Just In
- 4 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 11 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 12 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 13 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News ಕೋಲಾರ ಟಿಕೆಟ್ ಗಾಗಿ ಫೈಟಿ; ಶಾಸಕರ ರಾಜೀನಾಮೆ ಎಚ್ಚರಿಕೆ - ಡಿಕೆ ಶಿವಕುಮಾರ್ ಏನಂದ್ರು?
- Technology ಇಂದು ಪೊಕೊ C61 ಫೋನಿನ ಫಸ್ಟ್ ಸೇಲ್!..ಬೆಲೆ, ಆಫರ್ ಮಾಹಿತಿ ಇಲ್ಲಿದೆ
- Automobiles Bajaj: ಯುವಕರ ಮನಗೆದ್ದಿರುವ ಪಲ್ಸರ್ ಬೈಕ್ಗಳಿವು, ಬೆಲೆ ರೂ.2 ಲಕ್ಷದೊಳಗೆ.. 50 ಕಿ.ಮೀಗಿಂತ ಹೆಚ್ಚಿನ ಮೈಲೇಜ್
- Finance ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆ ಕಾಂಕಾರ್ಡ್ನಿಂದ 100 ಕೋಟಿಗೆ 4.5 ಎಕರೆ ಭೂಮಿ ಸ್ವಾಧೀನ
- Movies ಶಾರುಖ್ ಖಾನ್ ಹಾಗೂ ನಾನು ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದ ಕಂಗನಾ..!
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವ ಆರೋಗ್ಯ ದಿನ ಎಂದರೇನು? ಇದರ ಮಹತ್ವವೇನು?
ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು ವ್ಯಕ್ತಿಗಳ ಶ್ರಮದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು. 1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.
ಅಂತೆಯೇ
1950ರ
ಏಪ್ರಿಲ್
7
ರಂದು
ಪ್ರಥಮ
ವಿಶ್ವ
ಆರೋಗ್ಯ
ದಿನವನ್ನು
ಆಚರಿಸಲಾಯಿತು.
ಅಂದಿನಿಂದ
ಪ್ರತಿವರ್ಷ
ಈ
ದಿನವನ್ನು
ವಿಶ್ವ
ಆರೋಗ್ಯ
ದಿನವನ್ನಾಗಿ
ಆಚರಿಸುತ್ತಾ
ಬರಲಾಗಿದೆ.
ಅಂದಿನಿಂದ
ವಿಶ್ವ
ಆರೋಗ್ಯ
ಸಂಸ್ಥೆ
ಪ್ರತಿವರ್ಷವೂ
ಒಂದು
ವಿಷಯದ
ಮೇಲ್ಪಂಕ್ತಿಯನ್ನು
ಆರಿಸಿ
ಆ
ವಿಷಯದ
ಕುರಿತು
ಹಲವು
ಕಾರ್ಯಕ್ರಮಗಳನ್ನು
ಹಮ್ಮಿಕೊಂಡು
ವಿಶ್ವದೆಲ್ಲೆಡೆ
ಅನುಷ್ಠಾನಗೊಳಿಸಲು
ವಿವಿಧ
ಚಟುವಟಿಕೆಗಳನ್ನು
ಏರ್ಪಡಿಸುತ್ತಾ
ಬಂದಿದೆ.
ಆರೋಗ್ಯದ ಕಾಳಜಿಯ ಕುರಿತಾದ ಈ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ. ವಿಷಯದ ಕುರಿತಾದ ಪ್ರಸ್ತುತಿಗಳು ಕೇವಲ ಪುಸ್ತಕದ ಬದನೇಕಾಯಿಯಾಗಿ ಉಳಿಯದೇ ಇಡಿಯ ವರ್ಷ ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.
ವಿಶ್ವ
ಆರೋಗ್ಯ
ದಿನದ
ಆಚರಣೆ
ಹೇಗೆ?
ಈ
ಆಚರಣೆಯಲ್ಲಿ
ಆಯಾ
ಸರ್ಕಾರೇತರ
ಸಂಸ್ಥೆಗಳು
(ಎನ್.ಜಿ.ಓ),
ಲಾಭರಹಿತ
ಕಾರ್ಯನಿರ್ವಹಿಸುವ
ಸಂಸ್ಥೆಗಳು
ಭಾಗವಹಿಸಿ
ಕಾರ್ಯಕ್ರಮಗಳ
ಯಶಸ್ವಿಗೆ
ಸಹಕರಿಸುತ್ತವೆ.
