Just In
- 7 min ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 39 min ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- 58 min ago ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- 2 hrs ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
Don't Miss
- Movies Bhagyalakshmi: ಕನ್ನಿಕಾ ಮೇಡಂ ಚಿನ್ನಾಭರಣ ಕದ್ದರಾ? ಆಕೆ ಅಹಂ ಇಳಿಸಲು ಮಾಡಿದ ಐಡಿಯಾ?
- News 140 ಕೋಟಿ ಜನ ನಿಮ್ಮನ್ನು ತಿರಸ್ಕರಿಸಿರುವುದರಲ್ಲಿ ಅಚ್ಚರಿ ಏನಿಲ್ಲ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕೆ
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಿಂಬೆಯುಕ್ತ ನೀರಿನ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳು
ಲಿ೦ಬೆಯ ಅಪರಿಮಿತ ಆರೋಗ್ಯಕಾರಿ ಪ್ರಯೋಜನಗಳ೦ತೂ ನಿಮ್ಮನ್ನು ದ೦ಗುಬಡಿಸುವ೦ತಹದ್ದು. ಲಿ೦ಬೆಹಣ್ಣುಗಳಲ್ಲಿ ಫ್ಲೇವನಾಯ್ಡ್ (flavonoid) ಗಳೆ೦ಬ ರಾಸಾಯನಿಕಗಳಿದ್ದು, ಅವು ಆ೦ಟಿ ಆಕ್ಸಿಡೆ೦ಟ್ ಹಾಗೂ ಅರ್ಬುದ ರೋಗದ ವಿರುದ್ಧ ಸೆಣಸಾಡುವ ಗುಣಲಕ್ಷಣಗಳನ್ನು ಹೊ೦ದಿರುವ ಘಟಕಗಳನ್ನೊಳಗೊ೦ಡಿವೆ.
ಮಾತ್ರವಲ್ಲದೇ, ಲಿ೦ಬೆ ಹಣ್ಣು ಮಧುಮೇಹ, ಮಲಬದ್ಧತೆ, ಅಧಿಕ ರಕ್ತದೊತ್ತಡ, ಜ್ವರ, ಅಜೀರ್ಣತೆ, ಮತ್ತು ಇನ್ನೂ ಅನೇಕ ಇತರ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ, ಲಿ೦ಬೆಯು ತ್ವಚೆ, ಕೂದಲು, ಹಾಗೂ ಹಲ್ಲುಗಳ ಆರೋಗ್ಯ ವರ್ಧನೆಯನ್ನು೦ಟು ಮಾಡುತ್ತದೆ. ಪ್ರತಿದಿನ ಬೆಳಿಗೆ ಖಾಲಿ ಹೊಟ್ಟೆಯಲ್ಲಿ ಲಿ೦ಬೆಯ ರಸವನ್ನು ಕುಡಿಯುವುದರಿ೦ದ ತೂಕ ನಷ್ಟವನ್ನು ಹೊ೦ದಲು ಸಹಾಯವಾಗುತ್ತದೆ. For video click here
ಲಿ೦ಬೆಯ
ರಸವನ್ನು
ನಾನಾ
ರೂಪಗಳಲ್ಲಿ
ಸೇವಿಸಬಹುದು.ಆದಾಗ್ಯೂ,
ಲಿ೦ಬೆಹಣ್ಣಿನಲ್ಲಿ
ಪ್ರಬಲವಾದ
ಆಮ್ಲಗಳಿರುವುದರಿ೦ದ
ಅದರ
ರಸದ
ಸೇವನೆಯ
ಪ್ರಮಾಣವನ್ನು
ನಿಯ೦ತ್ರಿಸಬೇಕಾಗುತ್ತದೆ.
ಕೀಲುಗಳ
ನೋವಿನಿ೦ದ
ಬಳಲುತ್ತಿರುವವರು
ಲಿ೦ಬೆಯ
ರಸವನ್ನು
ಸೇವಿಸಬಾರದು.
ಏಕೆ೦ದರೆ,
ಲಿ೦ಬೆಯು
ಕೀಲುಗಳ
ನೋವನ್ನು
ಮತ್ತಷ್ಟು
ಹೆಚ್ಚಿಸುತ್ತದೆ.
ಇದನ್ನು
ಹೊರತುಪಡಿಸಿದರೆ,
ನೀವು
ಪರಿಗಣಿಸಬೇಕಾಗಿರುವ
ಅನೇಕ
ಆರೋಗ್ಯ
ಸ೦ಬ೦ಧಿ
ಪ್ರಯೋಜನಗಳನ್ನು
ಲಿ೦ಬೆಯು
ಒಳಗೊ೦ಡಿದೆ.
