Just In
- 6 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 7 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 7 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೂಕ ಕಮ್ಮಿ ಮಾಡುವ ಗುಣ ದಾಳಿಂಬೆಗೆ ಇದೆಯೇ?
ದಾಳಿಂಬೆ ಹಣ್ಣಿನ ಬಗ್ಗೆ ಅನೇಕ ರೀತಿಯ ವಿವರಣೆಯನ್ನು ನೀಡಬಹುದು.ಅನೇಕ ಆರೋಗ್ಯಕರ ಅಂಶಗಳನ್ನೊಳಗೊಂಡಿರುವ ದಾಳಿಂಬೆಯನ್ನು ಅಪ್ಯಾಯಮಾನವಾದ ಹಣ್ಣು ಎಂದು ಹೇಳಬಹುದು.ಇದು ವರ್ಷವಿಡೀ ಲಭ್ಯವಿದ್ದು ಅನೇಕ ರೀತಿಯ ಆರೋಗ್ಯಕರವಾದ ಲಾಭಗಳನ್ನು ಹೊಂದಿದೆ.
ಆದಾಗ್ಯೂ ಅನೇಕರು ಇದನ್ನು ಕಡೆಗಣಿಸುತ್ತಾರೆ,ಹಣ್ಣಿನ ಅಂಗಡಿಗಳಲ್ಲೂ ಇದಕ್ಕೆ ತಕ್ಕ ಸ್ಥಾನ ಮಾನಗಳು ಸಿಕ್ಕಲ್ಲ. ಇಂದು ದಾಳಿಂಬೆಯಲ್ಲಿರುವ ಆರೋಗ್ಯಕರವಾದ ಅಂಶಗಳ ಬಗ್ಗೆ ಜನರಿಗೆ ಮನವರಿಕೆ ಆಗಿರುವುದರಿಂದ ದಾಳಿಂಬೆ ಬಗ್ಗೆ ಇನ್ನೂ ಹೆಚ್ಚಾದ ಮಾಹಿತಿ ಇಲ್ಲಿದೆ ನಿಮಗಾಗಿ..
1.ಹೆಪ್ಪುಗಟ್ಟಿದ ರಕ್ತವನ್ನು ಸ್ವಾಭಾವಿಕವಾಗಿ ಕರಗಿಸುತ್ತದೆ:
ರಕ್ತ ಎರಡು ರೀತಿಯಲ್ಲಿ ಹೆಪ್ಪುಗಟ್ಟುತ್ತದೆ.ಮೊದಲನೆಯದು ಚರ್ಮದ ಮೇಲ್ಭಾಗದಲ್ಲಾಗುವ ಗಾಯದಿಂದ ಅಥವಾ ತರಚಿ ಹೋಗುವುದರಿಂದ ಅದರ ಮೇಲಿನ ರಕ್ತ ಹೆಪ್ಪುಗಟ್ಟುತ್ತದೆ. ಮುಖ್ಯ ವಿಷಯವೆಂದರೆ ರಕ್ತ ಹೆಪ್ಪುಗಟ್ಟುವುದರಿಂದ ಹೆಚ್ಚು ರಕ್ತ ಸ್ರಾವ ಆಗುವುದನ್ನು ತಡೆಗಟ್ಟುತ್ತದೆ. ಎರಡನೇಯದು, ಶರೀರದ ಒಳಭಾಗದಲ್ಲಿ ಆಗುವ ರಕ್ತಸ್ರಾಮ ಇದು ಅತ್ಯಂತ ಅಪಾಯಕಾರಿಯಾದದ್ದು. ಉದಾಹರಣೆಗ ರಕ್ತವು ಹೃದಯದಲ್ಲಿ ಹೆಪ್ಪುಗಟ್ಟುವುದು, ಶರೀರದ ನರಗಳಲ್ಲಿ, ಮೆದುಳಿನ ನರಗಳಲ್ಲಿ ಹಾಗೂ ಮೂತ್ರ ವಿಸರ್ಜಿಸುವ ನರಗಳಲ್ಲಿ ಹೆಪ್ಪುಗಟ್ಟುತ್ತದೆ.ಶರೀರದ ಈ ಭಾಗಗಳಲ್ಲಿ ರಕ್ತಸ್ರಾವ ಆಗುವುದು ಅಪಾಯಕಾರಿಯಾಗಿದೆ.
ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ದಾಳಿಂಬೆಯ ಬೀಜಗಳು ಹೆಚ್ಚು ಪರಿಣಾಮಕಾರಿಯಾಗಿದೆ.ಇದು ಶರೀರದೊಳಗೆ ಸೇರುತ್ತಿದ್ದಂತೆ ತಿನ್ನರ್ ನಂತೆ ಕೆಲಸ ಮಾಡುತ್ತದೆ.ದಾಳಿಂಬೆಯ ಬೀಜಗಳು ರಕ್ತದ ಕಣಗಳಲ್ಲಿರುವ ಕೊಬ್ಬಿನಂಶವನ್ನು ಕರಗಿಸಲು ಸಹಾಯಕವಾಗಿದೆ.
