Just In
- 2 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 2 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- 3 hrs ago ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- 7 hrs ago ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
Don't Miss
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಡುಗೆ ಮನೆಯಲ್ಲಿರುವ ಬೆಸ್ಟ್ ಔಷಧಿ ಯಾವುದು?
ಘಮಲು ಮಾತ್ರವಲ್ಲ, ತನ್ನದೇ ಔಷಧೀಯ ಗುಣವನ್ನೂ ಹೊಂದಿರುತ್ತದೆ. ಈ ಮಸಾಲೆ ಪದಾರ್ಥಗಳನ್ನು ಆಯುರ್ವೇದದಲ್ಲೂ ಹೆಚ್ಚು ಖ್ಯಾತಿ ಪಡೆದುಕೊಂಡಿವೆ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಔಷಧೀಯ ವಸ್ತುಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.
1. ಶುಂಠಿ: ಭಾರತೀಯ ಮಸಾಲೆ ಖಾದ್ಯಗಳಲ್ಲಿ ಶುಂಠಿಯಿಲ್ಲದೆ ರುಚಿಯೇ ಇರುವುದಿಲ್ಲ. ರಕ್ತ ಕಟ್ಟುವಿಕೆ ಮತ್ತು ಜ್ವರಕ್ಕೆ ಇದು ಒಳ್ಳೇ ಮದ್ದು. ತಲೆಸುತ್ತು ಮತ್ತು ಭೇದಿಯನ್ನೂ ಶುಂಠಿ ನಿವಾರಿಸುತ್ತದೆ.
2. ಅರಿಶಿಣ: ಕ್ಯಾನ್ಸರ್ ನಿವಾರಕ ಅಂಶ ಅರಿಶಿಣದಲ್ಲಿದೆ. ಅನೇಕ ರೋಗಗಳಿಗೆ ಅರಿಶಿಣ ಮದ್ದು. ಇದು ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುವುದಲ್ಲದೆ ಕ್ರಿಮಿಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಅರಿಶಿಣ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸಲೂ ಸೇವಿಸಬಹುದು. ಕೆಮ್ಮು, ನೆಗಡಿ ಶೀತಕ್ಕೆ ರಾಮಬಾಣ. ರಕ್ತ ನಾಳಗಳಲ್ಲಿ ಸೇರಿಕೊಳ್ಳುವ ಕ್ರಿಮಿಗಳನ್ನು ಅರಿಶಿಣ ಕೊಲ್ಲುವುದರಿಂದ ಹೊಳೆಯುವ ತ್ವಚೆಯನ್ನೂ ಪಡೆಯಬಹುದು.
3. ಮೆಂತ್ಯೆ: ಮೆಂತ್ಯೆ ಕಾಳಿನಲ್ಲಿ ವಿಟಮಿನ್ ಇ ಹೆಚ್ಚಿದೆ. ಕೂದಲಿನ ಬೆಳವಣಿಗೆಗೆ ಮೆಂತ್ಯೆ ತುಂಬಾ ಸಹಕಾರಿ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ಇದನ್ನು ಮಧುಮೇಹಿಗಳು ಸೇವಿಸುತ್ತಾರೆ. ಈ ಮೆಂತ್ಯೆ ಮ್ಯುಕೊಸಲ್ ಫ್ಲುಯಿಡ್ ಉತ್ಪಾದಿಸಿ ವಿಷಕಾರಿ ಮತ್ತು ಅಲರ್ಜಿಯನ್ನು ನಿವಾರಿಸುತ್ತದೆ. ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೂ ಮೆಂತ್ಯೆ ಒಳ್ಳೆಯದು.
4. ಇಂಗು: ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಇಂಗು ಪರಿಣಾಮಕಾರಿ. ಉಸಿರಾಟದ ತೊಂದರೆ, ಅಸ್ತಮಾ ಮತ್ತು ಕೆಮ್ಮಿದ್ದವರಿಗೂ ಇಂಗಿನ ಸೇವನೆ ಇರಬೇಕು. ಇಂಗಿನ ಒಗರು ವಾಸನೆ ಬ್ಯಾಕ್ಟೀರಿಯಾ ಕೊಂದುಹಾಕುತ್ತದೆ.
5. ಜೀರಿಗೆ: ಜೀರಿಗೆಯನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆದು, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಯನ್ನು ಹೋಗಿಸುತ್ತದೆ. ಇದರಲ್ಲಿ ಕಬ್ಬಿಣಾಂಶ ಮತ್ತು ಖನಿಕಾಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಪಿತ್ತವನ್ನೂ ನಿವಾರಿಸುತ್ತದೆ.
6. ಲವಂಗ: ಲವಂಗ ಬಾಯಿಯ ಸ್ವಾಸ್ಥ್ಯಕ್ಕೆ ಹೆಚ್ಚು ಉಪಯೋಗ. ಹಲ್ಲು ನೋವಿಗೆ ಮತ್ತು ಸಂಧಿವಾತಕ್ಕೆ ಲವಂಗದ ಎಣ್ಣೆಗಿಂತ ಬೇರೆ ಮದ್ದಿಲ್ಲ.