Just In
- 35 min ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 2 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 4 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
Don't Miss
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Movies Srirasthu shubhamasthu: ನಿಧಿ ಹುಡುಕಲು ಹೋದ ಸೊಸೆ ಮಾವನಿಗೆ ಸಿಕ್ಕಿದ್ದು ಬರೀ ಬೂದಿನಾ?
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಕನ್ಗುನ್ಯಾಕ್ಕೆ ಪರಿಣಾಮಕಾರಿ ಮನೆಮದ್ದು
ಚಿಕನ್ಗುನ್ಯಾ ಎಂಬ ಕಾಯಿಲೆ ರೋಗಿಯನ್ನು ಜರ್ಝರಿತಗೊಳಿಸುತ್ತದೆ. ಗಂಟುಗಳಲ್ಲಿ ನೋವನ್ನು ತರುವ ಈ ಕಾಯಿಲೆ ಕೆಲವೊಮ್ಮೆ ತೀಕ್ಷ್ಣ ಔಷಧಕ್ಕೂ ಜಗ್ಗುವುದಿಲ್ಲ. ಮಕ್ಕಳು ವೃದ್ಧರು ಹೀಗೆ ಎಲ್ಲರನ್ನೂ ಈ ಕಾಯಿಲೆ ಆವರಿಸಿಕೊಂಡಿದೆ. ಸರ್ಕಾರ ಈ ರೋಗಕ್ಕಾಗಿ ಮಾತ್ರೆ ಔಷಧಗಳನ್ನು ನೀಡಿದ್ದರೂ ಕೆಲವೆಡೆಗಳಲ್ಲಿ ಇದು ತನ್ನ ನೋವನ್ನು ಇನ್ನೂ ಉಂಟು ಮಾಡುತ್ತಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಹುರೂಪಿ ಕ್ಯಾರೆಟ್ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗಲಿದೆ?
ಭಾರತದಲ್ಲಿ ಈ ರೋಗ ಪ್ರಕಾರ ಹೆಚ್ಚು ಕಂಡುಬಂದಿದ್ದು ಇದರ ತೀವ್ರತೆ ಹೆಚ್ಚಿತ್ತು. ಚಿಕನ್ಗುನ್ಯಾ ಜ್ವರವು ಗಂಟು ನೋವನ್ನು ತಂದು ಅದರ ಪ್ರಾಬಲ್ಯತೆ ಕೆಲವು ತಿಂಗಳವರೆಗೆ ಮಾಯುವುದಿಲ್ಲ. ಮೈ ಕೈ ನೋವು ಈ ಸಮಯದಲ್ಲಿ ವಿಪರೀತವಾಗಿದ್ದು, ಸುಸ್ತು, ಹಸಿವೆ ಇಲ್ಲದಿರುವುದು, ನಡೆಯಲು ಸಾಧ್ಯವಾಗದೇ ಇರುವಂಥದ್ದು ಈ ರೋಗದ ಲಕ್ಷಣವಾಗಿದೆ.
ಚಿಕನ್ಗುನ್ಯಾಕ್ಕೆ ತಕ್ಷಣ ಪರಿಹಾರ ನೀಡುವ ಮನೆ ಮದ್ದು ಇಂದಿಗೂ ಚಾಲ್ತಿಯಲ್ಲಿದೆ. ಇವುಗಳು ಒಮ್ಮೊಮ್ಮೆ ಶಾಶ್ವತ ಪರಿಹಾರವನ್ನು ಈ ರೋಗಕ್ಕೆ ನೀಡಬಹುದು. ಅವು ಯಾವುವು ಎಂಬುದನ್ನು ಇಲ್ಲಿ ನೋಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೋಡಂಬಿಯ ವಿಸ್ಮಯಕಾರಿ 7 ಆರೋಗ್ಯ ಪ್ರಯೋಜನಗಳು
ಎಳನೀರು:
ಚಿಕನ್ಗುನ್ಯಾ ರೋಗಾಣು ಲಿವರ್ (ಜಠರದಲ್ಲಿ) ಅಭಿವೃದ್ಧಿಯಾಗುತ್ತದೆ. ಎಳನೀರಿಗೆ ಈ ರೋಗಾಣುವನ್ನು ಜಠರದಿಂದ ಹೊರಹಾಕುವ ಸಾಮರ್ಥ್ಯವಿದ್ದು ಚಿಕನ್ಗುನ್ಯಾ ಸಂದರ್ಭದಲ್ಲಿ ಉಪಶಮನ ನೀಡುತ್ತದೆ.
ತುಳಸಿ ಎಲೆಗಳು:
ತುಳಸಿ ಎಲೆಯು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಮಗೆ ನೀಡುತ್ತದೆ. ಪ್ರತೀ ದಿನ ತುಳಸೀ ಎಲೆಗಳನ್ನು ಜಗಿದು ಅದರ ರಸ ಸೇವಿಸುವುದು ಚಿಕನ್ಗುನ್ಯಾದ ಜ್ವರವನ್ನು ಕಡಿಮೆ ಮಾಡುತ್ತದೆ.
