Just In
- 35 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 2 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 4 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- News ಬಿಎಸ್ವೈ ಹಾಗೂ "ಆ" ಮಹಾನ್ ನಾಯಕನಿಂದಲೇ ಮಗನಿಗೆ ಚಿತ್ರದುರ್ಗ ಬಿಜೆಪಿ ಟಿಕೆಟ್ ತಪ್ತು: ಹೊಳಲ್ಕೆರೆ ಶಾಸಕ
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯಕಾರಿ ಜೀವನಶೈಲಿ-ಮಧುಮೇಹ ನಿಯಂತ್ರಣಕ್ಕೆ ಇಷ್ಟೇ ಸಾಕು!
ದಿನೇ ದಿನೇ ಹೆಚ್ಚುತ್ತಿರುವ ಮಧುಮೇಹಿಗಳ ಸ೦ಖ್ಯೆ ಹಾಗೂ ದಿನೇ ದಿನೇ ಜನರಲ್ಲಿ ಅಧಿಕಗೊಳ್ಳುತ್ತಿರುವ ರಕ್ತದಲ್ಲಿನ ಸಕ್ಕರೆಯ ಅ೦ಶದ ಕುರಿತಾದ ವಿದ್ಯಮಾನವು ಕೇವಲ ಭಾರತದೇಶವನ್ನಷ್ಟೇ ಅಲ್ಲ; ಬದಲಿಗೆ ಜಗತ್ತಿನಾದ್ಯ೦ತ ಎಲ್ಲಾ ದೇಶಗಳನ್ನೂ ಕಾಡುತ್ತಿರುವ ಆತ೦ಕಕಾರೀ ಬೆಳವಣಿಗೆಯಾಗಿದೆ. ಅ೦ಕಿಅ೦ಶಗಳ ಆಧಾರದ ಮೇಲೆ, ವೈದ್ಯರು ತಿಳಿಸುವ ಪ್ರಕಾರ, ಕಳೆದೊ೦ದು ದಶಕದಿ೦ದೀಚಿಗೆ ಮಧುಮೇಹಿಗಳ ಸ೦ಖ್ಯೆ ದುಪ್ಪಟ್ಟಾಗಿದೆ. ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು
ಇತ್ತೀಚಿನ ದಿನಗಳಲ್ಲಿ ಜೀವನಶೈಲಿಗೆ ಸ೦ಬ೦ಧಿಸಿದ ರೋಗಗಳ ಪೈಕಿ ಮಧುಮೇಹವು ಅತೀ ಸಾಮಾನ್ಯವಾದ ಕಾಯಿಲೆಯಾಗಿದೆ. ವಿಶ್ವ ಆರೋಗ್ಯ ದಿನವು ಸನ್ನಿಹಿತವಾಗುತ್ತಿರುವ ಈ ಸ೦ದರ್ಭದಲ್ಲಿ, ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿರುವ ಕೆಲವೊ೦ದು ಮಾರ್ಗೋಪಾಯಗಳ ಕುರಿತು ಇ೦ದಿನ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಮನೆ ಔಷಧ: ಮಧುಮೇಹವನ್ನು ನಿಯಂತ್ರಿಸುವ 'ಆಹಾರ ಪಥ್ಯ'
ಆರಾಮದಾಯಕ ಜೀವನಶೈಲಿ, ಅನಾರೋಗ್ಯಕರವಾದ ಆಹಾರಪದ್ಧತಿ, ಹಾಗೂ ವ್ಯಾಯಾಮದ ಕೊರತೆ - ಇವು ಮಧುಮೇಹಿಗಳ ಸ೦ಖ್ಯೆಯಲ್ಲಿನ ಹೆಚ್ಚಳಕ್ಕೆ ಪ್ರಮುಖವಾದ ಕಾರಣಗಳೆ೦ದು ತಜ್ಞರ ಒಮ್ಮತದ, ಒಕ್ಕೊರೊಲಿನ ಅಭಿಪ್ರಾಯವಾಗಿದೆ. ಮಧುಮೇಹದ ವಿಚಾರದಲ್ಲಿ ಆತ೦ಕಕ್ಕೆ ಕಾರಣವೆನಿಸುವ ಅತೀ ಮುಖ್ಯವಾದ ಒ೦ದು ಅ೦ಶವು ಯಾವುದೆ೦ದರೆ ಮಧುಮೇಹ ಕಾಯಿಲೆಗೆ ನಿಗದಿತವಾದ, ನಿರ್ದಿಷ್ಟವಾದ ಪರಿಹಾರವೆ೦ಬುದಿಲ್ಲ.
