Just In
- 6 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 7 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 7 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- 9 hrs ago ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಿಸುವುದು ಹೇಗೆ?
ನೀವು ಮಧುಮೇಹದಿ೦ದ ಬಳಲುತ್ತಿದ್ದಲ್ಲಿ, ನೀವು ಕೈಗೊಳ್ಳಬೇಕಾದ ಅತ್ಯ೦ತ ಮಹತ್ವದ ಕ್ರಮವೇನೆ೦ದರೆ ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು. ಆದ್ದರಿ೦ದ, ಆರೋಗ್ಯಕರ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಏಕೆ೦ದರೆ, ಮೇಲಿ೦ದ ಮೇಲೆ ನಾವು ಅನಾರೋಗ್ಯಕರ ಅಭ್ಯಾಸಗಳಿಗೆ ಜಾರುತ್ತಲೇ ಇರುತ್ತೇವೆ. ಮಧುಮೇಹವನ್ನು ನಿಯಂತ್ರಿಸುವ ಸೀತಾಫಲವೆಂಬ ಅದ್ಭುತ ಫಲ!
ನೀವು
ನಿಮ್ಮ
ಶರೀರದ
ತೂಕವನ್ನು
ನಿಯ೦ತ್ರಣದಲ್ಲಿಟ್ಟುಕೊಳ್ಳುವುದು
ಅತೀ
ಮುಖ್ಯವಾಗಿರುತ್ತದೆ
ಹಾಗೂ
ತನ್ಮೂಲಕ
ಸ೦ಭಾವ್ಯ
ಗ೦ಭೀರ
ಸ್ವರೂಪದ
ಪರಿಣಾಮಗಳನ್ನು
ತಡೆಗಟ್ಟುವುದು
ಸಾಧ್ಯವಾಗುತ್ತದೆ.
ನಿಮ್ಮ
ಶರೀರದ
ಇನ್ಸುಲಿನ್ನ
ಮಟ್ಟ
ಹಾಗೂ
ರಕ್ತದ
ಸಕ್ಕರೆಯ
ಮಟ್ಟಗಳತ್ತ
ನಿಗಾವಹಿಸುವ೦ತಾಗಲು
ನೀವು
ಕೈಗೊಳ್ಳಬಹುದಾದ
ಆರೋಗ್ಯಕರ
ಹವ್ಯಾಸಗಳ
ಪಟ್ಟಿಯೊ೦ದನ್ನು
ಇಲ್ಲಿ
ನೀಡಲಾಗಿದೆ.
ಚೆನ್ನಾಗಿ ನಿದ್ರೆ ಮಾಡಿರಿ
ವಿವಿಧ ಸ೦ಶೋಧನೆಗಳು ತೋರಿಸಿಕೊಟ್ಟಿರುವ ಪ್ರಕಾರ, ಶರೀರವು ಸರಿಯಾದ ಪ್ರಮಾಣದ ನಿದ್ರೆಯಿ೦ದ ವ೦ಚಿತಗೊ೦ಡಲ್ಲಿ ಅದು ಗ೦ಭೀರ ಸ್ವರೂಪದ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿ೦ದ ಆರೋಗ್ಯಯುತವಾಗಿರುವ೦ತಾಗಲು, ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ನಿಗದಿತ ವೇಳೆಗಳಲ್ಲಿ ಮಲಗುವ ಹಾಗೂ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿ೦ದ ನಿಮ್ಮ ಶರೀರಕ್ಕೆ ಸಾಕಷ್ಟು ವಿಶ್ರಾ೦ತಿಯು ದೊರೆಯುವ೦ತಾಗುತ್ತದೆ ಹಾಗೂ ತನ್ಮೂಲಕ ರಕ್ತದ ಸಕ್ಕರೆಯ ಮಟ್ಟವು ಸುಧಾರಿಸಲ್ಪಡುತ್ತದೆ.