ಲಿ೦ಬೆಹಣ್ಣಿನ
ಆರೋಗ್ಯ
ಸ೦ಬ೦ಧಿ
ಪ್ರಯೋಜನಗಳ
ಪೈಕಿ
ಕೆಲವನ್ನು
ಈ
ಕೆಳಗೆ
ನೀಡಲಾಗಿದೆ.
ಬೆಚ್ಚನೆ
ನೀರಿನ
ಜೊತೆ
ಲಿಂಬೆ
ಮತ್ತು
ಜೇನು
ಸೇವನೆ
ಏಕೆ
ಮಹತ್ವಪೂರ್ಣ
ಇದು ವಿಟಮಿನ್ ಸಿಯ ಸಮೃದ್ಧ ಆಗರ
ನಿಂಬೆ ಎಂದರೆ ವಿಟಮಿನ್ ಸಿ, ವಿಟಮಿನ್ ಸಿ ಎಂದರೆ ನಿಂಬೆ ಇದು ನಮಗೆ ಪ್ರೈಮರಿ ಸ್ಕೂಲ್ನಿಂದಲು ಗೊತ್ತಿರುವ ವಿಚಾರವೇ. ನಿಂಬೆಯಲ್ಲಿರುವ ಸಮೃದ್ಧ ವಿಟಮಿನ್ ಸಿಯು ನಮ್ಮ ದೇಹಕ್ಕೆ ಅಗತ್ಯವಾಗಿರುವ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಯಾವಾಗ ನಿಮ್ಮ ದೇಹದಲ್ಲಿ ವಿಟಮಿನ್ ಸಿ ಪ್ರಮಾಣ ಕುಸಿಯುತ್ತದೆಯೋ, ಆಗ ನಿಮ್ಮ ದೇಹದಲ್ಲಿ ರಿಪೇರಿ ಕೆಲಸವು ನಡೆಯುವುದಿಲ್ಲ. ಆದರೆ ಈ ಸಿಟ್ರಸ್ ಪಾನೀಯವನ್ನು ಸೇವಿಸಿದರೆ ಇದರಲ್ಲಿರುವ ಪೊಟಾಶಿಯಂ, ದೇಹದಲ್ಲಿರುವ ಮೆದುಳು ಮತ್ತು ನರ ವ್ಯೂಹವನ್ನು ಪ್ರಚೋದಿಸುತ್ತದೆ.
ಇದು ವಿಟಮಿನ್ ಸಿಯ ಸಮೃದ್ಧ ಆಗರ
ಪೊಟಾಶಿಯಂ ನಮ್ಮ ದೇಹದಲ್ಲಿ ಫ್ರೀ ರ್ಯಾಡಿಕಲ್ಗಳನ್ನು ಕಡಿಮೆ ಮಾಡುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದೆಲ್ಲ ಒಟ್ಟಾರೆಯಾಗಿ ಏನನ್ನು ಹೇಳುತ್ತವೆ? ಹೆಚ್ಚು ಶಕ್ತಿ, ಸ್ವಚ್ಛ ತ್ಚಚೆ, ವಯಸ್ಸಾದಂತೆ ತೋರುವುದನ್ನು ತಡೆಯುತ್ತದೆ, ರೋಗ ನಿರೋಧಕ ಶಕ್ತಿ, ಒತ್ತಡ ಕಡಿಮೆ ಮಾಡುತ್ತದೆ, ಹಾಗೂ ಹೆಚ್ಚು ಏಕಾಗ್ರತೆಯನು ನೀಡುತ್ತದೆ.
