Just In
- 1 hr ago 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- 2 hrs ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 3 hrs ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 5 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
Don't Miss
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Movies ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆನಪಿರಲಿ ಇರುವುದೊಂದೇ ಹೃದಯ, ನಿರ್ಲಕ್ಷಿಸದಿರಿ
ನಮ್ಮ ಸಂಪೂರ್ಣ ದೇಹದಕ್ಕೆ ರಕ್ತ ಪರಿಚಲನೆಯಾಗಬೇಕಾದರೆ ಹೃದಯವು ಸರಿಯಾಗಿ ಕೆಲಸ ಮಾಡಬೇಕು. ಹೃದಯಕ್ಕೆ ಸ್ವಲ್ಪ ಸಮಸ್ಯೆಯಾದರೂ ಅದು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ....
ನಮ್ಮ ಹೃದಯವನ್ನು ಆರೋಗ್ಯದಿಂದಿಟ್ಟುಕೊಳ್ಳುವುದು ಮತ್ತು ಅದಕ್ಕೆ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಸಂರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಹೃದ್ರೋಗಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತಡೆಗಟ್ಟವ ವಿಧಾನಗಳ ಬಗ್ಗೆ ಅರಿತುಕೊಳ್ಳಬೇಕು. ಮೊಟ್ಟ ಮೊದಲನೆಯದಾಗಿ, ಹೃದಯಕ್ಕೆ ಯಾವುದೇ ರೀತಿ ಸಮಸ್ಯೆ ಎದುರಾಗದೇ ಇರುವಂತೆ ನೋಡಿಕೊಳ್ಳಲು ನಮ್ಮ ಜೀವನದಿಂದ ಒತ್ತಡವನ್ನು ತೆಗೆದು ಹಾಕಬೇಕು. ನೆನಪಿಡಿ: ಪುಟ್ಟ ಹೃದಯದ ಆರೋಗ್ಯವನ್ನು ಕಡೆಗಣಿಸದಿರಿ!
ನಮ್ಮ ಜೀವನದಿಂದ ಒತ್ತಡವನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ಸತತವಾಗಿ ಒತ್ತಡದಿಂದ ಬಳಲುತಿದ್ದರೆ, ರಕ್ತ ನಾಳಕ್ಕೆ ಕಿರಿಕಿರಿಯಾಗಿ ರಕ್ತ ಹೆಪ್ಪುಗಟ್ಟುತ್ತದೆ. ಒತ್ತಡ ನಿವಾರಣ ತಂತ್ರಗಳು ನಿಮಗೆ ಒತ್ತಡದ ಸಂದರ್ಭಗಳಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ಬದಲಾಯಿಸುತ್ತದೆ. ಎದೆ ಬಡಿತ, ವೇಗವಾಗದಂತೆ ದೇಹವು ಒತ್ತಡ ವಿರುದ್ಧ ಹೋರಾಟವನ್ನು ಮಾಡಲು ಸಿದ್ಧವಾಗುತ್ತದೆ.
10 ರಿಂದ 15 ನಿಮಿಷಗಳ ಕಾಲ ನಿಶ್ಯಬ್ಧವಾಗಿ ಕುಳಿತುಕೊಂಡು, ಉಸಿರಾಟದ ಮೇಲೆ ಗಮನವಿಡಬೇಕು. ಯೋಗಾಭ್ಯಾಸದ ಕೋರ್ಸ್ ಅನ್ನು ಒಂದು ವಾರದ ಮಟ್ಟಿಗೆ,ತಿಂಗಳಿಗೊಮ್ಮೆ ಮಸಾಜ್ ತೆಗೆದುಕೊಳ್ಳಬೇಕು. ದಿನವಿಡೀ ಕುಳಿತುಕೊಂಡೇ ಇದ್ದರೆ ಹೃದಯಕ್ಕೆ ಅಪಾಯ!
ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಪತ್ರಿಕೆ ನಡೆಸಿದ ಅಧ್ಯಯನದ ಪ್ರಕಾರ, ದಿನಂಪ್ರತಿ ಹೆಚ್ಚಿನ ಒಂದು ಗಂಟೆಯ ಕಾಲ ಆರಾಮ ಮಾಡಿದರೆ, ಮಧ್ಯ ವಯಸ್ಕರು ರಾತ್ರಿಯ ವಿಶ್ರಾಂತಿ ಪಡೆಯಲೇಬೇಕಾದ ಲೆಕ್ಕಕ್ಕೆ ಸೇರಿಕೊಂಡು ರಕ್ತನಾಳಕ್ಕೆ ಸಮಸ್ಯೆಯಾಗುವ ತೊಂದರೆಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ನಿಮಗೆ, ನಿದ್ರಾಹೀನತೆಯ ಸಮಸ್ಯೆ ಇದ್ದರೆ, ಅದನ್ನು ಸರಿಪಡಿಸಲು ನಿಮಗೆ ಸಾಕಷ್ಟು ಉತ್ತಮವಾದ ವಿಧಾನಗಳು ದೊರೆಯುತ್ತವೆ. ನಿದ್ರಾಹೀನತೆ ಸಂಬಂಧವಾಗಿ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ಅವರಿಂದ ಸಲಹೆ ಸೂಚನೆಗಳನ್ನು ಪಡೆಯುವುದು ಸೂಕ್ತ ಏಕೆಂದರೆ, ನಿದ್ರಾಹೀನತೆಯಿಂದ ಹೃದ್ರೋಗದ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ತಡೆಗಟ್ಟಲು ಚೆನ್ನಾಗಿ ನಿದ್ದೆ ಮಾಡುವುದು ಅತ್ಯಾವಶ್ಯಕ. ಇದೇ ಕಾರಣಕ್ಕೆ 'ಹೃದ್ರೋಗ ಸಮಸ್ಯೆ' ಕಾಣಿಸಿಕೊಳ್ಳುವುದು!
ಸೋಡಿಯಮ್ ಪ್ರಮಾಣ ಹೆಚ್ಚಾದರೆ, ರಕ್ತದೊತ್ತಡವೂ ಹೆಚ್ಚಾಗುತ್ತದೆ. ಇದರಿಂದ ಹೃದಯಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯಾಗುವ ಸಂಭವವಿರುತ್ತದೆ. ಅದನ್ನು ನೀವು ತಗೆದು ಹಾಕಿದಂತೆಯೇ, ಹೃದಯದಿಂದ ಮೇಲಾಗುವ ಒತ್ತಡವನ್ನೂ ತೆಗೆದಂತಾಗುತ್ತದೆ. ಇದರಿಂದ ಹೃದಯಕ್ಕೆ ಸಂಬಂಧ ಸಮಸ್ಯೆಗಳು ಎದುರಾಗುವುದಿಲ್ಲ. ಹೃದಯದ ಆರೋಗ್ಯಕ್ಕೆ- ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ
ಆಹಾರ ಪದ್ಧತಿಯ ಸೂಚನೆಗಳ ಪ್ರಕಾರ ಮಯಸ್ಕರಿಗೆ, ದಿನ ನಿತ್ಯವೂ ಎರಡು ಕಪ್ ಗಳಷ್ಟು ಹಣ್ಣುಗಳು ಮತ್ತು ಎರಡುವರೆಯಿಂದ ಮೂರು ಕಪ್ ನಷ್ಟು ತರಕಾರಿ ಸೇವನೆ ಬಹಳ ಮುಖ್ಯ. ಒಂದು ಕಪ್ ಎಂದರೆ, ಒಂದು ದೊಡ್ಡ ಕಿತ್ತಳೆ ಅಥವಾ ಒಂದು ಚಿಕ್ಕ ಸೇಬು ಅಂದಾಜಿಗೆ ಸರಿಸಮಾನ. ಆದ್ದರಿಂದ ಹೃರ್ರೋಗವನ್ನು ದೂರವಿಡಲು ಆರೋಗ್ಯಕರ ಆಹಾರವನ್ನು ಸೇವಿಸಿರಿ.