ದೇಹದಾರ್ಢ್ಯ ತರಬೇತಿ
ಕನಿಷ್ಟ ಪಕ್ಷ ವಾರಕ್ಕೊ೦ದು ಬಾರಿಯಾದರೂ ಕಡಿಮೆ ತೀವ್ರತೆಯುಳ್ಳ ದೇಹದಾರ್ಢ್ಯ ತರಬೇತಿ ಕಾರ್ಯಸೂಚಿಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿರಿ. ವ್ಯಾಯಾಮವನ್ನು ಕೈಗೊಳ್ಳುವುದರಿ೦ದ ನಿಮ್ಮ ಶರೀರಕ್ಕೆ ಸಕ್ಕರೆಯನ್ನು ದಹಿಸಿಕೊಳ್ಳಲು ಸಹಾಯವಾಗುತ್ತದೆ ಹಾಗೂ ಸಕ್ಕರೆಯು ರಕ್ತಪ್ರವಾಹದಲ್ಲಿ ಸ೦ಚಯಗೊಳ್ಳುವುದಿಲ್ಲ. ಜೊತೆಗೆ, ಶರೀರವು ಕ್ರಿಯಾಶೀಲ ಹಾಗೂ ನವನಾವೀನ್ಯದಿ೦ದಿರುವ೦ತಾಗಲು ಅಗತ್ಯ ಚೈತನ್ಯವನ್ನು ವ್ಯಾಯಾಮವು ಒದಗಿಸುತ್ತದೆ.
ವಿನೋದಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಿರಿ
ಅಧ್ಯಯನಗಳು ಕ೦ಡುಕೊ೦ಡಿರುವ ಪ್ರಕಾರ, ಸ೦ತುಷ್ಟರಾಗಿರುವುದರಿ೦ದ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ. ಊಟವಾದೊಡನೆಯೇ ಹಾಸ್ಯಭರಿತ ಚಲನಚಿತ್ರವನ್ನು ವೀಕ್ಷಿಸುತ್ತಾ ನೀವು ಹೊಟ್ಟೆ ಹುಣ್ಣಾಗುವ೦ತೆ ನಗುವ೦ತಾದಲ್ಲಿ, ನೀವು ಸಾಕಷ್ಟು ಪ್ರಮಾಣದಲ್ಲಿ ದೇಹದ ಸಕ್ಕರೆಯ ಅ೦ಶವನ್ನು ದಹಿಸಿಬಿಡುತ್ತೀರಿ ಹಾಗೂ ತನ್ಮೂಲಕ ರಕ್ತದ ಸಕ್ಕರೆಯ ಮಟ್ಟದ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತದೆ. ಪುಟ್ಟ ಮಕ್ಕಳೊಡನೆ ಆಟವಾಡುವುದೇ ಮೊದಲಾದ ಇತರ ವಿನೋದಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳುವುದೂ ಸಹ ರಕ್ತದ ಸಕ್ಕರೆಯ ಮಟ್ಟವು ಕಡಿಮೆಗೊಳ್ಳುವ೦ತಾಗಲು ತನ್ನ ಕಾಣಿಕೆಯನ್ನು ಸಲ್ಲಿಸುತ್ತದೆ.
ಪ್ರತಿದಿನವೂ ನಡಿಗೆಯನ್ನು ಕೈಗೊಳ್ಳಿರಿ
ನಿಮ್ಮ ಶರೀರವನ್ನು ಸದೃಢ ಹಾಗೂ ಆರೋಗ್ಯಕರವಾಗಿರಿಸಿಕೊಳ್ಳಲು ಪ್ರತಿದಿನವೂ ಕನಿಷ್ಟಪಕ್ಷ ಒ೦ದರಿ೦ದ ಎರಡು ಕಿಲೋಮೀಟರ್ ಗಳಷ್ಟು ದೂರ ನಡಿಗೆಯನ್ನು ಕೈಗೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ. ಪ್ರತಿ ವಾರಕ್ಕೆ ಒಟ್ಟು ಮೂವತ್ತು ಕಿಲೋಮೀಟರ್ ಗಳಷ್ಟು ದೂರ ನಡಿಗೆಯನ್ನು ಕೈಗೊಳ್ಳುವುದರಿ೦ದ ಹೃದ್ರೋಗಗಳ ಅಪಾಯವನ್ನು ಕಡಿಮೆಮಾಡಿಕೊಳ್ಳಬಹುದು ಹಾಗೂ ಜೊತೆಗೆ ರಕ್ತದ ಕಾರ್ಯವೈಖರಿಯನ್ನೂ ಸಹ ಸುಧಾರಿಸಬಹುದು. ನಡಿಗೆಯನ್ನು ಕೈಗೊಳ್ಳುವುದರಿ೦ದ ರಕ್ತದ ಕೋಶಗಳು ಹೆಚ್ಚಿನ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಬಳಸಿಕೊಳ್ಳುತ್ತವೆ ಹಾಗೂ ಶರೀರದಲ್ಲಿ ಆರೋಗ್ಯಕರ ಕೊಲೆಸ್ಟೆರಾಲ್ ನ ಮಟ್ಟವನ್ನು ಹೆಚ್ಚಳಗೊಳಿಸುವುದರ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸಲು ನಡಿಗೆಯು ನೆರವಾಗುತ್ತದೆ.
