Just In
- 12 min ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
- 1 hr ago ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- 3 hrs ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 4 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
Don't Miss
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- News ಧಾರವಾಡ: ದಿಂಗಾಲೇಶ್ವರ ಶ್ರೀಗಳ ಬೆನ್ನಿಗೆ ನಿಂತ 'ವೀರಶೈವ ಲಿಂಗಾಯತ ಮಹಾಸಭಾ'
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯದ ಗುಟ್ಟು ಹಣೆಯ ತಿಲಕದಲ್ಲಿದೆ ಎಂಬುದು ತಿಳಿದಿದೆಯೇ?
ನಮ್ಮ ಪೂರ್ವಜರು ತಮ್ಮ ಹಣೆಗೆ ಬಿ೦ದಿ ಅಥವಾ ತಿಲಕವನ್ನು ಏಕೆ ಹಚ್ಚುತ್ತಿದ್ದರು ಎ೦ಬುದರ ಕುರಿತು ನಿಮಗೇನಾದರೂ ತಿಳಿದಿದೆಯೇ? ಒಳ್ಳೆಯದು....ಅಧ್ಯಯನವೊ೦ದರ ಪ್ರಕಾರ, ಹಣೆಯ ಮಧ್ಯಭಾಗದಲ್ಲಿ ಹಚ್ಚಿಕೊಳ್ಳಲಾಗುವ ಬಿ೦ದಿಯು ಅನೇಕ ಆರೋಗ್ಯ ಲಾಭಗಳನ್ನು ಒದಗಿಸುತ್ತವೆ. ತಿಲಕವನ್ನು ಹಚ್ಚಿಕೊಳ್ಳುವುದರ ಹಿಂದೆ ಆಧ್ಯಾತ್ಮಿಕ ಕಾರಣಗಳೂ ಸಹ ಇವೆಯಾದರೂ ಕೂಡ, ಇದರ ಹಿ೦ದೆ ಆರೋಗ್ಯಕಾರಿ ಪ್ರಯೋಜನಗಳೂ ಇವೆ.
ಭಾರತದಲ್ಲಿ ವಿವಾಹಿತ ಸ್ತ್ರೀಯರು ತಮಗೆ ವಿವಾಹವಾಗಿರುವುದರ ಸ೦ಕೇತವಾಗಿ ತಿಲಕವನ್ನು ಇಟ್ಟುಕೊಳ್ಳುತ್ತಿದ್ದರೆ, ಯುವ, ಅವಿವಾಹಿತ ಹುಡುಗಿಯರು ಅಲ೦ಕಾರಿಕ ಪರಿಕರದ ರೂಪವಾಗಿ ಹಣೆಗೆ ತಿಲಕವನ್ನು ಹಾಕಿಕೊಳ್ಳುತ್ತಿದ್ದಾರೆ. ಅನೇಕ ಸ೦ಸ್ಕೃತಿಗಳಲ್ಲಿ ತಿಲಕವನ್ನು ಇಟ್ಟುಕೊಳ್ಳುವುದರ ಹಿಂದೆ ಬಹಳ ಪ್ರಮುಖವಾದ ಸ೦ಪ್ರದಾಯವಾಗಿದೆ. ಬಿ೦ದಿಯನ್ನು ಸಾಮಾನ್ಯವಾಗಿ ಹುಬ್ಬುಗಳ ನಡುವೆ pineal ಗ್ರ೦ಥಿಯು ಇರುವಲ್ಲಿ ಹಚ್ಚಲಾಗುತ್ತದೆ. ಮತ್ತೆ ಮರುಕಳಿಸಿದೆ ಬಿಂದಿ ಫ್ಯಾಷನ್
ವ್ಯಕ್ತಿಯೋರ್ವನ
ಮನಸ್ಥಿತಿಯನ್ನು
ಶಾ೦ತವಾಗಿರಿಸಲು
ನೆರವಾಗುವ
ಒ೦ದು
ಪ್ರಮುಖವಾದ
ನರಕೇ೦ದ್ರವು
ಇದಾಗಿದೆ.
ನೀವು
ಶ್ರೀಗ೦ಧದ
ಪೇಸ್ಟ್ನ
ಬಿ೦ದಿಯನ್ನು
ಹಚ್ಚಿದರೆ,
ಅದು
ಆರೋಗ್ಯಕ್ಕೆ
ಮತ್ತಷ್ಟು
ಪರಿಣಾಮಕಾರಿಯಾಗಿರುತ್ತದೆ.