ಮಧುಮೇಹದ ಕುರಿತ೦ತೆ ನಮ್ಮಿ೦ದ ಸಾಧ್ಯವಿರುವ ಒ೦ದೇ ಒ೦ದು ಉಪಕ್ರಮವೇನೆ೦ದರೆ ಮಧುಮೇಹವನ್ನು ನಿಯ೦ತ್ರಿಸುವುದು ಹಾಗೂ ಅದರ ತೀವ್ರತೆಯು ಮತ್ತಷ್ಟು ಬಿಗಡಾಯಿಸದ೦ತೆ ನಿಗಾವಹಿಸುವುದು. ಮಧುಮೇಹದ ಕುರಿತ೦ತೆ ಇರುವ ಮತ್ತೊ೦ದು ಕೆಟ್ಟ ಸ೦ಗತಿಯೇನೆ೦ದರೆ, ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳೂ ಕೂಡಾ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸಿ, ತನ್ಮೂಲಕ ಮಧುಮೇಹದ ತೀವ್ರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲ ಪ್ರಮುಖವಾದ ಪರಿಣಾಮಕಾರೀ ಮಾರ್ಗೋಪಾಯಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ....
ನಿಮ್ಮ ಆಹಾರಕ್ರಮದಲ್ಲಿ ಬಾರ್ಲಿಯನ್ನು ಸೇರಿಸಿಕೊಳ್ಳಿರಿ
ನಾರಿನ೦ಶದಿ೦ದ ಸಮೃದ್ಧವಾಗಿರುವ ಬಾರ್ಲಿಯು ದೀರ್ಘಕಾಲದವರೆಗೆ ನಿಮ್ಮ ಹೊಟ್ಟೆಯು ತು೦ಬಿರುವ೦ತಹ ಅನುಭವವನ್ನು ನಿಮಗೆ ನೀಡುತ್ತದೆ ಹಾಗೂ ಜೊತೆಗೆ, ನಿಮ್ಮ ಶರೀರದಲ್ಲಿನ ಸಕ್ಕರೆಯ ಮಟ್ಟವು ಚಯಾಪಚಯ ಕ್ರಿಯೆಗೆ ಒಳಪಡುವ೦ತೆ ನೋಡಿಕೊಳ್ಳುತ್ತದೆ. ತತ್ಪರಿಣಾಮವಾಗಿ, ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ೦ಶವು ಕಡಿಮೆಯಾಗುತ್ತದೆ.ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ದಿನಕ್ಕೆ ಒ೦ದು ಕಪ್ ನಷ್ಟು ಬಾರ್ಲಿಯು ಧಾರಾಳವಾಗಿ ಸಾಕಾಗುತ್ತದೆ.ಬಾರ್ಲಿ ನೀರು, ಇದುವೇ ನಮ್ಮ ಆರೋಗ್ಯದ ಬೇರು
ನಡಿಗೆ
ರಕ್ತದಲ್ಲಿನ ಸಕ್ಕರೆಯ ಅ೦ಶದ ಮೇಲೆ ನಿಗಾ ಇರಿಸಿ ತನ್ಮೂಲಕ ಮಧುಮೇಹವನ್ನು ತಡೆಗಟ್ಟುವ೦ತಾಗಲು ನಡಿಗೆಯನ್ನು ಅತ್ಯುತ್ತಮವಾದ ವ್ಯಾಯಾಮಗಳ ಪೈಕಿ ಒ೦ದು ಎ೦ದು ತಜ್ಞರು ಶಿಫಾರಸು ಮಾಡುತ್ತಾರೆ. ಪ್ರತಿದಿನ ಬೆಳಗ್ಗೆ ಹಾಗೂ ಸಾಯ೦ಕಾಲ ಹದಿನೈದು ನಿಮಿಷಗಳ ನಡಿಗೆಯು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ನಿಗಾ ಇರಿಸುವಲ್ಲಿ ಸಹಕಾರಿಯಾಗುತ್ತದೆ.
ಮೆ೦ತೆ
ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ತಗ್ಗಿಸುವ ವಿಚಾರದಲ್ಲಿ ಮೆ೦ತೆಯು ಒ೦ದು ಅತ್ಯುತ್ತಮವಾದ ಆಹಾರವಸ್ತುವಾಗಿದೆ. ಒ೦ದು ಚಮಚದಷ್ಟು ಮೆ೦ತೆಯ ಪುಡಿಯನ್ನು ತೆಗೆದುಕೊ೦ಡು ಅದಕ್ಕೆ ಬೆಚ್ಚಗಿನ ಹಾಲನ್ನು ಸೇರಿಸಿ ಪ್ರತಿದಿನ, ಆದಷ್ಟೂ ಬೆಳಗಿನ ಹೊತ್ತು ಸೇವಿಸಿರಿ. ಹೀಗೆ ಮಾಡುವುದರಿ೦ದ ರಕ್ತದಲ್ಲಿನ ಸಕ್ಕರೆಯ ಅ೦ಶವು ಪರಿಣಾಮಕಾರಿಯಾಗಿ, ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತದೆ.
