Just In
Don't Miss
- News ಬೆಂಗಳೂರಲ್ಲಿ ನಿತ್ಯ 10 mld ಸಂಸ್ಕರಿಸಿದ ನೀರು ಪೂರೈಕೆ: BWSSB
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೆನಪಿಡಿ: ಪುಟ್ಟ ಹೃದಯದ ಆರೋಗ್ಯವನ್ನು ಕಡೆಗಣಿಸದಿರಿ!
ಹೃದಯವೆನ್ನುವುದು ದೇಹದ ಮುಖ್ಯ ಕೇಂದ್ರವಿದ್ದಂತೆ. ಇಲ್ಲಿಂದಲೇ ಪ್ರಮುಖ ಅಂಗಾಂಗಗಳಿಗೆ ರಕ್ತ ಪೂರೈಕೆಯಾಗುವುದು. ಹೃದಯದ ಕಾರ್ಯಕ್ಕೆ ಯಾವುದೇ ತೊಂದರೆಯಾದರೂ ಅದರಿಂದ ದೇಹದ ಇತರ ಅಂಗಾಂಗಗಳ ಮೇಲೂ ಪರಿಣಾಮ ಬೀರುವುದು ಖಚಿತ. ಹೃದಯಲ್ಲಿ ರಕ್ತ ಪರಿಚಲನೆಯಾಗದೆ ನಿಂತಾಗ ಸಮಸ್ಯೆಗಳು ಆರಂಭವಾಗುತ್ತದೆ. ಇಂತಹ ಕೆಲವೊಂದು ಹೃದಯದ ಸಮಸ್ಯೆಗಳು ಮತ್ತು ಅವುಗಳ ಲಕ್ಷಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳುವ.
ಪರಿಧಮನಿಯ ಕಾಯಿಲೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವಂತಹ ಕಾಯಿಲೆಗಳಲ್ಲಿ ಅಪಧಮನಿಯ ಕಾಯಿಲೆಯು ಹೃದಯದ ಊತಕ್ಕೆ ಕಾರಣವಾಗುವುದು. ಇದನ್ನು ಹೃದಯಾಘಾತವೆನ್ನಲಾಗುತ್ತದೆ. ಹೃದಯ ರೋಗಗಳಲ್ಲಿ ಮುಖ್ಯವಾಗಿ ಹೃದಯಾಘಾತ, ಹೃದಯ ಕವಾಟ ರೋಗ, ರಕ್ತನಾಳ ರೋಗ, ಪೆರಿಕಾರ್ಡಿಯಲ್ ರೋಗ, ಅನಿಯಮಿತ ಹೃದಯದ ಲಯ, ಜನ್ಮಜಾತ ಹೃದಯ ಸಮಸ್ಯೆಗಳು, ಹೃದಯ ಸ್ನಾಯು ರೋಗ, ಮಹಾಪಧಮನಿಯ ರೋಗ, ಇತ್ಯಾದಿಗಳು ಹೃದಯದಲ್ಲಿ ಕಾಣಿಸಿಕೊಳ್ಳುವ ರೋಗಗಳಾಗಿವೆ. ಪುಟ್ಟ ಹೃದಯದ ಆರೋಗ್ಯಕ್ಕೂ ಸ್ವಲ್ಪ ಆದ್ಯತೆ ನೀಡಿ!
ಪ್ರತಿಯೊಂದು ರೋಗಗಳು ತನ್ನದೇ ಆದ ರೀತಿಯಲ್ಲಿದ್ದರೂ ಅವುಗಳ ಲಕ್ಷಣಗಳು ಮಾತ್ರ ಭಿನ್ನವಾಗಿರುತ್ತದೆ ಮತ್ತು ಇದರ ಬಗ್ಗೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯವಾಗಿದೆ. ಇದರಲ್ಲಿನ ಕೆಲವೊಂದು ಲಕ್ಷಣಗಳು ಒಂದೆರಡು ಕಾಯಿಲೆಗಳಲ್ಲಿ ಸಮಾನವಾಗಿರುತ್ತದೆ. ನಿಮಗೆ ಯಾವುದೇ ರೀತಿಯ ಲಕ್ಷಣಗಳು ಗೋಚರಿಸಿದಾಗ ಆದಷ್ಟು ಬೇಗನೆ ವೈದ್ಯರನ್ನು ಭೇಟಿಯಾಗುವುದು ತುಂಬಾ ಮುಖ್ಯ. ಹೃದಯದ ಆರೋಗ್ಯಕ್ಕೆ-ಪುರಾತನ ಕಾಲದ ಆಯುರ್ವೇದ ಚಿಕಿತ್ಸೆ
ಅಪಧಮನಿಯ ಕಾಯಿಲೆಯಲ್ಲಿ ಪ್ರಮುಖವಾಗಿ ಗೋಚರಿಸುವ ಲಕ್ಷಣವೆಂದರೆ ಎದೆಯಲ್ಲಿ ನೋವು ಮತ್ತು ಎದೆಭಾರವಾಗಿರುವಂತೆ ಆಗುತ್ತದೆ. ಆದರೆ ಇದನ್ನು ಹೆಚ್ಚಿನವರು ಎದೆಯುರಿಯೆಂದು ಭಾವಿಸುತ್ತಾರೆ. ಈ ರೀತಿಯ ನೋವು ಭುಜ, ಕೈ, ಗಂಟಲು, ದವಡೆ, ಬೆನ್ನು ಮತ್ತು ಕುತ್ತಿಗೆಯಲ್ಲಿ ಕೂಡ ಕಾಣಿಸಿಕೊಳ್ಳಬಹುದು. ಉಸಿರಾಡಲು ಕಷ್ಟವಾಗುವುದು, ನಾಡಿಮಿಡಿತ ಹೆಚ್ಚಾಗುವುದು, ನಿತ್ರಾಣ, ತಲೆಸುತ್ತುವಿಕೆ, ಬೆವರು, ವಾಕರಿಕೆ ಮತ್ತು ಅನಿಯಮಿತ ನಾಡಿಬಡಿತ ಇತರ ಲಕ್ಷಣಗಳಾಗಿವೆ.