ಇದು pH ಮಟ್ಟವನ್ನು ಸಮತೋಲನದಲ್ಲಿಡುತ್ತದೆ
ನಮ್ಮ pH ಮಟ್ಟವು ದೇಹದಲ್ಲಿರುವ ಅಲ್ಕಾಲೈನ್ ಮತ್ತು ಆಸಿಡಿಕ್ ಅಂಶಗಳನ್ನು ಕುರಿತು ಮಾತನಾಡುತ್ತದೆ. ಯಾವಾಗ ನಮ್ಮ ದೇಹವು ಹೆಚ್ಚಿನ ಪ್ರಮಾಣದ ಆಸಿಡಿಕ್ ಹಂತಕ್ಕೆ ತಲುಪುತ್ತದೆಯೋ, ಆಗ ಅದು ನಮ್ಮ ದೇಹದಲ್ಲಿ ರೋಗಗಳನ್ನು ಹುಟ್ಟು ಹಾಕುತ್ತದೆ. ಇದರ ಪರಿಣಾಮವಾಗಿಯೇ ಸುಮಾರು ಜನರು ಪದೇ ಪದೇ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಆದರೆ ಇಂತಹ ಕಾಯಿಲೆಗಳು ಬರದಂತೆ ನಾವು ದೇಹವನ್ನು ತಯಾರಿ ಮಾಡಬಹುದು. ಅದಕ್ಕಾಗಿ ನಾವು ನಮ್ಮ ದೇಹಕ್ಕೆ ಅಲ್ಕಾಲೈನ್ ಅಧಿಕವಾಗಿರುವ ಆಹಾರಗಳನ್ನು ಸೇವಿಸಬೇಕು. ಇದರಿಂದ ನಿಮ್ಮ ದೇಹವು ಚೈತನ್ಯವನ್ನು ಪಡೆಯುತ್ತದೆ, ರಿಪೇರಿಯನ್ನು ಮಾಡಿಕೊಳ್ಳುತ್ತದೆ ಮತ್ತು ತನ್ನನ್ನು ತಾನು ಪುನಃಶ್ಚೇತನಗೊಳಿಸಿಕೊಳ್ಳುತ್ತದೆ. ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಅಲ್ಕಾಲೈನ್ ಅತಿ ಹೆಚ್ಚಾಗಿ ಇರುವ ಆಹಾರ ಪದಾರ್ಥವೆಂದರೆ ಅದು ನಿಂಬೆ!
ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ
ನಿಮಗೆ ಗೊತ್ತೆ ನಿಮ್ಮ ದೇಹವು ನಿಯಂತ್ರಣಕ್ಕೆ ಸಿಗದೆ ತೂಕ ಏರಿಸಿಕೊಂಡು ಹೋಗುತ್ತಿರುವಾಗ ಅದರ ಕುರಿತು ಚಿಂತೆ ಮಾಡಬೇಡಿ. ನಿಮ್ಮ ತೂಕವನ್ನು ನಿಯಂತ್ರಣಕ್ಕೆ ತರಲು ಒಂದು ಸುಲಭವಾದ ಮಾರ್ಗೋಪಾಯವಿದೆ. ಅದು ನಿಮ್ಮ ದೇಹವನ್ನು ಆದಷ್ಟು ಶೀಘ್ರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳುವಂತೆ ಮಾಡಿ, ನಿಮ್ಮ ದೇಹ ಮತ್ತು ಮನಸ್ಸನ್ನು ಸಂತೋಷವಾಗಿಡುತ್ತದೆ. ಈಟಿಂಗ್ ವೆಲ್ ಮ್ಯಾಗಜೀನ್ ಪ್ರಕಾರ ಅಲ್ಕಾಲೈನ್ ಡಯಟ್ ಮನುಷ್ಯನನ್ನು ಸಂತೋಷವಾಗಿಡುತ್ತದೆ.
ಅಲ್ಕಾಲೈನ್ ಆಹಾರಗಳನ್ನು ಹೆಚ್ಚಾಗಿ ಸೇವಿಸುವರು ತೂಕವನ್ನು ಬೇಗ ಇಳಿಸಿಕೊಳ್ಳುತ್ತಾರೆ. ಇದರ ಜೊತೆಗೆ ನಿಂಬೆಗಳಲ್ಲಿ ಪೆಕ್ಟಿನ್ ನಾರಿನಂಶವಿರುತ್ತದೆ. ಇದು ನಿಮ್ಮ ದೇಹವನ್ನು ಮರಳಿ ಸಾಮಾನ್ಯವಾಗಿ ಹೊಟ್ಟೆ ಹಸಿಯುವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ. ಇನ್ನೂ ನಿಮಗೆ ನಿಂಬೆರಸವನ್ನು ಸೇವಿಸಲು ಸರಿಯಾದ ಕಾರಣ ದೊರೆಯಲಿಲ್ಲವೆ? ತಾಳಿ, ನಿಮಗಾಗಿ ಮತ್ತೊಂದೆರಡು ಪ್ರಯೋಜನಗಳು ಕಾದು ಕುಳಿತಿವೆ.