ಬೀಜರಹಿತ ದ್ರಾಕ್ಷಿ:
ಚಿಕನ್ಗುನ್ಯಾದ ಲಕ್ಷಣಗಳನ್ನು ಇಳಿಕೆ ಮಾಡಿ ಶಕ್ತಿಯನ್ನು ಪುನಃ ಪಡೆಯಲು ಒಣಗಿದ ಬೀಜರಹಿತ ದ್ರಾಕ್ಷಿಯನ್ನು ಹಾಲಿನೊಂದಿಗೆ ಪ್ರತೀ ದಿನ ತೆಗೆದುಕೊಳ್ಳುವುದು ಉತ್ತಮ ಪರಿಹಾರವಾಗಿದೆ.
ಲವಂಗ ಮತ್ತು ಬೆಳ್ಳುಳ್ಳಿ:
ಬೆಳ್ಳುಳ್ಳಿ ಅಥವಾ ಲವಂಗದೆಣ್ಣೆಯನ್ನು ಕಾಳುಮೆಣಸಿನ ಹುಡಿಯೊಂದಿಗೆ ಪೇಸ್ಟ್ ಮಾಡಿಕೊಳ್ಳಿ ನಂತರ ಇದನ್ನು ನೋವಿರುವ ಗಂಟುಗಳಿಗೆ ಹಚ್ಚಿಕೊಳ್ಳಿ. ಗಂಟು ನೋವನ್ನು ಈ ಮದ್ದು ಪರಿಹರಿಸಿ ಶೀಘ್ರ ಗುಣಮುಖರಾಗಲು ನಿಮಗೆ ಸಹಾಯ ಮಾಡುತ್ತದೆ.
ಮೆಗ್ನೇಶಿಯಂ ಸಲ್ಫೇಟ್ :
ಏಪ್ಸಂ ಉಪ್ಪು (ಮೆಗ್ನೇಶಿಯಂ ಸಲ್ಫೇಟ್) ಅನ್ನು ಬೆಚ್ಚಗಿನ ನೀರಿನೊಂದಿಗೆ ಸ್ನಾನದ ಟಬ್ನಲ್ಲಿ ಮಿಶ್ರ ಮಾಡಿ ನಂತರ ಇದರಲ್ಲಿ ಕೆಲ ಸಮಯ ನಿಮ್ಮ ದೇಹವನ್ನು ತೋಯಿಸಿ. ಇದರೊಂದಿಗೆ ಬೇವಿನ ಎಲೆಗಳನ್ನು ನೀವು ಬಳಸಬಹುದು. ಇದು ದೇಹವನ್ನು ವಿಶ್ರಮಗೊಳಿಸಿ ನೋವಿನಿಂದ ಮುಕ್ತಿ ನೀಡುತ್ತದೆ.
ಹಸಿ ಕ್ಯಾರೇಟ್:
ಚಿಕನ್ಗುನ್ಯಾದಿಂದ ಬಳಲುತ್ತಿರುವ ವ್ಯಕ್ತಿಗೆ ಹಸಿ ಕ್ಯಾರೇಟ್ ಉತ್ತಮ ಸಿದ್ಧೌಷಧವಾಗಿದೆ. ಇದರಲ್ಲಿರುವ ರೋಗನಿರೋಧಕ ಶಕ್ತಿ ಗಂಟು ನೋವನ್ನು ಉಪಚರಿಸಿ ದೇಹಕ್ಕೆ ಸಾಮರ್ಥ್ಯವನ್ನು ನೀಡುತ್ತದೆ.
ಅಶ್ವಗಂಧ:
ಚಿಕನ್ಗುನ್ಯಾದಿಂದ ಬಳಲುತ್ತಿರುವ ದೇಹಕ್ಕೆ ಇದು ಪ್ರತಿರಕ್ಷಣಾ ಔಷಧಿಯಾಗಿ ನೆರವಾಗುತ್ತದೆ. ಇದರಲ್ಲಿರುವ ವೈದ್ಯಕೀಯ ಅಂಶಗಳು ಸ್ವಾಸ್ಥ್ವವನ್ನು ವರ್ಗಿಸುತ್ತದೆ. ರೋಗಾಣುವಿನ ವಿರುದ್ಧ ಹೋರಾಡುವ ಪ್ರತಿರೋಧ ಶಕ್ತಿಯು ಅಶ್ವಗಂಧದ ಎಲೆಯನ್ನು ನಿತ್ಯವೂ ಸೇವಿಸುವುದರಿಂದ ದೊರೆಯುತ್ತದೆ.