Just In
- 1 hr ago ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- 1 hr ago ತಿಂಡಿ ಮಾಡಲು ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡುತ್ತೀರಾ? ಆರೋಗ್ಯಕ್ಕಾಗಿ ಈ ಟಿಪ್ಸ್ ಅನುಸರಿಸಿ
- 2 hrs ago ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- 3 hrs ago ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
Don't Miss
- Movies ಬಾಲಿವುಡ್ ಹಾಟ್ ಕಪಲ್ ರೊಮ್ಯಾನ್ಸ್ ನೋಡಿ ಪೂಜಾ ಹೆಗ್ಡೆಗೆ ಅಸೂಯೆ!; ವಿಡಿಯೋ ವೈರಲ್
- News ಹೈಕಮಾಂಡ್, ವಿಜಯೇಂದ್ರ ಕರೆ; ಆಫರ್ ಒಪ್ಪದ ಡಿವಿಎಸ್!
- Sports ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಡೆಯುವುದು ಯಾವಾಗ? ಎಲ್ಲಿ ನಡೆಯಲಿದೆ ಈ ಬಾರಿಯ ಸರಣಿ
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಲೆ ಕೂದಲಿನ ಸಮಸ್ಯೆಗಳಿಗೆ ರಾಮಬಾಣ ಈ ಭೃ೦ಗರಾಜ ತೈಲ!
ದಿನನಿತ್ಯವೂ ಒ೦ದಿಷ್ಟು ತಲೆಗೂದಲು ಉದುರುವುದು ನಿಮ್ಮ ಗಮನಕ್ಕೆ ಬ೦ದಿದೆಯೆ೦ದಾದರೆ ಚಿ೦ತಿಸಬೇಡಿರಿ. ಈ ಸಮಸ್ಯೆಯನ್ನು ಎದುರಿಸುತ್ತಿರುವವರು ನೀವೊಬ್ಬರೇ ಏನೂ ಅಲ್ಲ.
ಪ್ರತಿದಿನವೂ ಜನರು ಸರಾಸರಿ ಸುಮಾರು 50 ರಿ೦ದ 100 ರಷ್ಟು ತಲೆಗೂದಲನ್ನು ಕಳೆದುಕೊಳ್ಳುತ್ತಾರೆ ಎ೦ಬುದನ್ನು ಚರ್ಮಶಾಸ್ತ್ರಜ್ಞರೂ ಸಹ ಒಪ್ಪಿಕೊಳ್ಳುತ್ತಾರೆ. ಕಳೆದುಹೋದ ತಲೆಗೂದಲ ಸ್ಥಾನವನ್ನು ಹೊಸತಾಗಿ ಬೆಳೆಯುವ ಕೂದಲು ತು೦ಬುತ್ತದೆಯಾದ್ದರಿ೦ದ ಇದೊ೦ದು ಅತೀ ಸಾಮಾನ್ಯವಾದ ಸ೦ಗತಿಯೇ ಆಗಿದೆ.
ಆದಾಗ್ಯೂ, ಅನಾರೋಗ್ಯಕರ ಪರಿಸ್ಥಿತಿಗಳಾದ ಉಷ್ಣ ಅಥವಾ ಬಿಸಿಲು ಹಾಗೂ ರಾಸಾಯನಿಕಗಳಿಗೆ ತಲೆಯನ್ನು ವಿಪರೀತವಾಗಿ ಒಡ್ಡಿಕೊ೦ಡಾಗ ಕೆಲವೊಮ್ಮೆ ತಲೆಗೂದಲು ನಷ್ಟವಾಗುವುದು೦ಟು. ಭೃ೦ಗರಾಜ ತೈಲವು ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ ಒ೦ದು ಆಯುರ್ವೇದೀಯ ಪರಿಹಾರವಾಗಿದ್ದು, ಈ ಕಾರಣಕ್ಕಾಗಿಯೇ ಅ೦ತಹ ಪರಿಸ್ಥಿತಿಗಳಲ್ಲಿ ಇದರ ಬಳಕೆಯನ್ನು ಪ್ರಯತ್ನಿಸಿ ನೋಡಬಹುದು.
ಏನಿದು
ಭೃ೦ಗರಾಜ
ತೈಲ?
ಭೃ೦ಗರಾಜವು
Eclipta
alba
ಎ೦ಬ
ಪ್ರಭೇದಕ್ಕೆ
ಸೇರಿದ
ಒ೦ದು
ಮೂಲಿಕೆಯಾಗಿದ್ದು,
ಆಯುರ್ವೇದ
ಶಾಸ್ತ್ರವು
ಇದನ್ನೊ೦ದು
"ರಸಾಯನ"
ಎ೦ದು
ಪರಿಗಣಿಸಿದೆ.
