Just In
Don't Miss
- News Everest Fish Curry Masala: ಎವರೆಸ್ಟ್ ಫಿಶ್ ಕರಿ ಮಸಾಲೆ ಬ್ಯಾನ್: ಕಾರಣ ಇಲ್ಲಿದೆ
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಧುಮೇಹಿಗಳ ಪಾಲಿಗೆ 'ನೀರೇ ಜೀವಾಮೃತ' ಮರೆಯದಿರಿ
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಸತತವಾಗಿ ಬಾಯಾರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೆ ಇದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ ಸೂಕ್ತ ಪರೀಕ್ಷೆಗಳನ್ನು ಮಾಡುವುದು ಅವಶ್ಯಕ. ಏಕೆಂದರೆ ಇದು ಮಧುಮೇಹವಾಗಿರಲೂಬಹುದು. ಸದ್ದಿಲ್ಲದೆ ಸದ್ದುಮಾಡುವ 'ಮಧುಮೇಹದ' ಬಗ್ಗೆ ಇರಲಿ ಎಚ್ಚರ!
ಹೌದು, ಇದು ಮಧುಮೇಹವೇ ಎಂದು ಒಂದು ವೇಳೆ ಖಾತ್ರಿಯಾದರೆ ಎಲ್ಲಕ್ಕಿಂತ ಮೊದಲು ಮಾಡಬೇಕಾದ ಕೆಲಸವೆಂದರೆ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸುವುದು. ಏಕೆಂದರೆ ಮಧುಮೇಹಿಗಳ ರಕ್ತದಲ್ಲಿ ಬಳಕೆಯಾಗದ ಸಕ್ಕರೆ ಇರುತ್ತದೆ. ಈ ಸಕ್ಕರೆ ನಮ್ಮ ಜೀವಕೋಶಗಳಿಂದ ನೀರನ್ನು ಹೀರಿಕೊಳ್ಳುತ್ತದೆ. ಪರಿಣಾಮವಾಗಿ ದೇಹಕ್ಕೆ ಅಗತ್ಯವಾದ ನೀರಿನ ಪ್ರಮಾಣ ಕಡಿಮೆಯಾಗಿ ನಿರ್ಜಲೀಕರಣ ಎದುರಾಗುತ್ತದೆ. ಮಾವಿನ ಎಲೆ ಮಧುಮೇಹ ನಿಯಂತ್ರಿಸಬಲ್ಲದು!
ನಿಸರ್ಗ ನಮಗೆ ನೀಡಿರುವ ಅತ್ಯದ್ಭುತ ದ್ರವ ಎಂದರೆ ನೀರು. ಏಕೆಂದರೆ ಇದರಲ್ಲಿ ಕ್ಯಾಲೋರಿಗಳಿಲ್ಲ, ಕೊಲೆಸ್ಟ್ರಾಲ್, ಕೆಫೀನ್, ಸೋಡಿಯಂ, ಕೊಬ್ಬು ಮೊದಲಾವುವು ಯಾವುದೂ ಇಲ್ಲ. ಇವು ಇಲ್ಲದ್ದರಿಂದಲೇ ನೀರು ನಮಗೆ ಜೀವಜಲ. ವಿಶೇಷವಾಗಿ ಮಧುಮೇಹಿಗಳು ಇತರರಿಗಿಂತಲೂ ಹೆಚ್ಚು ನೀರು ಕುಡಿಯುವುದು ಅವಶ್ಯಕ ಮತ್ತು ಅನಿವಾರ್ಯ. ಮಧುಮೇಹಿಗಳು ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಬೇಕಾದರೆ ಹೆಚ್ಚು ನೀರನ್ನು ಕುಡಿಯಲೇಬೇಕು. ಇಲ್ಲಿವೆ ಕೆಲವು ಕಾರಣಗಳು...
ನಿರ್ಜಲೀಕರಣದ ಸಾಧ್ಯತೆ ತಗ್ಗಿಸುತ್ತದೆ
ಕೆಲವೊಮ್ಮೆ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಸಾಮಾನ್ಯಕ್ಕಿಂತಲೂ ಹೆಚ್ಚಾಗಿಬಿಡುತ್ತದೆ. ಆಗ ಅಂಗಾಂಶಗಳಿಂದಲೂ ನೀರನ್ನು ಪಡೆಯುವುದು ಅನಿವಾರ್ಯವಾಗುತ್ತದೆ. ಅಂಗಾಂಶಗಳಲ್ಲಿ ನೀರು ಇಲ್ಲದೇ ಇದ್ದರೆ ಮಾಂಸಖಂಡಗಳಲ್ಲಿನ ಶಕ್ತಿ ಇಲ್ಲವಾಗುತ್ತದೆ. ಈ ಸ್ಥಿತಿ ಉಲ್ಬಣಗೊಳ್ಳುತ್ತಾ ಹೋದಂತೆ ನಿರ್ಜಲೀಕರಣವೂ ಹೆಚ್ಚಿ ಸುಸ್ತು ಆವರಿಸುತ್ತದೆ. ಆದ್ದರಿಂದಲೇ ಹೆಚ್ಚು ಕಾಲ ನೀರು ಕುಡಿಯದ ಮಧುಮೇಹಿಗಳು ಕುಸಿದು ಬೀಳುತ್ತಾರೆ. ಇದೇ ಕಾರಣಕ್ಕೆ ಮಧುಮೇಹಿಗಳಿಗೆ ಉಪವಾಸ ಹಿಡಿಯದಂತೆ ವೈದ್ಯರು ಸೂಚಿಸುತ್ತಾರೆ.