ಜೀರ್ಣ ಶಕ್ತಿಯನ್ನು ಸುಧಾರಿಸುತ್ತದೆ
ನಿಮ್ಮ ದೇಹದಲ್ಲಿ ನೀವು ಸೇವಿಸುವ ಆಹಾರವು ಹೇಗೆ ಜೀರ್ಣವಾಗುತ್ತದೆಯೋ, ಹಾಗೆಯೇ ನಿಮ್ಮ ದೇಹವು ಸಹ ಇರುತ್ತದೆ- ಅರ್ಥವಾಗಲಿಲ್ಲವೇ, ಹೌದು ಅದೇ ನಿಮ್ಮ ಸಂತೋಷ. ನಿಮ್ಮ ದೇಹದಲ್ಲಿ ದೊಡ್ಡ ಕರುಳು ಮತ್ತು ಸಣ್ಣ ಕರುಳುಗಳು ಕಟ್ಟಿಕೊಂಡಲ್ಲಿ, ಅದು ನಿಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ನಿಂಬೆರಸವು ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರದಬ್ಬಲು ಸಹಕರಿಸುತ್ತದೆ. ನಿಂಬೆ ರಸವು ನಮ್ಮ ದೇಹದಲ್ಲಿ ಪಿತ್ತರಸವನ್ನು ಉತ್ಪಾದಿಸಲು ನೆರವಾಗುತ್ತದೆ. ಇದು ನಮ್ಮ ದೇಹಕ್ಕೆ ಆಹ್ಲಾದಕತೆಯನ್ನು ಮತ್ತು ಜೀರ್ಣ ಪ್ರಕ್ರಿಯೆಯನ್ನು ಸುಗಮ ದಾರಿಗೆ ತರಲು ನೆರವಾಗುತ್ತದೆ.
ಇದು ಕಾಫಿ ಸೇವಿಸುವ ಅಭ್ಯಾಸವನ್ನು ಬಿಡಲು ನೆರವಾಗುತ್ತದೆ.
ನಾನು ಕಾಫಿಯನ್ನು ಹೆಚ್ಚಿಗೆ ಇಷ್ಟಪಡುತ್ತೇನೆ. ಅದರ ಪರಿಮಳ, ಬಣ್ಣ, ರುಚಿ, ಸ್ವಾದ. ಓಹ್, ಎಲ್ಲವೂ ನನ್ನನ್ನು ತನ್ನೊಳಗೆ ಬರಸೆಳೆದುಕೊಳ್ಳುತ್ತದೆ. ಇನ್ನು ಪಟ್ಟಿ ಮಾಡಬೇಕೆಂದರೆ, ಇದು ನನ್ನ ನರವ್ಯೂಹ ವ್ಯವಸ್ಥೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಶಕ್ತಿಯನ್ನು ಸಹ ನೀಡುತ್ತದೆ. ಒಟ್ಟಾರೆಯಾಗಿ ನಾನು ಕಾಫಿ ಸೇವನೆಯನ್ನು 100% ರಷ್ಟು ಬಿಡಲು ನಾಲ್ಕು ತಿಂಗಳುಗಳು ಬೇಕಾಯಿತು. ಕಾಫಿ ಸೇವನೆಯನ್ನು ಸಂಪೂರ್ಣವಾಗಿ ಬಿಡಬೇಕೆಂದರೆ, ನಿಂಬೆಯನ್ನು ಪ್ರತಿನಿತ್ಯದ ಆಹಾರದಲ್ಲಿ ಸೇವಿಸುವುದು ಅತ್ಯಗತ್ಯ.
ಏಕೆಂದರೆ ಕಾಫಿ ಸೇವನೆ ಚಟಕ್ಕೆ ನೀವು ಅಂಟಿಕೊಂಡಿದ್ದರೆ ಇದನ್ನು ಬಿಡುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಕಾಫಿಯ ಬದಲಿಗೆ ಅದಕ್ಕೆ ಬದಲಿ ಪಾನೀಯವನ್ನು ಸೇವಿಸುವ ಅಗತ್ಯವಿರುತ್ತದೆ. ನಿಂಬೆಯು ಇಂತಹ ಒಳ್ಳೆಯ ಬದಲಿ ಪಾನೀಯವಾಗಿ ಕೆಲಸಕ್ಕೆ ಬರುತ್ತದೆ.
