Just In
- 43 min ago 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- 1 hr ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 2 hrs ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 4 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
Don't Miss
- Movies ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ
ಪ್ರಮುಖವಾಗಿ ಸಸ್ಯಾಹಾರಿಗಳಿಗೆ ತಮ್ಮ ಆರೋಗ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತರಕಾರಿ ಪ್ರಮುಖ, ಯಾಕೆಂದರೆ ಇವರು ಮಾಂಸದ ಮೊರೆ ಹೋಗುವುದಿಲ್ಲ. ಮಧುಮೇಹ, ಅಸ್ತಮಾ ಮತ್ತು ಇತರ ಕಾಯಿಲೆಗಳಿಗೆ ತರಕಾರಿ ಹೇಗೆ ಉಪಯೋಗವಾಗಬಲ್ಲದು ಎನ್ನುವುದನ್ನು ಈ ಲೇಖನದಲ್ಲಿ ಹೇಳಲಾಗಿದೆ.
ಪೋಷಕರು ತಮ್ಮ ಮಕ್ಕಳಿಗೆ ಮೊದಲಿನಿಂದಲೂ ತರಕಾರಿಗಳ ಮಹತ್ವದ ಬಗ್ಗೆ ತಿಳಿಸುತ್ತಲೇ ಬರುತ್ತಿದ್ದಾರೆ. ಆದರೆ ಮಕ್ಕಳು ಮಾತ್ರ ತರಕಾರಿಗೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಚಿಪ್ಸ್ ಅಥವಾ ಚಾಕಲೇಟುಗಳಿಗೆ ಮಾರುಹೋಗುತ್ತಿರುವುದು ಸಾಮಾನ್ಯ. ನಾವು ದೊಡ್ಡವರಾದಾಗಲೇ ನಮಗೆ ತರಕಾರಿಗಳಲ್ಲಿರುವ ಪೋಷಕಾಂಶದ ಬಗ್ಗೆ ಮತ್ತು ಅದರಿಂದಾಗುವ ಉಪಯೋಗದ ಬಗ್ಗೆ ತಿಳಿಯುವುದು. ಆದ್ದರಿಂದ ನಾವು ನಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಯನ್ನು ಬಳಸಲು ಪ್ರಯತ್ನ ಮಾಡಬೇಕು.
ತರಕಾರಿಗಳು ಮತ್ತು ಹಣ್ಣುಗಳು ನಮಗೆ ಆರೋಗ್ಯದ ದೃಷ್ಟಿಯಿಂದ ಬಹಳ ಅವಶ್ಯಕ ಮತ್ತು ಯಾಕೆಂದರೆ ಇವು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇದರ ಉಪಯುಕ್ತತೆ ತುಂಬಾ ಜನರಿಗೆ ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ ಎನ್ನುವುದರ ಬಗ್ಗೆ ಅರಿವಿದೆ. ತರಕಾರಿಗಳಲ್ಲಿ ರೋಗನಿರೋಧಕ ಜೀವಸತ್ವಗಳು ಮತ್ತು ಖನಿಜಗಳ ಅಂಶಗಳು ಹೇರಳವಾಗಿದ್ದು ಇವು ಆರೋಗ್ಯ ಕಾಪಾಡಲು ಸಹಾಯಕಾರಿಯಾಗಿದೆ.
ಪ್ರಾಚೀನ ಕಾಲದಲ್ಲಿ, ಜನರು ವಿವಿಧ ಕಾಯಿಲೆಗಳನ್ನು ಗುಣಪಡಿಸಲು ತರಕಾರಿಯಿಂದ ತಯಾರಿಸಲಾದ ಹಲವು ಬಗೆಯ ಮದ್ದುಗಳನ್ನು ಬಳಸುತ್ತಿದ್ದರು, ಇಂದಿಗೂ ಕೂಡ ಆಯುರ್ವೇದ ಔಷಧಿಗಳಲ್ಲಿ ವಿವಿಧ ತರಕಾರಿಗಳ ಸಾರಗಳನ್ನು ಉಪಯೋಗಿಸಿ ಕೆಲವು ಕಾಯಿಲೆಗಳ ಲಕ್ಷಣಗಳನ್ನು ದೂರಗೊಳಿಸುವಲ್ಲಿ ಉಪಯೋಗಿಸಲ್ಪಡುತ್ತದೆ. ತರಕಾರಿಗಳಿಂದಾಗುವ ವಿಧವಿಧವಾದ ಪ್ರಯೋಜನಗಳನ್ನು ಕಂಡು ಹಿಡಿಯಲು ಕೆಲವು ಮಿಲಿಯನ್ ಡಾಲರ್ ಹಣವನ್ನು ಸಂಶೋಧನೆಗಾಗಿ ವ್ಯಯಿಸಲಾಗುತ್ತಿದೆ. ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿದರೆ ಹತ್ತಾರು ಲಾಭ
ಇತ್ತೀಚೆಗೆ
ಬೆಂಡೆಕಾಯಿ,
ಜನಪ್ರಿಯವಾಗಿ
ಲೇಡೀಸ್
ಫಿಂಗರ್
ಎಂದು
ಕರೆಯಲಾಗುತ್ತದೆ
ಇದರಲ್ಲಿ
ಬೆಂಡೆಕಾಯಿ
ಅನೇಕ
ಆರೋಗ್ಯಕಾರಿ
ಅಂಶವಿರುವಂತಹ
ತರಕಾರಿ
ಎಂದು
ಪರಿಗಣಿಸಲಾಗಿದೆ.