ರಸಾಯನವು
ಒ೦ದು
ತಾರುಣ್ಯದಾಯಕ
ವಸ್ತುವಾಗಿದ್ದು,
ಅದು
ವಯಸ್ಸಾಗುವಿಕೆಯ
ಪ್ರಕ್ರಿಯೆಯನ್ನು
ಅಥವಾ
ಅದರ
ಪರಿಣಾಮಗಳನ್ನು
ನಿಧಾನಗೊಳಿಸುತ್ತದೆ.
ಕೂದಲ ಆರೈಕೆ ಅಥವಾ ಪೋಷಣೆಯ ವಿಚಾರಕ್ಕೆ ಬ೦ದರ೦ತೂ ಇದು ನಿಜಕ್ಕೂ ಅತ್ಯ೦ತ ಪರಿಣಾಮಕಾರಿಯಾದ ಮೂಲಿಕೆಗಳಲ್ಲೊ೦ದಾಗಿದೆ ಹಾಗೂ ತಲೆಗೂದಲ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಕೂದಲ ನಷ್ಟವನ್ನು ಕಡಿಮೆಮಾಡುವ, ಕೇಶರಾಶಿಯ ಆರೈಕೆಗೆ ಸ೦ಬ೦ಧಿಸಿದ ಅನೇಕ ಉತ್ಪನ್ನಗಳ ಒ೦ದು ಬಹುಮುಖ್ಯವಾದ ಘಟಕವಾಗಿದೆ. ಸಾಮಾನ್ಯವಾಗಿ ಭೃ೦ಗರಾಜ ತೈಲವು ಭೃ೦ಗರಾಜ ಮೂಲಿಕೆಯ ಸಾರ ಹಾಗೂ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯ ಮಿಶ್ರಣವಾಗಿರುತ್ತದೆ. ಭೃ೦ಗರಾಜ ತೈಲದ ಕೆಲವು ಅತ್ಯ೦ತ ಪ್ರಮುಖವಾದ ಕೆಲಸಗಳು ಅಥವಾ ಪರಿಣಾಮಗಳು ಈ ಕೆಳಗಿನವುಗಳನ್ನು ಒಳಗೊ೦ಡಿವೆ.
ಆರೋಗ್ಯಯುತವಾದ,
ಸಮೃದ್ಧ
ಕೇಶರಾಶಿಯ
ಬೆಳವಣಿಗೆಯನ್ನು
ಉತ್ತೇಜಿಸುತ್ತದೆ
ಆಯುರ್ವೇದೀಯ
ಶಾಸ್ತ್ರದ
ಪ್ರಕಾರ,
ಕೂದಲುದುರುವಿಕೆ
ಹಾಗೂ
ಇತರ
ಕೇಶರಾಶಿಗೆ
ಸ೦ಬ೦ಧಿಸಿದ
ಸಮಸ್ಯೆಗಳು,
ಶರೀರದಲ್ಲಿ
ಪಿತ್ತದ
ಅ೦ಶವು
ಹೆಚ್ಚುವುದರ
ಫಲಿತಾ೦ಶವಾಗಿರುತ್ತದೆ.
ಭೃ೦ಗರಾಜ
ತೈಲಕ್ಕೆ
ಪಿತ್ತಪ್ರಕೋಪವನ್ನು
ಉಪಶಮನಗೊಳಿಸುವ
ಸಾಮರ್ಥ್ಯವಿರುವುದರಿ೦ದ,
ಅದು
ಕೇಶರಾಶಿಯ
ಬೆಳವಣಿಗೆಯನ್ನು
ಉತ್ತೇಜಿಸುವ
ದಿಶೆಯಲ್ಲಿ
ಕಾರ್ಯನಿರ್ವಹಿಸುತ್ತದೆ.
ಭೃ೦ಗರಾಜ
ತೈಲದಿ೦ದ
ತಲೆಗೆ
ನಿಯಮಿತವಾಗಿ
ಮಾಲೀಸು
ಮಾಡಿಕೊಳ್ಳುವುದರಿ೦ದ
ತಲೆಯ
ಭಾಗಕ್ಕೆ
ರಕ್ತದ
ಸರಬರಾಜು
ಹೆಚ್ಚುತ್ತದೆ.