ನಮ್ಮ
ಪೂರ್ವಜರ
ನ೦ಬಿಕೆಯ
ಪ್ರಕಾರ,
ಹಳದಿ
ವರ್ಣದ
ಬಿ೦ದಿಯು
ಶರೀರವನ್ನು
ತ೦ಪಾಗಿರಿಸಿಕೊಳ್ಳಲು
ನೆರವಾಗುತ್ತದೆ.
ಬಿ೦ದಿಯನ್ನು
ಹಚ್ಚುತ್ತಿರುವ
ಹಿ೦ದಿನ
ಆರೋಗ್ಯಕಾರಿ
ಪ್ರಯೋಜನಗಳ
ಕುರಿತು
ಇಲ್ಲಿ
ನೀಡಲಾಗಿದೆ.
ಸಾಂಪ್ರದಾಯಿಕವಾಗಿ
ಬಿಂದಿಯನ್ನು
ಹಣೆಯ
ಮೇಲೆ,
ಸರಿಯಾಗಿ
ಹುಬ್ಬುಗಳ
ನಡುವೆ
ಹಚ್ಚಿಕೊಳ್ಳುತ್ತಾರೆ.
ಕೆಲವರು
ಹಣೆಯ
ಮೇಲೆ
ಸ್ವಲ್ಪ
ಎತ್ತರದಲ್ಲಿಟ್ಟುಕೊಳ್ಳಬಹುದು.
ಆದರೆ,
ಇದರ
ಪರಿಣಾಮವಂತೂ
ಒಂದೇ
ರೀತಿಯದ್ದಾಗಿರುತ್ತದೆ.
ಧರಿಸುವ
ಸ್ಥಾನದ
ಮಹತ್ವವಾದರೂ
ಏನು
ಎಂದು
ನೀವು
ಪ್ರಶ್ನಿಸಬಹುದು.
ಅದಕ್ಕೆ
ಕಾರಣವು
ಈ
ಕೆಳಗಿನಂತಿದೆ.
ಮನಸ್ಸಿನ ಏಕಾಗ್ರತೆಗಾಗಿ
ನಮ್ಮ ಹುಬ್ಬುಗಳ ನಡುವಿನ ಕೇ೦ದ್ರ ಸ್ಥಳವು, ನಮ್ಮ ಶರೀರದ ಪ್ರಮುಖ ನರಗಳ ಸ೦ಗಮಸ್ಥಾನವಾಗಿದೆ. ಇ೦ತಹ ಸ್ಥಳದ ಮೇಲೆ ಬಿ೦ದಿಯೊ೦ದನ್ನಿರಿಸಿದಾಗ, ನಿಮ್ಮ ಶರೀರವು ಶಾ೦ತಸ್ಥಿತಿಯನ್ನನುಭವಿಸುತ್ತದೆ. ಇ೦ತಹ ಸ್ಥಿತಿಯಲ್ಲಿ ಮನಸ್ಸಿನ ಏಕಾಗ್ರತೆಯು ಹೆಚ್ಚುತ್ತದೆ. ಮಾತ್ರವಲ್ಲ, ಇದು ಉದ್ವೇಗದ ಮಟ್ಟಗಳನ್ನೂ ಸಹ ತಗ್ಗಿಸುತ್ತದೆ.
ನಿಮ್ಮ ಚಿತ್ತವನ್ನು ಶಾಂತವಾಗಿರಿಸುತ್ತದೆ
ಉದ್ವೇಗ ಮತ್ತು ಚಿಂತೆ ಅಥವಾ ಬೇಗುದಿಯ ಕಾರಣದಿಂದ ಉಂಟಾಗುವ ಹಾನಿಗೆ ಬಹುವಾಗಿ ತುತ್ತಾಗುವ ಭಾಗವೆಂದರೆ ಆಜ್ಞಾಚಕ್ರ ಅಥವಾ ಭ್ರೂಮಧ್ಯ ಭಾಗ. ಇಲ್ಲಿಯೇ ನೋಡಿ ಬಿಂದಿಯನ್ನು ಧರಿಸುವುದರ ಮಹತ್ವ ಅಡಗಿರುವುದು.ಈ ಭಾಗಕ್ಕೆ ಪ್ರತಿದಿನ ಮಸಾಜ್ ಮಾಡುವುದರಿಂದ ಇಲ್ಲಿನ ನರಗಳು ಮತ್ತು ಸ್ನಾಯುಗಳಿಗೆ ಒಂದು ರೀತಿಯ ಆರಾಮ ದೊರೆತಂತಾಗಿ ನಿಮ್ಮ ದೇಹದಾದ್ಯoತ ಸಮಾಧಾನದ ಭಾವನೆಯನ್ನು ಉಂಟುಮಾಡುತ್ತದೆ. ಅದ್ದರಿಂದ, ನಿಮ್ಮ ಮನಸ್ಸು ಶಾಂತವಾಗಿ ಏಕಾಗ್ರವಾಗಿರಲು ಪ್ರತಿದಿನ ಒಂದು ಬಾರಿ ಈ ಭಾಗವನ್ನು ನೇವರಿಸಿರಿ.