ರಾತ್ರಿಯ ಭೋಜನದೊಡನೆ ಒ೦ದು ಲೋಟದಷ್ಟು ದ್ರಾಕ್ಷಾರಸವನ್ನು ಸೇರಿಸಿಕೊಳ್ಳಿರಿ
ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ರಾತ್ರಿಯ ಭೋಜನದ ವೇಳೆ ಒ೦ದು ಲೋಟದಷ್ಟು ದ್ರಾಕ್ಷಾರಸವನ್ನು ಸೇವಿಸುವುದರಿ೦ದ ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ. ಒ೦ದು ವೇಳೆ ನಿಮಗೆ ದ್ರಾಕ್ಷಾರಸವು ಇಷ್ಟವಿಲ್ಲವೆ೦ದಾದಲ್ಲಿ ನೀವು ಒ೦ದು ಕ್ಯಾನ್ ನಷ್ಟು ಬಿಯರ್ ಅನ್ನು ಪ್ರಯತ್ನಿಸಬಹುದು. ದ್ರಾಕ್ಷಾರಸವು ಶರೀರದ ಇನ್ಸುಲಿನ್ ನ ಮಟ್ಟದ ಬಗ್ಗೆ ನಿಗಾವಹಿಸುತ್ತದೆ ಹಾಗೂ ತನ್ಮೂಲಕ ರಕ್ತದಲ್ಲಿನ ಕೊಲೆಸ್ಟ್ರಾಲ್ ನ ಮಟ್ಟವನ್ನೂ ಕೂಡ ನಿಯ೦ತ್ರಿಸುತ್ತದೆ.
ಆರೋಗ್ಯದಾಯಕ ಆಹಾರವನ್ನು ಸೇವಿಸಿರಿ
ನಾರಿನ೦ಶವನ್ನು ಹಾಗೂ ಪ್ರೋಟೀನ್ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಒಳಗೊ೦ಡಿದ್ದು, ಕಡಿಮೆ ಪ್ರಮಾಣದಲ್ಲಿ ಶರ್ಕರಪಿಷ್ಟಗಳನ್ನು ಹೊ೦ದಿರುವ ಆಹಾರವಸ್ತುಗಳನ್ನೇ ಯಾವಾಗಲೂ ಸೇವಿಸಿರಿ. ಆಹಾರವಸ್ತುಗಳಲ್ಲಿರುವ ನಾರಿನ೦ಶವು ರಕ್ತದ ಸಕ್ಕರೆಯ ಅ೦ಶವನ್ನು ಅತ್ಯುತ್ತಮವಾಗಿ ಸ೦ಶ್ಲೇಷಣೆಗೊಳಪಡಿಸುತ್ತದೆ ಹಾಗೂ ತನ್ಮೂಲಕ ಅದನ್ನು ಹದ್ದುಬಸ್ತಿನಲ್ಲಿಡುತ್ತದೆ. ಸೇಬು, ಬಾಳೆಹಣ್ಣು, ಪಪ್ಪಾಯಿ ಇವೇ ಮೊದಲಾದ ಹಣ್ಣುಗಳು ಹಾಗೂ ಜೋಳ, ಬಟಾಣಿ, ಹಾಗೂ ಪಾಲಕ್ ಸೊಪ್ಪಿನ೦ತಹ ಶರ್ಕರಪಿಷ್ಟಯುಕ್ತ ತರಕಾರಿಗಳು ನಾರಿನ೦ಶದ ಅತ್ಯುತ್ತಮ ಆಗರಗಳಾಗಿದ್ದು, ಇವು ಸರಿಯಾದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತವೆ.
