Just In
- 46 min ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 1 hr ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- 2 hrs ago ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- 5 hrs ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
Don't Miss
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- News ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೈ ಬಿಪಿ ಇದ್ದರೆ, ಉಪ್ಪಿನ ಬದಲು ಈ ಆಹಾರ ತಿನ್ನಿ
ಉಪ್ಪಿಲ್ಲದ ಊಟ ರುಚಿಸುವುದೇ ಇಲ್ಲ. ಆದರೆ ಈ ಉಪ್ಪನ್ನು ಅಧಿಕ ತಿನ್ನುವ ಅಭ್ಯಾಸವಿದ್ದರೆ ರಕ್ತದೊತ್ತಡ ಹೆಚ್ಚಾಗುವುದು. ರಕ್ತದೊತ್ತಡ ಹೆಚ್ಚಿರುವ ಉಪ್ಪು ತುಂಬಾ ಕಮ್ಮಿಯಿರುವ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಆದರೆ ಉಪ್ಪಿನಲ್ಲಿರುವ ಸೋಡಿಯಂ ಅಂಶ ಆರೋಗ್ಯಕ್ಕೆ ಅವಶ್ಯಕ. ರಕ್ತದೊತ್ತಡ ಸಮಸ್ಯೆಯಿರುವವರಿಗೆ ಉಪ್ಪು ಹಾಕಿದ ಅಡುಗೆ ತಿಂದರೆ ರಕ್ತದೊತ್ತಡ ಹೆಚ್ಚುವುದು, ಸೋಡಿಯಂ ಕಮ್ಮಿಯಾದರೆ ತಲೆನೋವು, ತಲೆಸುತ್ತು, ದೇಹದ ತೂಕ ಹೆಚ್ಚಾಗುವುದು, ಸ್ನಾಯುಗಳು ಸಡಿಲವಾಗುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಕೆಲವೊಂದು ಆಹಾರಗಳಲ್ಲೂ ಸೋಡಿಯಂ ಇವೆ. ಆದ್ದರಿಂದ ಬಿಪಿ ಇರುವವರು ಉಪ್ಪಿಗೆ ಪರ್ಯಾಯವಾಗಿ ಈ ಆಹಾರ ತೆಗೆದುಕೊಳ್ಳುವುದು ಒಳ್ಳೆಯದು.
ಚಕ್ಕೆ
ಚಕ್ಕೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ ಹಾಗೂ ಚಕ್ಕೆ ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ತಯಾರಿಸಿದ ಅಡುಗೆ ರುಚಿಯಾಗಿ ಇರುತ್ತದೆ.
ಏಲಕ್ಕಿ
ಅಡುಗೆ ಮಾಡುವಾಗ ಅದಕ್ಕೆ ಏಲಕ್ಕಿ ಹಾಕಿದರೆ ಅಡುಗೆಯ ರುಚಿ ಹೆಚ್ಚುವುದು, ಇದು ಬಿಪಿ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ತುಳಸಿ
ಅಡುಗೆಗೆ ಉಪ್ಪು ಹಾಕದೆ ತುಳಸಿ ಹಾಕಿ ಕೂಡ ತಯಾರಿಸಬಹುದು. ತುಳಸಿ ಹಾಕಿ ತಯಾರಿಸಿದ ಅಡುಗೆ ಅಷ್ಟೇನು ರುಚಿಯಾಗಿ ಇಲ್ಲದಿದ್ದರೂ ತಿನ್ನಬಹುದು ಹಾಗೂ ತುಳಸಿಯಲ್ಲಿ ಆರೋಗ್ಯಕರ ಗುಣ ಹೆಚ್ಚಿರುವುದರಿಂದ ಆರೋಗ್ಯ ವೃದ್ಧಿಸುವುದು.
ಮೆಣಸು
ಸ್ವಲ್ಪ ಕರಿ ಮೆಣಸು ಮತ್ತು ಕೆಂಪು ಮೆಣಸು ಹಾಕಿ ತಯಾರಿಸುವ ಅಡುಗೆಗೆ ಉಪ್ಪಿನ ಅವಶ್ಯಕತೆ ಇಲ್ಲ. ತುಂಬಾ ರಕ್ತದೊತ್ತಡವಿರುವವರು ಉಪ್ಪನ್ನು ಹಾಕಿದ ಅಡುಗೆ ತಿನ್ನಲೇಬಾರದು.
ಪಲಾವ್ ಎಲೆ
ಪಲಾವ್ ಎಲೆಯನ್ನು ಕೂಡ ಉಪ್ಪಿಗೆ ಪರ್ಯಾಯವಾಗಿ ಬಳಸಬಹದು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.
ಕರಿ ಮೆಣಸು
ಕರಿ ಮೆಣಸಿನಲ್ಲಿ ಸೋಡಿಯಂ ಅಂಶವಿದ್ದು ಉಪ್ಪಿಗೆ ಪರ್ಯಾವಾಗಿ ಬಳಸಬಹುದು.
ಸೋಯಾ ಸಾಸ್
ಉಪ್ಪು ಹಾಕದೆ ಸೋಯಾ ಸಾಸ್ ಹಾಕಿ ತಯಾರಿಸಿದ ಅಡುಗೆ ಸಪ್ಪೆ ಅನಿಸುವುದಿಲ್ಲ. ಉಪ್ಪು ಹಾಕಿದ ಅಡುಗೆ ತಿನ್ನಬೇಡಿ ಎಂದು ವೈದ್ಯರು ಹೇಳಿದ್ದರೆ ಉಪ್ಪಿಗೆ ಪರ್ಯಾಯವಾಗಿ ಇದನ್ನು ಬಳಸಿ ನಾಲಗೆಯ ರುಚಿ ಹೆಚ್ಚಿಸಬಹುದು.
ಈರುಳ್ಳಿ ಪುಡಿ
ಅಡುಗೆಗೆ ಈರುಳ್ಳಿ ಪುಡಿಯನ್ನು ಉಪ್ಪಿಗೆ ಬದಲಾಗಿ ಬಳಸಬಹುದು.
ನಿಂಬೆ ರಸ
ಇಲ್ಲಿ ಹೇಳಿರುವ ಪದಾರ್ಥಗಳನ್ನು ಬಳಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿದರೆ ಅಡುಗೆ ರುಚಿಯಾಗಿರುತ್ತದೆ.
ಸೂರ್ಯಕಾಂತಿ ಬೀಜ
ಇದರಲ್ಲಿ ಸೋಡಿಯಂ ಅಧಿಕವಿದ್ದು ಇದನ್ನು ತಿನ್ನುವುದರಿಂದ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಇದನ್ನು ತಿಂದರೆ ಸೋಡಿಯಂ ಕೊರತೆ ಉಂಟಾಗುವುದಿಲ್ಲ.