ಸಾರ್ವಜನಿಕರಿಗೆ
ಆರೋಗ್ಯ
ಮತ್ತು
ವಿವಿಧ
ಕೆಡುಕುಗಳ
ಬಗ್ಗೆ
ಮಾಹಿತಿ
ಮತ್ತು
ಮಾರ್ಗದರ್ಶನ
ನೀಡಲಾಗುತ್ತದೆ.
ಇದರಲ್ಲಿ
ಭಾಗವಹಿಸುವ
ಸಂಸ್ಥೆಗಳು
ವಿವಿಧ
ಮಾಧ್ಯಮಗಳ
ಮೂಲಕ
ವ್ಯಾಪಕ
ಪ್ರಚಾರ
ನೀಡಿ
ಹೆಚ್ಚು
ಹೆಚ್ಚು
ಜನರಿಗೆ
ಈ
ಮಾಹಿತಿ
ಲಭ್ಯವಾಗಲು
ನೆರವಾಗುತ್ತವೆ.
ವಿಶ್ವ
ಆರೋಗ್ಯ
ದಿನವನ್ನೇಕೆ
ಆಚರಿಸಬೇಕು?
ಹೆಚ್ಚಿನವರಿಗೆ
ಇದೊಂದು
ದುಂದುವೆಚ್ಚದ
ಮತ್ತು
ಪ್ರಚಾರಕ್ಕಾಗಿ
ಮಾಡಿರುವ
ಕಾರ್ಯಕ್ರಮವೆಂದೇ
ದೂರದಿಂದ
ತೋರುತ್ತದೆ.
ಆದರೆ
ವಾಸ್ತವವಾಗಿ
ಈ
ಕಾರ್ಯಕ್ರಮದಲ್ಲಿ
ಭಾಗವಹಿಸುರವರೆಲ್ಲಾ
ಕೇವಲ
ಸೇವಾಮನೋಭಾವನೆ
ಮತ್ತು
ಕೃತಾರ್ಥತೆ
ಅನುಭವಿಸುವ
ನಿಟ್ಟಿನಲ್ಲಿ
ತಮ್ಮ
ಕರ್ತವ್ಯವನ್ನು
ನಿಭಾಯಿಸುತ್ತಾರೆ.
ಅರಿವಿಲ್ಲದೇ
ಜನತೆ
ಆಚರಿಸುತ್ತಾ
ಬಂದಿರುವ
ಅನಾರೋಗ್ಯಕರ
ಮತ್ತು
ಪಿಡುಗುಗಳ
ಬಗ್ಗೆ
ಮಾಹಿತಿ
ನೀಡಿ
ಜನರನ್ನು
ಸರಿದಾರಿಗೆ
ತರಲು
ಪ್ರಯತ್ನಪಡುತ್ತಾರೆ.
ಕಾಲಕಾಲಕ್ಕೆ
ತೆಗೆದುಕೊಳ್ಳಬೇಕಾದ
ಔಷಧಿ,
ಕಾಪಾಡಬೇಕಾದ
ನೈರ್ಮಲ್ಯ,
ಸ್ವಚ್ಛತಾ
ಅಭ್ಯಾಸಗಳು,
ನೀರಿನ
ದುಂದುವೆಚ್ಚ,
ಪರಿಸರದ
ಸ್ವಚ್ಛತೆ,
ಮೊದಲಾದ
ವಿಷಯಗಳ
ಬಗ್ಗೆ
ಕಾಳಜಿವಹಿಸುವ
ಮಾಹಿತಿಯನ್ನು
ನೀಡುತ್ತಾರೆ.
ಇದರಿಂದ
ಸಮಾಜದ
ಆರೋಗ್ಯ
ಉತ್ತಮಗೊಳ್ಳುತ್ತದೆ.
ಆರೋಗ್ಯಕರ
ಸಮಾಜ,
ದೇಶದ
ಶಕ್ತಿಯಾಗುತ್ತದೆ.