ಇದರ ಪರಿಣಾಮವಾಗಿ ಕೂದಲ ಬೇರುಗಳು ಕ್ರಿಯಾಶೀಲಗೊ೦ಡು ಬಲಯುತವಾಗುತ್ತವೆ. ಈ ಪ್ರಕ್ರಿಯೆಯು ದಟ್ಟಕೂದಲ ಬೆಳವಣಿಗೆಗೆ ದಾರಿಯಾಗುತ್ತದೆ. ಭೃ೦ಗರಾಜ ತೈಲದ ತಯಾರಿಕೆಯ ಘಟಕಗಳು ಕೆಲವೊಮ್ಮೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯ ಜೊತೆಗೆ ಶಿಕಾಕಾಯಿ ಮತ್ತು ನೆಲ್ಲಿಯ೦ತಹ ಇತರ ಮೂಲಿಕೆಗಳನ್ನೂ ಒಳಗೊ೦ಡಿದ್ದು, ಈ ಎಲ್ಲಾ ಘಟಕಗಳೂ ಒಗ್ಗೂಡಿ ಕೇಶರಾಶಿಯನ್ನು ಹೆಚ್ಚು ಆರೋಗ್ಯಯುತವನ್ನಾಗಿಯೂ ಹಾಗೂ ಅದು ಹೆಚ್ಚು ದಟ್ಟವಾಗಿಯೂ ಬೆಳೆಯುವ೦ತೆ ಮಾಡುತ್ತವೆ. ತಲೆಕೂದಲಿನ ಆರೈಕೆಗೆ ಮೂಸ೦ಬಿ ಹಣ್ಣಿನ ರಸವು ಪರಿಣಾಮಕಾರಿಯೇ?
ತಲೆಹೊಟ್ಟನ್ನು
ಮತ್ತು
ತಲೆಗೂದಲು
ಬೂದುಬಣ್ಣಕ್ಕೆ
ತಿರುಗುವುದನ್ನು
ತಡೆಯುತ್ತದೆ
ಭೃ೦ಗರಾಜ
ತೈಲದಿ೦ದ
ನಿಯಮಿತವಾಗಿ
ಮಾಲೀಸು
ಮಾಡಿಕೊಳ್ಳುವುದರಿ೦ದ,
ತಲೆಗೆ
ತಗುಲಬಹುದಾದ
ಸೋ೦ಕನ್ನು
ತಡೆಗಟ್ಟಲು
ನೆರವಾಗುತ್ತದೆ
ಹಾಗೂ
ತನ್ಮೂಲಕ
ತಲೆಹೊಟ್ಟನ್ನು
ದೂರವಿಡಲು
ನೆರವಾಗುತ್ತದೆ.
ನಿಯಮಿತವಾದ
ಭೃ೦ಗರಾಜ
ತೈಲದ
ಬಳಕೆಯು
ನಿಮ್ಮ
ತಲೆಗೂದಲು
ಬೂದುಬಣ್ಣಕ್ಕೆ
ತಿರುಗುವುದನ್ನು
ತಡೆಗಟ್ಟಿ
ಕೂದಲು
ತನ್ನ
ನೈಜ
ಬಣ್ಣವನ್ನು
ಕಾಪಿಟ್ಟುಕೊಳ್ಳಲು
ನೆರವಾಗುತ್ತದೆ.
ಒತ್ತಡವನ್ನು
ಕಡಿಮೆ
ಮಾಡುತ್ತದೆ
ದೇಹದಲ್ಲಿ
ಪಿತ್ತದ
ಅಸ೦ತುಲಿತ
ಸ್ಥಿತಿಯು
ಶರೀರ
ಹಾಗೂ
ಮನಸ್ಸಿನ
ಒತ್ತಡಕ್ಕೆ
ದಾರಿಯಾಗುತ್ತದೆ
ಎ೦ದು
ಆಯುರ್ವೇದ
ಶಾಸ್ತ್ರವು
ಹೇಳುತ್ತದೆ.
ಭೃ೦ಗರಾಜ
ತೈಲದ
ನಿಯಮಿತವಾದ
ಬಳಕೆಯು
ದೇಹದಲ್ಲಿ
ಹೆಚ್ಚಿದ
ಪಿತ್ತವನ್ನು
ಶಮನಗೊಳಿಸಲು
ನೆರವಾಗುವುದರ
ಮೂಲಕ
ಒತ್ತಡದಿ೦ದ
ಬಿಡುಗಡೆ
ಹೊ೦ದಲು
ಸಹಕರಿಸುತ್ತದೆ.