ಈ
ತರಕಾರಿಯಲ್ಲಿ
ಅನೇಕ
ಬಗೆಯ
ಉಪಯೋಗಗಳಿವೆ.ಬೆಂಡೆ
ಕಾಯಿಯ
ಬಗ್ಗೆ
ನಮಗೆ
ಗೊತ್ತಿಲ್ಲದೇ
ಇರುವ
ಆರೋಗ್ಯಕಾರಿ
ಉಪಯುಕ್ತತೆಯ
ಬಗ್ಗೆ
ನಾವೀಗ
ತಿಳಿಯೋಣ...
ಮಧುಮೇಹವನ್ನು ತಡೆಯಬಲ್ಲುದು
ಬೆಂಡೆಕಾಯಿಗೆ ರಕ್ತದಲ್ಲಿರುವ ಸಕ್ಕರೆಯ ಅಂಶದ ಮಟ್ಟವನ್ನು ಸಮತೋಲನದಲ್ಲಿರುವಂತೆ ಮಾಡಬಲ್ಲ ಗುಣಗಳಿವೆ. ಇನ್ಸುಲಿನ್ ನ ಉತ್ಪಾದನೆಯನ್ನು ದೇಹದಲ್ಲಿ ಹೆಚ್ಚಿಸುವುದರಿಂದ ಮಧುಮೇಹಿಗಳಲ್ಲಿ ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ.
ಗರ್ಭಧಾರಣೆಗೆ ಉಪಯುಕ್ತ
ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಮತ್ತು ಪೋಲಟ್ ಅಂಶ ಹೇರಳವಾಗಿದೆ. ಈ ಪೋಷಕಾಂಶಗಳು ಗರ್ಭಾವಸ್ಠೆಯಲ್ಲಿರುವ ತಾಯಿಯ ಆರೋಗ್ಯಕ್ಕೆ ಉತ್ತಮವಾದುದು. ಅಷ್ಟೇ ಅಲ್ಲದೆ ಭ್ರೂಣದ ಬೆಳವಣಿಗೆಗೆ ಕೂಡ ಇದು ಉತ್ತಮವಾದುದು.
ಅಸ್ತಮಾವನ್ನು ತಡೆಗಟ್ಟುತ್ತದೆ
ಬೆಂಡೆ ಕಾಯಿಯಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿರುತ್ತದೆ. ಇದು ಉರಿಯೂತದ ಲಕ್ಷಣ, ಆಸ್ತಮಾ ಮತ್ತು ಕೆಲವು ಇತರ ಉಸಿರಾಟದ ತೊಂದರೆಗಳನ್ನು ತಡೆಯಲು ಸಹಾಯ ಮಾಡಬಹುದು
ರಕ್ತಹೀನತೆಗೆ ಒಳ್ಳೆಯದು
ಬೆಂಡೆಕಾಯಿಯಲ್ಲಿ ಕಬ್ಬಿಣ, ಪೋಲೇಟ್ ಮತ್ತು ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿದೆ, ಈ ಸತ್ವಗಳು ರಕ್ತ ಕಣಗಳ ಉತ್ಪತ್ತಿಗೆ ಪ್ರಮುಖ ಕಾರಣವಾಗಿರುತ್ತದೆ ಇದರಿಂದ ಹಿಮೋಗ್ಲೊಬಿನ್ ಹೆಚ್ಚಿಸಲು ಸಹಾಯಕಾರಿಯಾಗಿರುತ್ತದೆ. ಆದುದರಿಂದ ಬೆಂಡೆಕಾಯಿ ರಕ್ತಹೀನತೆ ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ.
ಚರ್ಮವನ್ನು ಉತ್ತಮಗೊಳಿಸುತ್ತದೆ
ಬೆಂಡೆಕಾಯಿಯಲ್ಲಿ ಉತ್ಕರ್ಷಣ (ಆಂಟೀ ಆಕ್ಸಿಡೆಂಟ್) ಮತ್ತು ವಿಟಮಿನ್ ಸಿ ಇರುವುದರಿಂದ ಈ ಎರಡು ಅಂಶಗಳು ಚರ್ಮದ ಕಾಂತಿಗೆ ಉತ್ತಮವಾದ ಪೋಷಕಾಂಶ ನೀಡುತ್ತದೆ. ಈ ತರಕಾರಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಚರ್ಮವು ಕಾಂತಿಯುತವಾಗಿ ಹೊಳೆಯಲು ಸಹಾಯಕಾರಿಯಾಗುತ್ತದೆ.
ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ
ಬೆಂಡೆಕಾಯಿಯಲ್ಲಿ ಕೊಬ್ಬಿನ ಅಂಶವಿರುವುದಿಲ್ಲವಾದುದರಿಂದ ಇದರ ಸೇವನೆಯಿಂದ ದೇಹಕ್ಕೆ ಕೊಬ್ಬಿನ ಅಂಶ ಸೇರುವುದಿಲ್ಲ. ಅಲ್ಲದೆ ಈ ತರಕಾರಿಯು ಕೊಬ್ಬಿನ ಅಂಶವನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ ಮತ್ತು ಕೊಬ್ಬಿನಾಂಶ ಉತ್ಪತ್ತಿಗೆ ಕಾರಣವಾಗುವ ಕಣಗಳನ್ನು ತಡೆಯುವಲ್ಲಿ ಸಹಾಯಕಾರಿಯಾಗಿದೆ.