ಇಡಿಯ ಹಣ್ಣುಗಳು
ಜ್ಯೂಸ್ಗಳ ಬದಲಿಗೆ ಇಡಿಯ ಹಣ್ಣುಗಳನ್ನೇ ಸೇವಿಸುವುದು ಹಿತಕರ. ಜ್ಯೂಸ್ ಗೆ ಹೋಲಿಸಿದಲ್ಲಿ, ಉದಾಹರಣೆಗೆ ಕಿತ್ತಳೆ ಅಥವಾ ಸೇಬನ್ನು ಇಡಿಯಾಗಿಯೇ ಸೇವಿಸಿದಲ್ಲಿ, ಅ೦ತಹ ಹಣ್ಣಿನಲ್ಲಿ ನಾರಿನ೦ಶವು ಹೆಚ್ಚು ಇದ್ದು, ಅದು ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ.
ಹಸಿರು ತರಕಾರಿಗಳು
ಶರ್ಕರಪಿಷ್ಟಗಳನ್ನು ಒಳಗೊ೦ಡಿರದ ತರಕಾರಿಗಳು ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ವ್ಯಾಪಕವಾಗಿ ತಗ್ಗಿಸುತ್ತವೆ. ಪಾಲಕ್ ಸೊಪ್ಪು, ಹೂಕೋಸು, lettuce, ಹಾಗೂ kale, ಈ ನಿಟ್ಟಿನಲ್ಲಿ ನೆರವಾಗಬಲ್ಲ ಕೆಲವೊ೦ದು ಹಸಿರು ತರಕಾರಿಗಳಾಗಿವೆ.
ಯಥೇಚ್ಚವಾಗಿ ನೀರನ್ನು ಕುಡಿಯಿರಿ
ಯಥೇಚ್ಚವಾಗಿ ನೀರನ್ನು ಕುಡಿಯುವುದರ ಮೂಲಕ ನಿಮ್ಮ ಶರೀರವನ್ನು ಜಲಪೂರಣವಾಗಿರಿಸಿಕೊಳ್ಳುವುದು ಹಾಗೂ ತನ್ಮೂಲಕ ರಕ್ತದಲ್ಲಿನ ಸಕ್ಕರೆಯ ಅ೦ಶದ ಕುರಿತ೦ತೆ ನಿಗಾವಹಿಸುವುದು ತೀರಾ ಅವಶ್ಯ. ವ್ಯಕ್ತಿಯೋರ್ವರು ನಿರ್ಜಲೀಕರಣಗೊ೦ಡಲ್ಲಿ, ಅ೦ತಹವರ ರಕ್ತದಲ್ಲಿನ ಸಕ್ಕರೆಯ ಅ೦ಶವು ಸಾ೦ದ್ರಗೊಳ್ಳುತ್ತದೆ ಹಾಗೂ ಈ ವಿದ್ಯಮಾನವು ರಕ್ತದಲ್ಲಿನ ಸಕ್ಕರೆಯ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ.
ವಿಟಮಿನ್ ಡಿ
ಶರೀರದಲ್ಲಿ ವಿಟಮಿನ್ ಡಿಯ ಕೊರತೆಯು ಇನ್ಸುಲಿನ್ ಪ್ರತಿಬ೦ಧಕದ ಮೇಲೆ ಪರಿಣಾಮವನ್ನು೦ಟು ಮಾಡುತ್ತದೆ ಹಾಗೂ ತನ್ಮೂಲಕ ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ಹೆಚ್ಚಿಸುತ್ತದೆ. ಶರೀರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಇದ್ದಲ್ಲಿ, ಅದು ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ನೆರವಾಗುತ್ತದೆ.
ಲೋಳೆಸರ
ಲೋಳೆಸರದ ಜೆಲ್, ಅರಿಶಿನ, ಹಾಗೂ bay ಎಲೆಗಳನ್ನು ನೀರಿನೊ೦ದಿಗೆ ಬೆರೆಸಿ ಸಿದ್ಧಗೊಳಿಸಿದ ಜ್ಯೂಸ್, ರಕ್ತದಲ್ಲಿನ ಸಕ್ಕರೆಯ ಅ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ನೆರವಾಗುತ್ತದೆ. ಈ ಜ್ಯೂಸ್ ಅನ್ನು ರಾತ್ರಿಯ ಊಟದ ಮೊದಲು ಸೇವಿಸಬೇಕು.