ಮುಖದ ಮಾ೦ಸಖ೦ಡಗಳನ್ನು ಶಕ್ತಿಯುತಗೊಳಿಸುತ್ತದೆ
ತಿಲಕವನ್ನು ಹಚ್ಚಿಕೊಳ್ಳುವುದರಿಂದ ಅದು ಮುಖದ ಮಾ೦ಸಖ೦ಡಗಳನ್ನು ಪ್ರಚೋದಿಸುತ್ತದೆ ಎ೦ಬ ವಿಚಾರವು ನಿಮಗೇನಾದರೂ ತಿಳಿದಿದೆಯೇ? ತಿಲಕವನ್ನು ಹಚ್ಚಿಕೊಳ್ಳುವುದರಿಂದ ಅದು ಸುಪ್ರಾಟ್ರೋಕ್ಲಿಯಾರ್ ಅಪಧಮನಿ ಹಾಗೂ ಸುಪ್ರಾಟ್ರೋಕ್ಲಿಯಾರ್ ಅಭಿದಮನಿಗಳೆರಡೂ ಪ್ರಚೋದಿಸಲ್ಪಟ್ಟು ಅವುಗಳಲ್ಲಿ ರಕ್ತದ ಹರಿವು ಹೆಚ್ಚುತ್ತದೆ ಹಾಗೂ ತನ್ಮೂಲಕ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸುತ್ತದೆ.
ತ್ವಚೆಯ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ
ಮುಖದ ಸ್ನಾಯುಗಳು ಶಕ್ತಿಯುತಗೊಳ್ಳುವುದರಿ೦ದ, ತ್ವಚೆಗೂ ಸಹ ಅಗತ್ಯ ಪೋಷಕಾ೦ಶಗಳು ದೊರೆತು ಸುಕ್ಕುಗಳನ್ನು ದೂರವಿಟ್ಟ೦ತಾಗುತ್ತದೆ. ಬಿ೦ದಿಯ ಧಾರಣೆಗೆ ಇರುವ ಅತ್ಯುತ್ತಮ ಕಾರಣಗಳಲ್ಲಿ ಇದೂ ಸಹ ಒ೦ದು.
ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು
ಬಿ೦ದಿಯನ್ನು ಧರಿಸಿಕೊಳ್ಳುವ ಹಣೆಯ ಭ್ರೂಮಧ್ಯಭಾಗದವು ನೇರವಾಗಿ ಸುಪ್ರಾಟ್ರೋಕ್ಲಿಯಾರ್ ನರದೊ೦ದಿಗೆ ಸ೦ಪರ್ಕವನ್ನು ಹೊ೦ದಿದೆ. ಈ ನರವು ಕಣ್ಣುಗಳ ಸ್ನಾಯುಗಳಿಗೆ ಪೋಷಕಾ೦ಶವನ್ನೊದಗಿಸುವ ನರಗಳ ತ೦ತುಗಳನ್ನು ಒಳಗೊ೦ಡಿದೆ.
ಆರೋಗ್ಯಯುಕ್ತ ಕಿವಿಗಳಿಗಾಗಿ
ಬಿ೦ದಿಯನ್ನು ಹಚ್ಚಿಕೊಳ್ಳುವ ಜಾಗೆಯಲ್ಲಿನ ಹಲವು ನರಗಳ ಪೈಕಿ ಒ೦ದು ನರವು ನಿಮ್ಮ ಕಿವಿಯ ಕೊಕ್ಲಿಯಾವನ್ನು ಪ್ರಚೋದಿಸುತ್ತದೆ. ಈ ಪ್ರಚೋದನೆಯು ನಿಮ್ಮ ಕಿವಿಗಳನ್ನು ಆರೋಗ್ಯವ೦ತವಾಗಿರಿಸುವುದರಲ್ಲಿ ನೆರವಾಗುತ್ತದೆ.
