೆ
ಕೂಡ
ಹೆಚ್ಚು
ಕಷ್ಟವಲ್ಲ.
ಶೀತ,
ಕೆಮ್ಮಿಗೆ
ಮನೆಯಲ್ಲೇ
ತಯಾರು
ಮಾಡಲಾದ
ಔಷಧ
ನಿಮಗೆ
ಬೇಕು
ಎಂದಾದಲ್ಲಿ,
ನಿಮಗೆ
ಇದು
ನಿಜಕ್ಕೂ
ಸಹಾಯಕ.
ದೊಡ್ಡವರಿಗೆ
2
ಚಮಚದಷ್ಟು
ಮದ್ದು
ಆರಾಮವನ್ನು
ನೀಡುತ್ತದೆ.
ಇನ್ನು
ಮಗುವಿಗೆ
ದಿನಕ್ಕೆ
1
ಚಮಚದಷ್ಟು
ಈ
ಔಷಧವನ್ನು
ನೀಡಿದರೆ
ಸಾಕು.
1
ವರ್ಷಕ್ಕಿಂತ
ಒಳಗಿನ
ಮಕ್ಕಳಿಗೆ
ಈ
ಔಷಧವನ್ನು
ನೀಡಬೇಡಿ.
ಸೇವಿಸುವ
ಮುನ್ನ
ಮಿಶ್ರಣವನ್ನು
ಚೆನ್ನಾಗಿ
ಕುಲುಕಿಸಿಕೊಳ್ಳಿ,
ಇಲ್ಲದಿದ್ದರೆ
ಹುಡಿ
ಅಡಿಭಾಗದಲ್ಲಿ
ಹಾಗೆಯೇ
ಇರುತ್ತದೆ.
ಔಷಧದ
ಪ್ರಯೋಜನಗಳು:
1.ಆಪಲ್
ಸೀಡರ್
ವಿನೇಗರ್ನಲ್ಲಿರುವ
ಅಂಶಗಳು
ನಿಮ್ಮ
ರೋಗವರ್ಧಕ
ಶಕ್ತಿಯನ್ನು
ವೃದ್ಧಿಸುತ್ತದೆ
ಮತ್ತು
ಲೋಳೆಯ
ದಟ್ಟಣೆಯನ್ನು
ನಿರಾಳಗೊಳಿಸಿ
ದಟ್ಟಣೆಯಿಂದ
ಗಾಳಿಯ
ಆಡುವಿಕೆಯನ್ನು
ಮುಕ್ತವಾಗಿಸುತ್ತದೆ.
2.
ಲಿಂಬೆ
ರಸದಲ್ಲಿರುವ
ವಿಟಮಿನ್
ಸಿ
ಅಂಶವು
ದಟ್ಟಣೆ
ಮತ್ತು
ಶೀತಕ್ಕೆ
ಹೆಚ್ಚು
ಪ್ರಯೋಜನಕಾರಿಯಾದುದು.
ಸೋಂಕಿನ
ವಿರುದ್ಧ
ಹೋರಾಡುವ
ಶಕ್ತಿಯನ್ನು
ಈ
ರಸ
ನಿಮಗೆ
ನೀಡುತ್ತದೆ.
3.ಜೇನು
ಗುಣಪಡಿಸುವ
ಅಂಶಗಳನ್ನು
ಹೊಂದಿದೆ.
ಶೀತದೊಂದಿಗೆ
ನಿಮೆಗ
ಕೆಮ್ಮಿದೆ
ಎಂದಾದಲ್ಲಿ,
ಜೇನು
ಉತ್ತಮ
ಮದ್ದಾಗಿದೆ.
4.ಮೆಣಸಿನ
ಹುಡಿ
ಕ್ಯಾಪ್ಸಸಿನ್
ಅನ್ನು
ಒಳಗೊಂಡಿದ್ದು,
ಸೈನಸ್
ಅನ್ನು
ಒಣಗಿಸುತ್ತದೆ.
5.ನೋಯುತ್ತಿರುವ
ಗಂಟಲಿನಿಂದ
ಬಳಲುತ್ತಿದ್ದೀರಿ
ಎಂದಾದಲ್ಲಿ,
ಶುಂಠಿಯನ್ನು
ನಿಮಗೆ
ಬಳಸಬಹುದು.
ನಿಮ್ಮ
ದೇಹವನ್ನು
ಇದು
ಬೆಚ್ಚಗೆ
ಇರಿಸುತ್ತದೆ
ಮತ್ತು
ರಕ್ತ
ಸಂಚಾರವನ್ನು
ಸರಾಗವಾಗಿಸಿ
ದಟ್ಟಣೆಯನ್ನು
ಸುಧಾರಿಸುತ್ತದೆ.
6.ಅರಿಶಿನದಲ್ಲಿರುವ
ಉರಿಯೂತ
ವಿರೋಧಿ
ಗುಣಲಕ್ಷಣಗಳು
ಉರಿಯೂತವನ್ನು
ನಿವಾರಿಸುತ್ತದೆ.
ಮತ್ತು
ಹೆಚ್ಚುವರಿ
ಸೋಂಕಿಗೆ
ಒಳಗಾಗದಂತೆ
ನಿಮ್ಮನ್ನು
ತಡೆಯುತ್ತದೆ.
7.ಕರಿಮೆಣಸು
ಕಫವನ್ನು
ನಿವಾರಿಸಿ
ಉಸಿರುಕಟ್ಟಿದ
ಮೂಗನ್ನು
ನಿರಾಳಗೊಳಿಸುತ್ತದೆ.
ವೇಗವಾಗಿ
ಗುಣಮುಖರಾಗಲು
ಈ
ಔಷಧವನ್ನು
ಬಳಸುತ್ತಿರುವಾಗ,
ಆರೋಗ್ಯಕರ
ಆಹಾರ
ಸೇವನೆಯನ್ನು
ನೀವು
ಮಾಡಬೇಕು.
ಸಾಧ್ಯವಾದಷ್ಟು
ನೀರು
ಕುಡಿಯಿರಿ.
ದಟ್ಟಣೆಯಿಂದ
ನಿವಾರಣೆ
ಪಡೆದುಕೊಳ್ಳಲು
ಹಾಟ್
ಸ್ಟೀಮ್
ಸಹಕಾರಿಯಾಗಿದೆ.
ಸಾಕಷ್ಟು
ವಿಶ್ರಾಂತಿಯನ್ನು
ಪಡೆದುಕೊಳ್ಳಿ.
ಇದರಿಂದ
ನಿಮ್ಮ
ದೇಹಕ್ಕೆ
ಪ್ರತಿ
ಹೋರಾಡುವ
ಶಕ್ತಿ
ದೊರೆಯುತ್ತದೆ.