Just In
- 18 min ago ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- 2 hrs ago ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- 3 hrs ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 4 hrs ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
Don't Miss
- Movies Yuva Twitter Review:"ಕಾಲರ್ ಎತ್ತಿಕೊಂಡು ಓಡಾಡಿ", "ದೊಡ್ಮನೆ ಪರಂಪರೆ"; 'ಯುವ' ನೋಡಿ ಫ್ಯಾನ್ಸ್ ಏನಂದ್ರು?
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಚ್ಚರ: ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಿರುವ ಲಕ್ಷಣಗಳಿವು!
ಆರೋಗ್ಯವು ಸಾಮಾನ್ಯವಾಗಿದೆ ಎಂದು ನಮಗೆ ಅನಿಸುತ್ತದೆ. ಆದರೆ ಕೆಲವೊಮ್ಮೆ ಪದೇ ಪದೇ ಹಸಿವು ಆಗುವುದು, ತೂಕ ಹೆಚ್ಚಳವಾಗುವುದು ಇತ್ಯಾದಿಗಳು ಅನಾರೋಗ್ಯದ ಲಕ್ಷಣಗಳಾಗಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಯದೇ ಇದ್ದರೆ ಅದು ರಕ್ತದಲ್ಲಿನ ಸಕ್ಕರೆ ಅಂಶವು (ಬ್ಲಡ್ ಶುಗರ್) ಹೆಚ್ಚಾಗುತ್ತಿರುವ ಲಕ್ಷಣಗಳಾಗಿದೆ. ಬ್ಲಡ್ ಶುಗರ್ ಎಷ್ಟು ಬಾರಿ ಪರೀಕ್ಷೆ ಆಗಬೇಕು?
ಹಾಗಂತ ಮಧುಮೇಹಿಗಳು ಮಾತ್ರ ತಮ್ಮ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ವಹಿಸುವುದಲ್ಲ, ಸಾಮಾನ್ಯ ಜನರು ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಇದನ್ನು ಕಡೆಗಣಿಸುತ್ತಾ ಹೋದರೆ ರಕ್ತದಲ್ಲಿನ ಸಕ್ಕರೆ ಅಂಶವು ಹೆಚ್ಚಾಗಿ ಅದು ಮಧುಮೇಹಕ್ಕೆ ಸೇರಲ್ಪಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿದೆ ಎನ್ನುವುದಕ್ಕೆ ಕೆಲವೊಂದು ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಗಮನಿಸಿಕೊಳ್ಳಿ.....
ಅತಿಯಾದ ಬಾಯಾರಿಕೆ
ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಕಿಡ್ನಿ ಸಕ್ಕರೆಯನ್ನು ಹೊರಗೆ ಹಾಕಲು ಅತಿಯಾಗಿ ಕೆಲಸ ಮಾಡುತ್ತದೆ. ಮೂತ್ರದ ಮೂಲಕ ಸಕ್ಕರೆಯು ಹೊರಬೀಳುವುದು. ಇದರಿಂದಾಗಿ ಅತಿಯಾದ ಬಾಯಾರಿಕೆ ಅಥವಾ ನಿರ್ಜಲೀಕರಣ ಉಂಟಾಗಬಹುದು.
ಪದೇ ಪದೇ ಹಸಿವು
ಮೂತ್ರ ಜಾಸ್ತಿಯಾದಾಗ ಕ್ಯಾಲರಿ ದಹಿಸಲ್ಪಡುತ್ತದೆ. ರಕ್ತದಲ್ಲಿ ಅತಿಯಾಗಿ ಸಕ್ಕರೆ ಅಂಶ ಇರುವ ಕಾರಣ ಆಹಾರದಲ್ಲಿನ ಸಕ್ಕರೆ ಅಂಶವು ಕೋಶಗಳನ್ನು ಸೇರಿಕೊಳ್ಳುವುದಿಲ್ಲ. ಇದರಿಂದಾಗಿ ಪದೇ ಪದೇ ಹಸಿವಾಗುತ್ತದೆ.
ಆಗಾಗ ಮೂತ್ರಶಂಕೆ
ರಕ್ತದಲ್ಲಿನ ಸಕ್ಕರೆ ಅಂಶವನ್ನು ಮೂತ್ರದ ಮೂಲಕ ಕಿಡ್ನಿ ಹೊರಹಾಕುವಾಗ ನಿರ್ಜಲೀಕರಣ ಮತ್ತು ಬಾಯಾರಿಕೆ ಉಂಟಾಗುತ್ತದೆ. ಇದರಿಂದಾಗಿ ನೀರನ್ನು ಹೆಚ್ಚು ಸೇವಿಸಬೇಕಾಗುತ್ತದೆ. ಇದರಿಂದ ಮೂತ್ರಶಂಕೆಯು ಹೆಚ್ಚಾಗುವುದು.
ತೂಕ ಕಳೆದುಕೊಳ್ಳುವುದು
ಮೂತ್ರಶಂಕೆಯು ಅತಿಯಾದಾಗ ಕ್ಯಾಲರಿ ದಹಿಸುವುದು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ತೂಕವು ಕಡಿಮೆಯಾಗುವುದು.
ಮರಗಟ್ಟುವಿಕೆ
ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾದಾಗ ಅದು ನರಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ಮರಗಟ್ಟುವಿಕೆ ಉಂಟಾಗಿ ಕೈ ಹಾಗೂ ಕಾಲುಗಳಲ್ಲಿ ಸ್ಪರ್ಶಜ್ಞಾನ ಇಲ್ಲದಂತಾಗುತ್ತದೆ.
ದೃಷ್ಟಿ ಮಂಜಾಗುವುದು
ಸಕ್ಕರೆ ಪ್ರಮಾಣವು ರಕ್ತದಲ್ಲಿ ಹೆಚ್ಚಾದ ಸಂದರ್ಭದಲ್ಲಿ ಅತಿಯಾದ ಮೂತ್ರಶಂಕೆಯಿಂದ ನಿರ್ಜಲೀಕರಣ ಮಾತ್ರವಲ್ಲದೆ ಕಣ್ಣುಗಳು ಒಣಗುವುದು. ಇದರಿಂದ ದೃಷ್ಟಿ ಮಂಜಾಗುವುದು.