Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಳೆಹಣ್ಣಿನ ಸಿಪ್ಪೆಯ ಪವರ್ಗೆ 'ತಲೆನೋವು' ಮಂಗಮಾಯ!
ಪ್ರತೀ ಸಲ ತಲೆನೋವು ಕಾಣಿಸಿಕೊಂಡಾಗ ಮಾತ್ರೆ ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ತಲೆನೋವು ಬಂದಾಗ ಮನೆಮದ್ದನ್ನು ಬಳಸಿದರೆ ಯಾವುದೇ ಅಡ್ಡಪರಿಣಾಮಗಳಿಲ್ಲ. ತಲೆನೋವನ್ನು ನಿವಾರಣೆಗೆ ಬಾಳೆಹಣ್ಣಿನ ಸಿಪ್ಪೆಯ ಔಷಧಿಯನ್ನು ಬಳಸಬಹುದು.
ದೈನಂದಿನ ಚಟುವಟಿಕೆಗಳು ಸರಾಗವಾಗಿ ಸಾಗಬೇಕಾದರೆ ದೇಹದ ಪ್ರತಿಯೊಂದು ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ದೇಹದ ಯಾವುದೇ ಅಂಗದಲ್ಲಿ ನೋವು ಕಾಣಿಸಿಕೊಂಡರೆ ಕೆಲಸ ಮಾಡಲು ಆಸಕ್ತಿಯೇ ಇರುವುದಿಲ್ಲ. ಅದರಲ್ಲೂ ತಲೆನೋವು ಕಾಣಿಸಿಕೊಂಡರೆ ಊಟತಿಂಡಿ ಏನೂ ಬೇಡ ಎನ್ನುವಂತೆ ಆಗುತ್ತದೆ. ತಲೆನೋವು ಕಾಣಿಸಿಕೊಂಡಾಗ ತಕ್ಷಣಗೆ ಹೋಗಿ ಮೆಡಿಕಲ್ ನಿಂದ ಮಾತ್ರೆ ತಂದು ನುಂಗುತ್ತೇವೆ. ಬಾಳೆಹಣ್ಣಿನ ಸಿಪ್ಪೆಯ ಚಮತ್ಕಾರಿಕ ಪ್ರಯೋಜನ ಅರಿಯಿರಿ!
ಆದರೆ ಪ್ರತೀ ಸಲ ತಲೆನೋವು ಕಾಣಿಸಿಕೊಂಡಾಗ ಮಾತ್ರೆ ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ಇದಕ್ಕಾಗಿ ತಲೆನೋವು ಬಂದಾಗ ಮನೆಮದ್ದನ್ನು ಬಳಸಿದರೆ ಅದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗಲ್ಲ. ತಲೆನೋವನ್ನು ನಿವಾರಣೆ ಮಾಡಬೇಕಾದರೆ ಬಾಳೆಹಣ್ಣಿನ ಸಿಪ್ಪೆಯ ಔಷಧಿಯನ್ನು ಬಳಸಬಹುದು. ಇದನ್ನು ಯಾವ ರೀತಿ ಬಳಸಿದರೆ ತಲೆನೋವು ನಿವಾರಣೆ ಆಗಬಹುದು ಎಂದು ಈ ಲೇಖನದ ಮೂಲಕ ತಿಳಿಯಿರಿ. ತಲೆನೋವು ಓಡಿಸುವ ಮನೆ ಮದ್ದು: ಪ್ರಯತ್ನಿಸಿ ನೋಡಿ
ಬೇಕಾಗುವ ಸಾಮಗ್ರಿಗಳು
*ಒಂದು ಬಾಳೆಹಣ್ಣಿನ ಸಿಪ್ಪೆ
*ನೀಲಗಿರಿ ಎಣ್ಣೆ- ಕೆಲವು ಹನಿ
ಬೇಕಾಗುವ ಸಾಮಗ್ರಿಗಳು
ತಲೆನೋವನ್ನು ನಿವಾರಣೆ ಮಾಡಲು ಈ ಮನೆಮದ್ದು ಹೇಳಿಮಾಡಿಸಿದಂತಿದೆ. ಒತ್ತಡ, ನಿಶ್ಯಕ್ತಿ ಮತ್ತು ಸೈನಸ್ ನಿಂದ ಬರುವಂತಹ ತಲೆನೋವಿಗೆ ಇದು ರಾಮಬಾಣ. ಈ ಮದ್ದಿನಿಂದ ತಲೆನೋವು ನಿವಾರಣೆ ಆಗದೆ ಇದ್ದಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಯಾಕೆಂದರೆ ಇದು ಬೇರೆ ಯಾವುದೋ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು.
ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯಲ್ಲಿ ನೈಸರ್ಗಿಕವಾಗಿ ತಂಪು ಪ್ರಭಾವ ಬೀರುವಂತಹ ಗುಣಗಳು ಇವೆ. ಇದರಲ್ಲಿ ಪೊಟಾಶಿಯಂ ಅಂಶವು ಅಡಗಿರುವುದರಿಂದ ತಲೆಯ ಭಾಗದಲ್ಲಿ ಉಂಟಾಗಿರುವಂತಹ ಉರಿಯೂತವನ್ನು ಶಮನ ಮಾಡುತ್ತದೆ. ಇದರಿಂದ ತಲೆನೋವು ಕಡಿಮೆಯಾಗುವುದು.
ನೀಲಗಿರಿ ಎಣ್ಣೆ
ನೀಲಗಿರಿ ಎಣ್ಣೆಯಲ್ಲಿ ಕೂಡ ಉರಿಯೂತ ಶಮನಕಾರಿ ಗುಣಗಳು ಇರುವುದರಿಂದ ಇದು ನೋವನ್ನು ನಿವಾರಿಸಿ ನರಗಳನ್ನು ಶಮನಗೊಳಿಸುತ್ತದೆ.
ಈ ಮನೆಮದ್ದನ್ನು ಬಳಸುವ ವಿಧಾನ
ಹಣೆಯ ಭಾಗಕ್ಕೆ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಈ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಇಡಿ.
ಈ ಮನೆಮದ್ದನ್ನು ಬಳಸುವ ವಿಧಾನ
ಬಾಳೆಹಣ್ಣಿನ ಸಿಪ್ಪೆಯ ಒಳಭಾಗವು ಹಣೆಗೆ ತಾಗುತ್ತಿರಬೇಕು. 20-30 ನಿಮಿಷ ಕಾಲ ಹಾಗೆ ಬಿಡಿ.
ಈ ಮನೆಮದ್ದನ್ನು ಬಳಸುವ ವಿಧಾನ
ಮಲಗಿಕೊಂಡು ನಿಧಾನವಾಗಿ 30 ನಿಮಿಷ ಕಾಲ ಉಸಿರಾಡಿ. ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ ಅದರ ಫಲಿತಾಂಶ ಹೇಗಿತ್ತು ಎಂದು ನಮಗೆ ತಿಳಿಸಿ.