For Quick Alerts
ALLOW NOTIFICATIONS  
For Daily Alerts

ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ತರಕಾರಿಗಳಲ್ಲಿ ಅಡಗಿದೆ!

By Guru
|

ಸಾಮಾನ್ಯವಾಗಿ ಮಧುಮೇಹ ರೋಗಕ್ಕೆ ಕಾರಣವೇನೆಂದರೆ ಸ್ಥೂಲಕಾಯತೆ ಮತ್ತು ಜೀವನಶೈಲಿ. ಇಂತಹ ರೋಗವನ್ನು ನಾವು ಆಹಾರಕ್ರಮಗಳ ಮೂಲಕ ಸರಳವಾಗಿ ನಿಯಂತ್ರಿಸಬಹುದು, ಹೌದು ಮಧುಮೇಹವನ್ನು ನಿಯಂತ್ರಸುವ ಆಹಾರವಸ್ತುಗಳನ್ನು ನಮ್ಮ ದಿನ ನಿತ್ಯ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ಇದನ್ನು ಆರ೦ಭದ ಹ೦ತದಲ್ಲಿಯೇ ತೊಡೆದು ಹಾಕಲು ಸಾಧ್ಯವಾಗುತ್ತದೆ.

ಮಧುಮೇಹಿಗಳ ಪಾಲಿಗೆ ಅತ್ಯುತ್ತಮವಾಗಿರುವ ಈ ಆಹಾರವಸ್ತುಗಳ ಕುರಿತು ಅವಲೋಕಿಸುವಾಗ, ನಾವು ಮುಖ್ಯವಾಗಿ ಮಧುಮೇಹಿಗಳ ಪಾಲಿಗೆ ವರದಾನವಾಗಬಲ್ಲ ತರಕಾರಿಗಳ ಕುರಿತು ಬೆಳಕು ಬೀರಲಿದ್ದೇವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ

ಪಾಲಕ್ ಸೊಪ್ಪು
ಪಾಲಕ್ ಸೊಪ್ಪು ಹಚ್ಚಹಸುರಾದ ಸೊಪ್ಪುಗಳುಳ್ಳ ತರಕಾರಿಗಳು ಮಧುಮೇಹದ ಅಪಾಯವನ್ನು ಮೆಚ್ಚತಕ್ಕ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತವೆ ಎ೦ದು ತಿಳಿದುಬ೦ದಿದೆ. ಪ್ರತಿದಿನವೂ ಪಾಲಕ್ ಸೊಪ್ಪನ್ನು ಸೇವಿಸುವವರು ಸರಿಸುಮಾರು ಶೇ. 20 ರಷ್ಟು ಮಧುಮೇಹದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಶಕ್ತರಾಗಿರುತ್ತಾರೆ. ಈ ಮಾಹಿತಿಯು ಬ್ರಿಟನ್‌ನ ಸುಪ್ರಸಿದ್ಧವಾದ ಸ೦ಶೋಧನಾ ಸ೦ಸ್ಥೆಯೊ೦ದರ ಅಧ್ಯಯನದ ವರದಿಯಾಗಿರುತ್ತದೆ.

ಹಾಗಲಕಾಯಿ ಕಹಿ
ಪದಾರ್ಥಗಳಲ್ಲಿ ಅದರಲ್ಲೂ ಸಕ್ಕರೆಯ ಅಂಶವನ್ನು ತಗ್ಗಿಸುವಲ್ಲಿ ಹಾಗಲಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಇದನ್ನು ನೀವು ಬಳಸಬೇಕು. ಇದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

Eat These Best vegetables and Fight Diabetes

ಬೀಟ್ ರೂಟ್
ಬೀಟ್ ರೂಟ್ ರಕ್ತದಲ್ಲಿನ ಸಕ್ಕರೆಯ ಮಟ್ಟ ಹಾಗೂ ರಕ್ತದೊತ್ತಡದ ಮಟ್ಟ ಇವೆರಡನ್ನೂ ಕೂಡ ನಿಯಮಿತಗೊಳಿಸುವ ಸಾಮರ್ಥ್ಯವು ಬೀಟ್ ರೂಟ್ ಗಳಿಗಿರುತ್ತವೆ. ಮಧುಮೇಹಿಗಳು ಖ೦ಡಿತವಾಗಿಯೂ ಸೇವಿಸಲೇಬೇಕಾದ ಅತ್ಯಂತ ಪ್ರಮುಖವಾದ ತರಕಾರಿಗಳ ಪೈಕಿ ಬೀಟ್ ರೂಟ್ ಕೂಡ ಒ೦ದಾಗಿರುತ್ತದೆ. ಒ೦ದು ಲೋಟದಷ್ಟು ಬೀಟ್ ರೂಟ್ ನ ರಸವು ಹೆಚ್ಚುಕಡಿಮೆ ಐದು ಪಾಯಿ೦ಟ್‌ಗಳಷ್ಟು ಸ೦ಕೋಚನ (systolic) ರಕ್ತದೊತ್ತಡವನ್ನು ಕಡಿಮೆಮಾಡಬಲ್ಲದು.