ಕೆಲವು
ಪ್ರಮುಖ
ಧ್ಯೇಯೋದ್ದೇಶಗಳು:
*
ಅಧಿಕ
ರಕ್ತದೊತ್ತಡಕ್ಕೆ
ಕಾರಣ
ಮತ್ತು
ತಡೆಯುವ
ನಿಟ್ಟಿನಲ್ಲಿ
ಜನಸಾಮಾನ್ಯರು
ಕೈಗೊಳ್ಳಬೇಕಾದ
ಮುನ್ನೆಚ್ಚರಿಕೆಗಳು
*
ವಿವಿಧ
ರೋಗಗಳಿಗೆ
ತುತ್ತಾಗುವ
ಕಾರಣಗಳು
ಮತ್ತು
ಅದರಿಂದ
ಕಾಪಾಡಿಕೊಳ್ಳುವ
ಬಗ್ಗೆ
ಮಾಹಿತಿಗಳು
*
ಸಾಂಕ್ರಾಮಿಕ
ರೋಗಗಳಿಗೆ
ತುತ್ತಾಗದಿರಲು
ಕೈಗೊಳ್ಳಬೇಕಾದ
ಕ್ರಮಗಳು
*
ಕುಡಿಯುವ
ನೀರಿದ
ಸದ್ಬಳಕೆ,
ಬಯಲು
ಶೌಚಾಲಯದ
ಅಪಾಯಗಳು
ಮೊದಲಾದವು
ಹಿಂದಿನ
ವರ್ಷಗಳಲ್ಲಿ
ಹಮ್ಮಿಕೊಳ್ಳಲಾದ
ಅಭಿಯಾನದ
ಪ್ರಮುಖ
ಧ್ಯೇಯವಾಕ್ಯಗಳು:
*
1950
ರಲ್ಲಿ
-
ನಿಮ್ಮ
ಆರೋಗ್ಯಕ್ಕಾಗಿ
ಲಭ್ಯವಿರುವ
ಸೇವೆಗಳ
ಬಗ್ಗೆ
ಅರಿಯಿರಿ
"Know
your
Health
Services".
*1951
ರಲ್ಲಿ
-
ನಿಮ್ಮ
ಮತ್ತು
ವಿಶ್ವದ
ಎಲ್ಲಾ
ಮಕ್ಕಳಿಗೆ
ಉತ್ತಮ
ಆರೋಗ್ಯ
"Health
for
your
Child
and
World's
Children".
*1952
ರಲ್ಲಿ
-
ಆರೋಗ್ಯಕರ
ಪರಿಸರದಿಂದ
ಆರೋಗ್ಯಕರ
ಸಮಾಜ
"Healthy
surroundings
make
Healthy
people".
*1953
ರಲ್ಲಿ
-
ಆರೋಗ್ಯವೇ
ಭಾಗ್ಯ
"Health
is
Wealth"
ಈ
ವರ್ಷದ
ಧ್ಯೇಯವಾಕ್ಯ
ವಿಶ್ವ
ಆರೋಗ್ಯ
ಸಂಸ್ಥೆ
ಆಹಾರದ
ಮೂಲಕ
ಆಗಮಿಸುವ
ರೋಗಗಳ
ಕಾಳಜಿಯನ್ನು
ಈ
ವರ್ಷದ
ವಿಷಯವನ್ನಾಗಿ
ಆರಿಸಿಕೊಂಡಿದೆ.
"From
farm
to
plate,
make
food
safe."
(ಗದ್ದೆಯಿಂದ
ತಟ್ಟೆಗೆ,
ನಿಮ್ಮ
ಆಹಾರ
ಸುರಕ್ಷಿತವಾಗಿರಲಿ)
ಎಂಬ
ಧ್ಯೇಯವಾಕ್ಯವನ್ನು
ಆಯ್ದುಕೊಂಡಿದೆ.
ಲಾಭ
ಮಾಡುವ
ಗುರಿಯಿಂದ
ಕೃತಕವಾಗಿ
ಬೆಳೆಯನ್ನು
ಪರಿವರ್ತಿಸುವ
ರಾಸಾಯನಿಕ
ಮತ್ತು
ಇತರ
ವಿಷಕಾರಿ
ವಸ್ತುಗಳ
ಬಗ್ಗೆ
ಅರಿವು
ಮೂಡಿಸುವುದು
ಈ
ಯೋಜನೆಯ
ಪ್ರಮುಖ
ಯೋಜನೆಯಾಗಿದೆ.
ಭಾಗವಹಿಸುವಿರಲ್ಲವೇ?