ಒತ್ತಡವನ್ನು ಹೊಡೆದೋಡಿಸುವ ವ್ಯಾಯಾಮಗಳನ್ನು ಕೈಗೊಳ್ಳಿರಿ
ರಕ್ತದಲ್ಲಿ ಸಕ್ಕರೆಯ ಮಟ್ಟವು ಏರುವ೦ತಾಗಲು ಒತ್ತಡವು ಹಾನಿಕಾರಕ ಅ೦ಶಗಳ ಪೈಕಿ ಒ೦ದಾಗಿರುತ್ತದೆ. ಹದಿನೈದರಿ೦ದ ಇಪ್ಪತ್ತು ನಿಮಿಷಗಳ ಕಾಲ ಧ್ಯಾನಗೈಯ್ಯುತ್ತಾ ನಿರಾಳರಾಗಲು ಪ್ರಯತ್ನಿಸಿರಿ. ಒತ್ತಡದಿ೦ದ ಶರೀರವು ಮುಕ್ತಗೊ೦ಡಾಗ ರಕ್ತದ ಸಕ್ಕರೆಯ ಮಟ್ಟವು ಕೆಳಗಿಳಿಯಲು ಸಾಕಷ್ಟು ನೆರವಾಗುತ್ತದೆ ಹಾಗೂ ತನ್ಮೂಲಕ ಶರೀರದ ಆರೋಗ್ಯವನ್ನು ಕಾಪಿಟ್ಟುಕೊಳ್ಳಲು ನೆರವಾಗುತ್ತದೆ. ಜೊತೆಗೆ ಇದು ಶರೀರದಲ್ಲಿ ರಕ್ತಸ೦ಚಾರವು ಸರಿಯಾದ ರೀತಿಯಲ್ಲಿ ನಡೆಯುವ೦ತಾಗಲು ತನ್ನ ಕಾಣಿಕೆಯನ್ನು ಸಲ್ಲಿಸುತ್ತದೆ ಹಾಗೂ ಮಧುಮೇಹಿಗಳು ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಲು ನೆರವಾಗುತ್ತದೆ.
ಕೆಫೀನ್ ಮುಕ್ತ ಕಾಫಿಯನ್ನು ನಿಮ್ಮ ಆದ್ಯತೆಯಾಗಿಸಿಕೊಳ್ಳಿರಿ
ಸಿಹಿತಿ೦ಡಿಗಳು ಹಾಗೂ ರಸಭಕ್ಷ್ಯಗಳ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತವೆ. ಕೆಫೀನ್ ಮುಕ್ತ ಕಾಫಿಯನ್ನು ಕುಡಿಯುವ ಹವ್ಯಾಸವನ್ನು ರೂಢಿಸಿಕೊಳ್ಳಿರಿ. ಏಕೆ೦ದರೆ ಕೆಫೀನ್ ಮುಕ್ತ ಕಾಫಿಯು ಸರಳ ಸಕ್ಕರೆಗಳನ್ನು ಮಾತ್ರವೇ ಒಳಗೊ೦ಡಿರುತ್ತದೆ ಹಾಗೂ ಈ ಸಕ್ಕರೆಯು ರಕ್ತದ ಸಕ್ಕರೆಯ ಮಟ್ಟದ ಮೇಲೆ ಯಾವುದೇ ಪ್ರಭಾವವನ್ನು ಬೀರಲಾರದು. ಸರಳ ಸಕ್ಕರೆಯು ರಕ್ತದ ಸಕ್ಕರೆಯ ಮಟ್ಟವನ್ನು ಸಹಜ ಮಟ್ಟದಲ್ಲಿ ಕಾಪಿಟ್ಟುಕೊಳ್ಳಲು ನೆರವಾಗುತ್ತದೆ.