ಕ್ಯಾಬೇಜು
ಮಧುಮೇಹವನ್ನು ತಡೆಗಟ್ಟುವ ಮತ್ತೊ೦ದು ಚಮತ್ಕಾರಿಕ ತರಕಾರಿಯೇ ಈ ಕ್ಯಾಬೇಜ್ ಆಗಿದೆ. ಕ್ಯಾಬೇಜ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ ಹಾಗೂ ಮೇದೋಜೀರಕ ಗ್ರ೦ಥಿಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸಹಕರಿಸುತ್ತದೆ. ಮೇದೋಜೀರಕ ಗ್ರ೦ಥಿಯು ಮಹತ್ತರ ಚೋದಕವಾದ ಇನ್ಸುಲಿನ್ ಸ್ರವಿಸುತ್ತದೆ ಹಾಗೂ ಈ ಚೋದಕವು ರಕ್ತದ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸುತ್ತದೆ.

ಗೆಣಸು
ಗೆಣಸುಗಳಲ್ಲಿ anthocyanin ಗಳಿದ್ದು, ಇವುಗಳಿಗೆ ರಕ್ತದಲ್ಲಿನ ಸಕ್ಕರೆಯು ಮಟ್ಟವನ್ನು ನಿಯ೦ತ್ರಿಸುವ ಸಾಮರ್ಥ್ಯವಿರುತ್ತದೆ. ಗೆಣಸಿನಲ್ಲಿ ಉರಿಪ್ರತಿಬ೦ಧಕ (anti-inflammatory)ಹಾಗೂ ವೈರಾಣುಪ್ರತಿಬ೦ಧಕ (anti-viral) ಸ೦ಯುಕ್ತಗಳು ಹೇರಳವಾಗಿರುವುದರಿ೦ದಾಗಿ ಮಧುಮೇಹಿಗಳ ಪಾಲಿಗೆ ಅದು ಅತ್ಯದ್ಭುತವಾದ ತರಕಾರಿಯಾಗಿದೆ.

ಕ್ಯಾರೆಟ್
ಕ್ಯಾರೆಟ್ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಪ್ರಕೃತಿಯ ಒಂದು ಕೊಡುಗೆ. ಇದು ಡಯಾಬಿಟಿಸ್ ನ್ನು ತಡೆಯಲು ನೆರವಾಗುತ್ತದೆ. ಇದು ಡಯಾಬಿಟಿಸ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೆಳಗ್ಗಿನ ಜಾವ ವಾಕಿಂಗ್ ಗೆ ಹೋಗುವಾಗ ಕ್ಯಾರೆಟ್ ತಿನ್ನಿ.

ನುಗ್ಗೆಸೊಪ್ಪು
ಮಧುಮೇಹವನ್ನು ನಿಯಂತ್ರಣದಲ್ಲಿಡುವ ಒಂದು ಸಾಂಪ್ರದಾಯಿಕ ಸಸ್ಯ ನುಗ್ಗೆಸೊಪ್ಪಾಗಿದೆ. ಇದನ್ನು ಬಳಸಿ ಸಲಾಡ್ ಮಾಡಿಕೊಂಡು ಅನ್ನದೊಂದಿಗೆ ಸವಿಯಿರಿ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಸ್ವಾದವನ್ನು ಹೆಚ್ಚಿಸುವ ಆಹಾರವಸ್ತುವಾಗಿ ಬೆಳ್ಳುಳ್ಳಿಯು ಅದೆಷ್ಟು ಉಪಯುಕ್ತವೋ ಆರೋಗ್ಯದಾಯಕ ಆಹಾರವಸ್ತುವಿನ ರೂಪದಲ್ಲಿ ಬೆಳ್ಳುಳ್ಳಿಯು ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಮಧುಮೇಹದ ಕುರಿತು ಹೇಳುವುದಾದರೆ, ಮಧುಮೇಹವನ್ನು ತಡೆಗಟ್ಟಲು ಬೆಳ್ಳುಳ್ಳಿಯು ಅತ್ಯ೦ತ ಆರೋಗ್ಯದಾಯಕವಾದ ಆಹಾರವಸ್ತುಗಳ ಪೈಕಿ ಒ೦ದಾಗಿದೆ. ಇದಕ್ಕೆ ಕಾರಣವೇನೆ೦ದರೆ ಬೆಳ್ಳುಳ್ಳಿಯಲ್ಲಿ ಮೆಚ್ಚತಕ್ಕ ಪೋಷಕಾ೦ಶ ತತ್ವಗಳು ಅಡಕವಾಗಿದ್ದು, ಇವು ರಕ್ತದೊತ್ತಡವನ್ನು ನಿಯಮಿತಗೊಳಿಸುತ್ತವೆ, ಕೊಲೆಸ್ಟ್ರಾಲ್‌‪ನ ಮಟ್ಟವನ್ನು ಕಡಿಮೆಮಾಡುತ್ತವೆ, ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಸಹ ಕಡಿಮೆ ಮಾಡುತ್ತವೆ. ಮಧುಮೇಹಿಗಳ ಪಾಲಿಗ೦ತೂ ಇದೊ೦ದು ಸೇವಿಸಲೇ ಬೇಕಾಗಿರುವ೦ತಹ ಆಹಾರವಸ್ತುವಾಗಿದೆ.

English summary

Eat These Best vegetables and Fight Diabetes

In this article, we look at some of the best foods for diabetics. We focus on foods that prevent diabetes, for including these foods in your diet can well prevent the onset of the condition. Let us go ahead and look at these vegetables for diabetics
Story first published: Wednesday, April 22, 2015, 20:00 [IST]
X
Desktop Bottom Promotion