ನಿರ್ಜಲೀಕರಣದ ಸಾಧ್ಯತೆ ತಗ್ಗಿಸುತ್ತದೆ
ಆದ್ದರಿಂದ ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯುತ್ತಲೇ ಇರಬೇಕು. ಆದರೆ ಇದರ ಪರಿಣಾಮವಾಗಿ ಮೂತ್ರವಿಸರ್ಜನೆಗೂ ಪದೇ ಪದೇ ಅವಸರವಾಗುವ ಕಾರಣ ಪ್ರಯಾಣ ಮೊದಲಾದ ಸಂದರ್ಭದಲ್ಲಿ ಸಂದರ್ಭಾನುಸಾರ ನೀರು ಕುಡಿಯಬೇಕು.
ಚರ್ಮದ ಸೋಂಕು ರಕ್ಷಿಸುತ್ತದೆ
ಗಾಯಗಳು ಮಧುಮೇಹಿಗಳಲ್ಲಿ ಶೀಘ್ರವಾಗಿ ಮಾಗದ ಕಾರಣ ಚರ್ಮದಲ್ಲಿ ಸೋಂಕು ಸಾಮಾನ್ಯವಾಗುತ್ತದೆ. ವಿಶೇಷವಾಗಿ ಚರ್ಮದಲ್ಲಿ ಎದುರಾಗುವ ಸೂಕ್ಷ್ಮಗೀರುಗಳು. ರಕ್ತದಲ್ಲಿ ಹೆಚ್ಚಿರುವ ಸಕ್ಕರೆಯ ಕಾರಣ ದೇಹದ ಇತರ ಅಂಗಗಳ ಜೊತೆಗೇ ಚರ್ಮದಲ್ಲಿಯೂ ಆರ್ದ್ರತೆ ಕಡಿಮೆಯಾಗುತ್ತದೆ. ಇದರಿಂದ ಚರ್ಮ ಒಣಗಿ ಸೂಕ್ಷ್ಮಗೀರುಗಳು ಎದುರಾಗುತ್ತವೆ. ಇದರಿಂದ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ನವೆ ತಾಳಲಾಗದೇ ಉಗುರಿನಿಂದ ತುರಿಸಿದಾಗ ಈಗಾಗಲೇ ಒಣಗಿ ಶಿಥಿಲವಾಗಿರುವ ಚರ್ಮದ ಹೊರಪದರ ಸುಲಭವಾಗಿ ಹರಿದು ಗಾಯಗಳುಂಟಾಗುತ್ತವೆ.
ಚರ್ಮದ ಸೋಂಕು ರಕ್ಷಿಸುತ್ತದೆ
ಈ ಗಾಯಗಳು ಗಾಳಿಯಲ್ಲಿನ ಬ್ಯಾಕ್ಟೀರಿಯಾಗಳಿಗೆ ಧಾಳಿ ನೀಡಲು ಸುಲಭ ಗುರಿಯಾಗಿದ್ದು ಸೋಂಕು ತಗಲುತ್ತದೆ. ಆದರೆ ಸತತವಾಗಿ ನೀರು ಕುಡಿಯುತ್ತಿರುವ ಮೂಲಕ ಚರ್ಮಕ್ಕೂ ಉತ್ತಮ ಪ್ರಮಾಣದ ಆರ್ದ್ರತೆ ದೊರೆತು ಚರ್ಮದ ಹೊರಪದರ ಬಲವುಳ್ಳದಾಗಿರುತ್ತದೆ. ಒಂದು ವೇಳೆ ತುರಿಕೆಯುಂಟಾದರೆ ಮಧುಮೇಹಿಗಳು ಉಗುರನ್ನು ಸರ್ವಥಾ ಚರ್ಮಕ್ಕೆ ತಾಗಿಸದೇ ದಪ್ಪ ಟವೆಲ್ ಅಥವಾ ಬಟ್ಟೆಯಿಂದ ಒರೆಸಿಕೊಂಡು ನವೆಯನ್ನು ಕಳೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ.
ಸುಸ್ತು ಕಡಿಮೆ ಮಾಡಲು ನೆರವಾಗುತ್ತದೆ
ಮಧುಮೇಹ ಇದೆ ಎಂದಾಕ್ಷಣ ವ್ಯಾಯಾಮ ಮಾಡಬಾರದೆಂದೇನಿಲ್ಲ. ಮಧುಮೇಹಿಗಳಿಗೂ ವ್ಯಾಯಾಮ ಅಗತ್ಯ. ನಡಿಗೆ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಹ ವ್ಯಾಯಾಮ. ವ್ಯಾಯಾಮದ ಕಾರಣ ಅಥವಾ ತಾಪಮಾನ ಹೆಚ್ಚಿದ್ದ ಸಮಯದಲ್ಲಿ ದೇಹದಿಂದ ಬೆವರಿನ ರೂಪದಲ್ಲಿ ನೀರು ಹೊರಹರಿಯುವ ಮೂಲಕವೂ ನೀರಿನ ಕೊರತೆಯುಂಟಾಗುತ್ತದೆ.
ಸುಸ್ತು ಕಡಿಮೆ ಮಾಡಲು ನೆರವಾಗುತ್ತದೆ
ಇದರಿಂದ ಸುಸ್ತು ಮತ್ತು ಬಳಲಿಕೆ ಆವರಿಸುತ್ತದೆ. ಕೆಲವೊಮ್ಮೆ ತಲೆಸುತ್ತುವಿಕೆಯೂ ಕಾಣಬರಬಹುದು. ಆದ್ದರಿಂದ ಮಧುಮೇಹಿಗಳು ವ್ಯಾಯಾಮದ ಮತ್ತು ಸೆಖೆಯ ಸಮಯದಲ್ಲಿ ಇತರರಿಗಿಂತಲೂ ಕೊಂಚ ಹೆಚ್ಚೇ ನೀರು ಕುಡಿಯಬೇಕು.