2.ರಕ್ತದಲ್ಲಿನ ಕೊಬ್ಬಿನಂಶವನ್ನು ಕರಗಿಸುತ್ತದೆ
ವಯಸ್ಸಾಗುತ್ತಿದ್ದಂತೆ ಅನೇಕ ದುಶ್ಚಟಗಳಿಂದಾಗಿ ಹೃದಯದ ನರಗಳಲ್ಲಿ ಕೊಬ್ಬಿನಂಶ ಮುಂತಾದ ಕಾರಣಗಳಿಂದ ರಕ್ತ ಹೆಪ್ಪುಗಟ್ಟುತ್ತದೆ ಇದರಿಂದ ಹೃದಯದಲ್ಲಿ ಬ್ಲಾಕ್ ಗಳು ಕಾಣಿಸಿಕೊಳ್ಳುತ್ತದೆ.ಶರೀರದಲ್ಲಿರುವ ಬೇಡದ ಕೊಬ್ಬಿನಂಶವನ್ನು ಕಡಿಮೆ ಮಾಡಲು ಅಥವಾ ತೆಗೆಯಲು ದಾಳಿಂಬೆ ಸಹಾಯಕವಾಗಿದೆ.ಅತ್ಯಧಿಕವಾದ ಕೊಬ್ಬಿನಿಂದಾಗಿ ಹೃದಯದ ನರಗಳಲ್ಲಿ ಬ್ಲಾಕ್ ಕಂಡು ಬರುವುದನ್ನು ತಡೆಗಟ್ಟುತ್ತದೆ ಹಾಗೂ ನಿಮ್ಮ ಹೃದಯದ ನಾಳಗಳು ಕೊಬ್ಬು ಮುಕ್ತವಾಗಿಸುತ್ತದೆ.
3. ಆಮ್ಲಜನಕ ಪೂರೈಕೆಗೆ ಸಹಕಾರಿಯಾಗಿದೆ
ದಾಳಿಂಗೆಯಯು ನಿಮ್ಮ ಶರೀರದಲ್ಲಿ ಆಮ್ಲಜನಕವಾಗಿ ಕಾರ್ಯ ನಿರ್ವಹಿಸುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ದಾಳಿಂಬೆ ರಸ ರಕ್ತಶುದ್ಧೀಕರಿಸುವ ಲಿವರ್ (ಪಿತ್ತಜನಕಾಂಗ)ಗೆ ಆಮ್ಲಜನಕ ಸರಬರಾಜು ಮಾಡುತ್ತದೆ. ರೋಗನಿರೋಧಕವಾಗಿ ಕಾರ್ಯ ಮಾಡುತ್ತಾ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ.ಇದರಿಂದಾಗಿ ರಕ್ತ ನಾಳಗಳಲ್ಲಿ ರಕ್ತವು ಸಲೀಸಾಗಿ ಹರಿಯಲು ಸಹಾಯವಾಗುತ್ತದೆ.ಅಲ್ಲದೆ ರಕ್ತದಲ್ಲಿರುವ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.
4. ಎಲುಬುಗಳ ಆರೋಗ್ಯಕ್ಕೆ
.ದಾಳಿಂಬೆಯ ಔಷಧಿಯ ಗುಣಗಳು ಶರೀರದ ಉದ್ದಗಲಕ್ಕು ಉಪಯುಕ್ತವಾಗಿದೆ.ಇದು ಆರ್ಥರೈಟೀಸ್ ಬರುವುದನ್ನೂ ತಡೆಗಟ್ಟುತ್ತದೆ.ಇದು ಶರೀರದಲ್ಲಿರುವ ಉಷ್ಣಾಂಶವನ್ನು ತಡೆಗಟ್ಟುತ್ತದೆ ಹಾಗೂ ಮೃದುವಾದ ಎಲುಬುಗಳನ್ನು ಹಾಳುಮಾಡುವ ಕಿಣ್ವ(ಎನ್ ಜೈಮ್ಸ್) ವಿರುದ್ಧ ಹೋರಾಡುತ್ತದೆ.
5. ಪುರುಷರಿಗೆ ಬೆಸ್ಟ್!
ನೀವು ಹೇಳಿಕೊಳ್ಳಲಾಗದ ಕೆಲವು ಶಾರೀರಿಕ ನ್ಯೂನತೆಗಳನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.ಇದೇನು ವಂಡರ್ ಡ್ರಗ್ ಏನಲ್ಲಾ; ದಾಳಿಂಬೆಯ ರಸ ಗಂಡಸುತನದ ತೊಂದರೆ ಇರುವ ಪುರುಷರಿಗೆ ಉಪಯುಕ್ತವಾಗಿದೆ.ಅನೇಕ ಸಂಶೋಧನೆಗಳ ಮೂಲಕ ದಾಳಿಂಬೆಯಲ್ಲಿ ಈ ಔಷಧಿಯ ಅಂಶಗಳಿವೆ ಎನ್ನುವುದು ಸಾಬೀತಾಗಿದೆ.