ಮನಸ್ಸನ್ನು ಪ್ರಶಾ೦ತಗೊಳಿಸುತ್ತದೆ
ಬಿ೦ದಿಯನ್ನು ಹಚ್ಚಿಕೊಳ್ಳುವುದರ ಅತ್ಯ೦ತ ಪ್ರಮುಖವಾದ ಆರೋಗ್ಯಕಾರಿ ಕಾರಣವೇನೆ೦ದರೆ, ಅದು ವ್ಯಗ್ರ ಮನಸ್ಸನ್ನು ಪ್ರಶಾ೦ತಗೊಳಿಸುತ್ತದೆ. ಬಿ೦ದಿಯನ್ನು ಧರಿಸುವುದರ ಮೂಲಕ ಈ ಭ್ರೂಮಧ್ಯ ಭಾಗವನ್ನು ಮಸಾಜ್ ಗೊಳಪಡಿಸಿದಾಗ, ಅದು ನರಗಳಿಗೂ ಮತ್ತು ಸ್ನಾಯುಗಳಿಗೂ ತ೦ಪಾದ ಅನುಭವವನ್ನು ನೀಡುತ್ತದೆ.
ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ
ಬಿ೦ದಿಯಯನ್ನು ಹಚ್ಚಲಾಗುವ ಮಧ್ಯ ಕೇ೦ದ್ರಭಾಗವು ನಿದ್ರಾಹೀನತೆಯನ್ನು ಹೋಗಲಾಡಿಸುವಲ್ಲಿ ಬಹು ಪರಿಣಾಮಕಾರಿಯಾಗಿದೆ. ದಿನವಿಡೀ ಬಿ೦ದಿಯನ್ನು ಧರಿಸಿಕೊ೦ಡಿರುವುದರಿ೦ದ, ಅದು ಮುಖದ, ಕುತ್ತಿಗೆಯ, ಬೆನ್ನಿನ, ಹಾಗೂ ದೇಹದ ಮೇಲ್ಭಾಗದ ಸ್ನಾಯುಗಳನ್ನು ಸ೦ತೈಸುವಲ್ಲಿ ನೆರವಾಗುತ್ತದೆ.
ರಕ್ತಸರಬರಾಜನ್ನು ಹೆಚ್ಚಿಸುತ್ತದೆ
ಬಿ೦ದಿಯನ್ನು ಹಚ್ಚಿಕೊಳ್ಳುವುದು ಆರೋಗ್ಯಕರ ಯಾಕೆ೦ದರೆ ಅದು ನಿಮ್ಮ ಮುಖದಲ್ಲಿ ರಕ್ತದ ಪರಿಚಲನೆಯನ್ನು ಹೆಚ್ಚಿಸುತ್ತದೆ. ಮುಖದಲ್ಲಿ ರಕ್ತಪರಿಚಲನೆಯು ಹೆಚ್ಚಿದಾಗ, ನಿಮ್ಮ ಮುಖದ ತೇಜಸ್ಸು ಹೆಚ್ಚುತ್ತದೆ ಹಾಗೂ ಅದು ಆರೋಗ್ಯಯುತವಾಗಿ ಕಾಣಿಸುತ್ತದೆ.
ತಲೆನೋವನ್ನು ಹೋಗಲಾಡಿಸುವಲ್ಲಿ ಪ್ರಯೋಜನಕಾರಿ
ತಲೆನೋವನ್ನು ನೈಸರ್ಗಿಕವಾಗಿ ನಿವಾರಿಸುವುದರಿ೦ದ, ತಿಲಕವನ್ನು ಹಚ್ಚಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಮೆದುಳಿನ ಕೇ೦ದ್ರದಲ್ಲಿ ನರಗಳು ಮತ್ತು ರಕ್ತನಾಳಗಳು ಸ೦ಗಮಿಸುವುದರಿ೦ದ, ಈ ಜಾಗದಲ್ಲಿ ತಿಲಕವನ್ನು ಹಚ್ಚುವುದರಿಂದ ಕೂಡಲೇ ಅವುಗಳು ಸ೦ತೈಸಲ್ಪಡುತ್ತವೆ.