Just In
Don't Miss
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿಸುವ ಹಣ್ಣುಗಳು
ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿಸಲು ನಾವು ವಿಭಿನ್ನ ರೀತಿಯ ಪಾನಿಯಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಿಸಿಲಿನ ಧಗೆ ಹೆಚ್ಚಿರುವಾಗ ಇವುಗಳನ್ನು ತಿನ್ನಬೇಡಿ
ಬೇಸಿಗೆಯ ಕಾಲದಿನ ಕಳೆದಂತೆ ಬಿಸಿಲಿನ ಧಗೆಗೆ ಆಗಾಗ ಬಾಯಾರಿಕೆಯಾಗುತ್ತಿರುತ್ತದೆ. ನೀರು, ಜ್ಯೂಸ್ ಕುಡಿದರೂ ಬಾಯಾರಿಕೆ ನಿಲ್ಲುವುದಿಲ್ಲ. ಅಲ್ಲದೆ ಬೇಗನೆ ಸುಸ್ತಾಗುತ್ತದೆ. ಈ ಸಮಯದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರಕ್ರಮದಲ್ಲಿ ಕೆಲವೊಂದು ಬದಲಾವಣೆ ತರಬೇಕು. ಬೇಸಿಗೆಯ ಡಯಟ್ನಲ್ಲಿ ಈ ಕೆಳಗಿನ ಆಹಾರವನ್ನು ಸೇರಿಸಿದರೆ ತೂಕ ಕಡಿಮೆಯಾಗುವುದು ಮತ್ತು ದೇಹದ ಆರೋಗ್ಯ ಕೂಡ ಹೆಚ್ಚುತ್ತದೆ
ಹಣ್ಣುಗಳನ್ನು ತಿಂದು ರೋಗವನ್ನು ದೂರವಿರಿಸಿ ಎಂಬ ನಾಣ್ಣುಡಿ ನಮಗೆಲ್ಲಾ ತಿಳಿದಿರುವಂಥದ್ದು. ಪ್ರತಿಯೊಂದು ಹಣ್ಣೂ ಕೂಡ ಅತ್ಯಧಿಕ ಪೋಷಕಾಂಶಗಳು ನ್ಯೂಟ್ರಿನ್ಗಳನ್ನು ತನ್ನಲ್ಲಿ ಯಥೇಚ್ಛವಾಗಿ ತುಂಬಿಕೊಂಡಿವೆ. ಊಟದ ನಂತರ ಅಥವಾ ಮೊದಲು ಹಣ್ಣನ್ನು ತಿನ್ನುವುದು ಒಳ್ಳೆಯದು ಎಂಬ ಪ್ರತೀತಿ ಆರೋಗ್ಯಕಾರಿ ದೇಹಕ್ಕೆ ಹೇಳಿ ಮಾಡಿಸಿದಂತಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಯಮ್ಮೀ...ವೆನಿಲ್ಲಾ ಕಸ್ಟರ್ಡ್ ರೆಸಿಪಿ
ಅದರಲ್ಲೂ
ಹಣ್ಣುಗಳು
ದೇಹದ
ಹೆಚ್ಚಿನ
ಕೊಬ್ಬನ್ನು
ಇಳಿಸುವಲ್ಲಿ
ಸಹಾಯಕವಾಗಿವೆ.
ನಿಮಗೆಷ್ಟು
ಸಾಧ್ಯವೋ
ಅಷ್ಟು
ಹಣ್ಣನ್ನು
ಸೇವಿಸಿ
ನಿಮ್ಮ
ಪರಿಪೂರ್ಣ
ತೂಕವನ್ನು
ತಲುಪಬಹುದೆಂದು
ಯಾವಾಗಲೂ
ಜನರು
ಸೂಚಿಸುತ್ತಾರೆ.
ಬೇಸಿಗೆಯ
ಡಯಟ್ನಲ್ಲಿ
ಈ
ಕೆಳಗಿನ
ಆಹಾರವನ್ನು
ಸೇರಿಸಿದರೆ
ತೂಕ
ಕಡಿಮೆಯಾಗುವುದು
ಮತ್ತು
ದೇಹದ
ಆರೋಗ್ಯ
ಕೂಡ
ಹೆಚ್ಚುತ್ತದೆ.
ಇನ್ನಷ್ಟು
ಮಾಹಿತಿಗಾಗಿ
ಈ
ಲಿಂಕ್
ಅನ್ನು
ಕ್ಲಿಕ್
ಮಾಡಿ:
ಬೇಸಿಗೆಯಲ್ಲಿ
ಬರುವ
ಮೊಡವೆ
ನಿವಾರಿಸಲು
10
ಟಿಪ್ಸ್
ಕಲ್ಲಂಗಡಿ:
ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ತಿನ್ನಬೇಕು. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.
ಮಾವಿನ ಹಣ್ಣು:
ಮಾವಿನ ಹಣ್ಣಿನಲ್ಲಿ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಸನ್ ಟ್ಯಾನ್ ಹೋಗಲಾಡಿಸಲು, ಸೆಕೆಯಲ್ಲಿ ಕೂದಲಿಗೆ ಕವಲೊಡೆಯದಂತೆ ತಡೆಯಲು ಮಾವಿನ ಹಣ್ಣು ತಿನ್ನುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇರುವುದರಿಂದ ತ್ವಚೆ ಹೊಳಪು ಹೆಚ್ಚುತ್ತದೆ. ಅಲ್ಲದ ವಿಟಮಿನ್ ಸಿ ಇದ್ದು ಇದು ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ತುಂಬಾ ತೆಳ್ಳಗೆ ಇದ್ದವರು ಇದನ್ನು ತಿನ್ನುವುದು ಒಳ್ಳೆಯದು. ದಪ್ಪಗಿದ್ದವರು ಮಿತಿಯಲ್ಲಿ ತಿನ್ನಬೇಕು.
ಬೀಟ್ರೂಟ್:
ಬೀಟ್ರೂಟ್ನಲ್ಲಿ ವಿಟಮಿನ್ ಸಿ, ಬಿ3, ಬಿ6 ಇದ್ದು ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಹಾಕುತ್ತದೆ. ಅಲ್ಲದೆ ದೇಹದಲ್ಲಿ ರಕ್ತ ಹೆಚ್ಚಾಗುವಂತೆ ಮಾಡುತ್ತದೆ.
ಸೇಬುಹಣ್ಣುಗಳು:
ಇವುಗಳು ಕೆಂಪು ಮತ್ತು ಹಸಿರು ಬಣ್ಣದಲ್ಲಿರುತ್ತವೆ. ಸಕ್ಕರೆ ಅಂಶ ಕಡಿಮೆ ಇರುವ ಹೊರತಾಗಿಯೂ, ಸೇಬು ತನ್ನಲ್ಲಿ ವಿಟಮಿನ್ ಸಿ ಮತ್ತು ಜೀವಾಣುಗಳನ್ನು ವರ್ಜಿಸುವ ನಾರಿನಂಶ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯ ಮಾಡುತ್ತದೆ, ಬೇಸಿಗೆಯ ಕಾಲದಲ್ಲಿ ಈ ಹಣ್ಣು ನಿಮಗೆ ಇನ್ನಷ್ಟು ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.
ನಿಂಬೆ ಹಣ್ಣಿನ ಜ್ಯೂಸ್:
ದಿನಕ್ಕೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿದರೆ ತೂಕ ಕಮ್ಮಿಯಾಗುವುದರ ಜೊತೆಗೆ ಆಹಾರದಲ್ಲಿರುವ ಅಸಿಡಿಟಿ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.