ಪ್ರಾಸ್ಟ್ರೇಟ್ ಕ್ಯಾನ್ಸರ್
ಇದು ಪ್ರಾಸ್ಟ್ರೇಟ್ ಕ್ಯಾನ್ಸರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.ಎರಡು ಬೇರೆ ಬೇರೆ ಸಂಶೋಧನೆಯ ಪ್ರಕಾರ ದಾಳಿಂಬೆ ರಸ ಪ್ರಾಸ್ಟ್ರೇಟ್ ಕ್ಯಾನ್ಸರ್ ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ಒಂದು ಪ್ರಯೋಗಾಲಯ ವರದಿಯ ಪ್ರಕಾರ 'ದಾಳಿಂಬೆ ರಸ ಕ್ಯಾನ್ಸರ್ ರೋಗಾಣುಗಳ ಬೆಳವಣಿಗೆಯನ್ನು ಕುಂಟಿತಗೊಳಿಸಿ ಆ ರೋಗಾಣುಗಳನ್ನು ನಾಶ ಪಡಿಸುತ್ತದೆ' ಎಂದು ತಿಳಿದು ಬಂದಿದೆ. ಎರಡನೆ ಪ್ರಯೋಗದಲ್ಲಿ ' ದಾಳಿಂಬೆ ರಸವು ರಕ್ತವನ್ನು ಶುದ್ದಿ ಮಾಡಿ ಮನುಷ್ಯನ ಆರೋಗ್ಯವನ್ನು ವೃದ್ದಿಗೆ ಹೃದಯದ ಕಾಯಿಲೆಯಿಂದ ಬಿಡುಗಡೆ ನೀಡುತ್ತದೆ.
7. ಹೃದಯದ ಆರೋಗ್ಯಕ್ಕೆ
ಎಚ್ಚರಿಕೆಯ ಮಾತು : ದಾಳಿಂಬೆಯ ರಸ ಹೃದಯ ಕಾಯಿಲೆ ಇರುವ ವ್ಯಕ್ತಗಳಿಗೆ ಕೂಡಲೇ ಪ್ರತಿಕ್ರಿಯೆ ನೀಡುತ್ತದೆ.
8.ಅತಿಸಾರಕ್ಕೆ ಮದ್ದು
ನಿಮಗೆ ಅತಿಸಾರ ಆಗುತ್ತಿದ್ದರೆ ದಾಳಿಂಬೆ ರಸ ಸೇವಿಸುವುದರಿಂದ ತಡೆಗಟ್ಟಬಹುದು.ಇದರ ರಸದಿಂದ ಹೊಟ್ಟೆ ತೊಳಸುವಿಕೆಯನ್ನೂ ತಡೆಗಟ್ಟ ಬಹುದು.
9.ತೂಕ ನಿಯಂತ್ರಣದಲ್ಲಿಡುತ್ತದೆ
ದಾಳಿಂಬೆಯು ಶರೀರದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ.ಈ ಹಣ್ಣಿನಲ್ಲಿ ಕ್ಯಾಲೋರಿ ಇಲ್ಲ.
10.ಕೀಲು ಮೂಳೆ ಸಂಬಂಧ ಕಾಯಿಲೆಗೆ ರಾಮಬಾಣ
ದಾಳಿಂಬೆಯು ಮೂಳೆ ಹಾಗೂ ಕೀಲು ನೋವಿಗೆ ಸಂಬಂಧಿಸಿದಂತೆ ಹೆಚ್ಚು ಉಪಕಾರಿಯಾಗಿದೆ.
11.ರಕ್ತದ ಒತ್ತಡ ಕಡಿಮೆ ಮಾಡುತ್ತದೆ
ರಕ್ತದ ಒತ್ತಡವನ್ನು ನಿಯಂತ್ರಿಸುವುದಕ್ಕೆ ದಾಳಿಂಬೆ ಸಹಾಯಕವಾಗಿದೆ.
12.ಮರೆವಿನ ರೋಗಕ್ಕೆ ಒಳ್ಳೆ ಮದ್ದು
ನಿಮಗೆ ನೆನಪಿನ ಶಕ್ತಿ ಕಡಿಮೆಯಾಗಿದ್ದರೆ ದಾಳಿಂಬೆ ರಸ ಹೆಚ್ಚು ಉಪಯುಕ್ತ. ಮರೆವಿನ ರೋಗಕ್ಕೆ ದಾಳಿಂವೆ ರಾಮಬಾಣ.