ಎದೆಯ ಮೇಲೆ ಭಾರವಾಗಿರುವ ಏನಾದರೂ ನಿಂತಂತೆ ಆಗಿರುವುದು ಅಥವಾ ಎದೆಯಲ್ಲಿ ಸ್ನಾಯುವನ್ನು ಎಳೆದಂತೆ ಆಗುವುದು ನಿಮ್ಮ ಹೃದಯವು ಸರಿಯಾಗಿ ಕೆಲಸ ಮಾಡುತ್ತಿಲ್ಲವೆನ್ನುವುದರ ಸೂಚನೆಯಾಗಿದೆ. ವ್ಯಾಯಾಮ ಮಾಡಿದ ಬಳಿಕ ನಿಮ್ಮ ಎದೆಯಲ್ಲಿ ನೋವು ಕಾಣಿಸಿಕೊಂಡರೆ ಹೃದಯದಲ್ಲಿ ರಕ್ತ ಪರಿಚಲನೆಯಲ್ಲಿ ಏನೋ ಸಮಸ್ಯೆಯಿದೆಯೆಂದು ಅರ್ಥ. ಹೃದಯವನ್ನು ಹೀಗೆ ಜೋಪಾನ ಮಾಡಿ
ಲಘುವಾದ ಚಟುವಟಿಕೆ ವೇಳೆ ಮತ್ತು ಮಲಗಿರುವಾಗ ನಿಮಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇದು ಹೃದಯದ ಸಮಸ್ಯೆಯಾಗಿರುತ್ತದೆ. ಇದು ಕವಾಟ ರೋಗದ ಲಕ್ಷಣವಾಗಿದೆ. ತುಂಬಾ ನಿತ್ರಾಣವಾದಂತೆ ನಿಮಗೆ ಯಾವಾಗಲೂ ಭಾವನೆಯಾಗುತ್ತಿದ್ದರೆ ಅದು ಕವಾಟದಲ್ಲಿನ ಸಮಸ್ಯೆ ಅಥವಾ ರಕ್ತ ಬ್ಲಾಕ್ ಆಗಿರಬಹುದು. ಹೃದಯದ ಸಮಸ್ಯೆ ಕಾಣಿಸಿಕೊಳ್ಳುವ ಕೆಲವು ಜನರಲ್ಲಿ ಹೊಟ್ಟೆಯ ಸಮಸ್ಯೆಯಾದ ಅಜೀರ್ಣ ಮತ್ತು ಭೇದಿ ಕಾಣಿಸಿಕೊಳ್ಳುತ್ತದೆ.
ತುಂಬಾ ಆಯಾಸವಾದಂತೆ ಅಥವಾ ನಿದ್ರೆ ಸರಿಯಾಗಿಲ್ಲವೆನ್ನುವಂತೆ ಆಗುತ್ತಲಿದ್ದರೆ ಇದು ಹೃದಯ ಸಮಸ್ಯೆಯ ಸೂಚನೆಯಾಗಿರಬಹುದು. ಹಠಾತ್ ನಿತ್ರಾಣವಾಗುವುದು, ಶೀತ, ವಾಕರಿಕೆ ಅಥವಾ ಬೆವರು ಕಾಣಿಸಿಕೊಳ್ಳುವುದು ರಕ್ತಸರಿಯಾಗಿ ಪರಿಚಲನೆಯಾಗದಿರುವ ಲಕ್ಷಣವಾಗಿದೆ. ಇವುಗಳು ಕೂಡ ಹೃದಯದ ರೋಗಗಳ ಲಕ್ಷಣವಾಗಿರಬಹುದು.