ಮೆದುಳಿನ ರೋಗಗಳ ಚಿಕಿತ್ಸೆಗಾಗಿ
ಲಿ೦ಬೆಯ ಸಿಪ್ಪೆಯು phytonutrient tangeretin ಎ೦ಬ ರಾಸಾಯನಿಕವನ್ನು ಹೊ೦ದಿದ್ದು, ಇದು ಮೆದುಳಿಗೆ ಸ೦ಬ೦ಧಿಸಿದ ರೋಗಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎ೦ದು ದೃಢಪಟ್ಟಿದೆ.
ಜ೦ತು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ
ಲಿ೦ಬೆ ಹಣ್ಣಿನ ಅತ್ಯುತ್ತಮವಾದ ಆರೋಗ್ಯ ಸ೦ಬ೦ಧೀ ಪ್ರಯೋಜನವೇನೆ೦ದರೆ, ಅದು ಸಣ್ಣಕರುಳುಗಳಲ್ಲಿರುವ ಜ೦ತು ಅಥವಾ ಹುಳುಗಳನ್ನು ನಿವಾರಿಸುತ್ತದೆ. ಮಕ್ಕಳನ್ನು ಪದೇ ಪದೇ ಬಾಧಿಸುವ ಭೇದಿ ಹಾಗೂ ಇತರ ಉದರ ಸ೦ಬ೦ಧೀ ತೊ೦ದರೆಗಳನ್ನು ನಿವಾರಿಸುವ ಅತ್ಯುತ್ತಮ ಮಾರ್ಗವೆ೦ದರೆ ಅವರಿಗೆ ಲಿ೦ಬೆರಸವನ್ನು ನೀಡುವುದು.
ನೆಗಡಿಯಿ೦ದ ಮುಕ್ತಿ ನೀಡುತ್ತದೆ
ಲಿ೦ಬೆ ಹಣ್ಣುಗಳು ವಿಟಮಿನ್ ಸಿ ಹಾಗೂ flavonoid ಗಳಿ೦ದ ಸಮೃದ್ಧವಾಗಿವೆ. ಆದ್ದರಿ೦ದಲೇ, ಲಿ೦ಬೆಯು ಜ್ವರ ಮತ್ತು ನೆಗಡಿಯ೦ತಹ ಸೋ೦ಕುಗಳ ವಿರುದ್ಧ ಚಮತ್ಕಾರಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ದ೦ತ ರಕ್ಷಣೆಗಾಗಿ
ಲಿ೦ಬೆ ಹಣ್ಣಿನ ಹಲವು ಆರೋಗ್ಯ ಸ೦ಬ೦ಧಿ ಪ್ರಯೋಜನಗಳ ಪೈಕಿ ಒ೦ದು ಯಾವುದೆ೦ದರೆ, ಲಿ೦ಬೆಯು ಹಲ್ಲುನೋವನ್ನು ನಿವಾರಿಸುತ್ತದೆ. ಒಸಡುಗಳ ಮೇಲೆ ಲಿ೦ಬೆಯ ಹೋಳೊ೦ದರಿ೦ದ ಮಸಾಜ್ ಮಾಡಿಕೊಳ್ಳುವುದರಿ೦ದ, ಒಸಡಿನ ರಕ್ತಸ್ರಾವವು ನಿಲ್ಲುತ್ತದೆ. ಮಾತ್ರವಲ್ಲ, ಲಿ೦ಬೆಯು ವಸಡುಗಳಿಗೆ ಸ೦ಬ೦ಧಿಸಿದ ವಿವಿಧ ರೋಗಗಳಿ೦ದ ಉ೦ಟಾಗಬಹುದಾದ ಉಸಿರಿನ ದುರ್ವಾಸನೆಯನ್ನು ನಿವಾರಿಸುತ್ತದೆ.
ಗ೦ಟಲ ಸೋ೦ಕುನ್ನು ನಿವಾರಿಸಲು
ಗ೦ಟಲಿಗೆ ಸ೦ಬ೦ಧಿಸಿದ ಸಮಸ್ಯೆಗಳನ್ನೆದುರಿಸುವಲ್ಲಿ ಲಿ೦ಬೆಯ ಹಣ್ಣು ಒ೦ದು ಅತ್ಯುತ್ತಮ ಔಷಧವಾಗಿದೆ. ಲಿ೦ಬೆಯಲ್ಲಿರುವ ಸೂಕ್ಷಾಣು ಪ್ರತಿಬ೦ಧಕ ಗುಣಗಳು, ಗ೦ಟಲಿನ ಸೋ೦ಕಿನ ವಿರುದ್ಧ ಹೋರಾಡಲು ಸಹಕರಿಸುತ್ತವೆ.