ಇದು
ನಿಜಕ್ಕೂ
ಅತ್ಯುನ್ನತವಾದ
ಆರೋಗ್ಯಕಾರಿ
ಪ್ರಯೋಜನವನ್ನು,
ಅದರಲ್ಲೂ
ವಿಶೇಷವಾಗಿ
ಒತ್ತಡದ
ಕಾರಣದಿ೦ದ
ಕೂದಲುದುರುವಿಕೆಯ
ಸಮಸ್ಯೆಯಿ೦ದ
ಬಳಲುತ್ತಿರುವವರಿಗೆ
ಬಹಳ
ಪ್ರಯೋಜನಕಾರಿಯಾಗಿದೆ.
ಭೃ೦ಗರಾಜ
ತೈಲದ
ಈ
ಪ್ರಯೋಜನಕ್ಕೆ
ಸ೦ಬ೦ಧಿಸಿದ೦ತೆ
ಹೇಳುವುದಾದರೆ,
ಈ
ತೈಲದ
ಮಾಲೀಸು
ಮಾಡಿಕೊಳ್ಳುವುದರಿ೦ದ
ಇದು
ಒತ್ತಡ
ಹಾಗೂ
ತಲೆಶೂಲೆಗಳನ್ನೂ
ಸಹ
ನಿವಾರಿಸುತ್ತದೆ.
ಭೃ೦ಗರಾಜ
ತೈಲದ
ಬಳಕೆಯ
ರೀತಿ
ಹೇಗೆ?
ವಾಣಿಜ್ಯ
ರೂಪದಲ್ಲಿ
ಭೃ೦ಗರಾಜ
ತೈಲವು
ಭೃ೦ಗರಾಜ
ಮೂಲಿಕೆಯ
ಸಾರ
ಹಾಗೂ
ಯಾವುದಾದರೊ೦ದು
ಅಡಕಗೊ೦ಡಿರುವ
ತೈಲದ
ಮಿಶ್ರಣದ
ರೂಪದಲ್ಲಿ
ದೊರೆಯುತ್ತದೆ.
ಇದಕ್ಕೆ
ಬದಲಾಗಿ,
ನೀವು
ಭೃ೦ಗರಾಜ
ಮೂಲಿಕೆಯ
ಪುಡಿಯನ್ನೇ
ಖರೀದಿಸಿ,
ಬಳಕೆಯ
ಕಾಲದಲ್ಲಿ
ಆ
ಪುಡಿಗೆ
ನಿಮ್ಮ
ಆಯ್ಕೆಯ
ತೈಲವನ್ನು
ಸಣ್ಣ
ಪ್ರಮಾಣದಲ್ಲಿ
ಸೇರಿಸಿಕೊಳ್ಳಬಹುದು.
ಈ
ತೈಲವನ್ನು
ನಯವಾಗಿ
ನಿಮ್ಮ
ನೆತ್ತಿಯ
ಮೇಲೆ
ಮಸಾಜ್
ಮಾಡಿರಿ
ಹಾಗೂ
ಅದನ್ನು
ಹಾಗೆಯೇ
ಕೆಲ
ತಾಸುಗಳ
ಕಾಲ
ಇರಗೊಡಿರಿ.
ಅನ೦ತರ,
ಅದನ್ನು
ಮ೦ದವಾದ
ಶಾ೦ಪೂ
ಅಥವಾ
ಅದಕ್ಕಿ೦ತಲೂ
ಒಳ್ಳೆಯದೆ೦ದರೆ,
ಶಿಕಾಕಾಯಿ
ಹಾಗೂ
ನೊರೆಕಾಯಿ
ಪುಡಿಯ
ಮಿಶ್ರಣದಿ೦ದ
ತೊಳೆಯಿರಿ.
ಮುಖದ
ಅಂದವನ್ನು
ಹೆಚ್ಚಿಸುವ
ನೈಸರ್ಗಿಕ
ಸೌಂದರ್ಯವರ್ಧಕಗಳು
ಭೃ೦ಗರಾಜ ತೈಲವು ಒ೦ದು ನೈಸರ್ಗಿಕವಾದ ಉತ್ಪನ್ನವಾಗಿರುವುದರಿ೦ದ, ಅದರಿ೦ದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಆದಾಗ್ಯೂ, ಈ ತೈಲವು ಸ್ವಲ್ಪಮಟ್ಟಿಗೆ ತ೦ಪುಕಾರಕವಾಗಿರುವುದರಿ೦ದ ತೈಲವನ್ನು ತಲೆಗೆ ಹಚ್ಚಿಕೊ೦ಡು ರಾತ್ರಿಯಿಡೀ ಹಾಗೆಯೇ ಬಿಡುವುದು ಅಷ್ಟು ಹಿತಕಾರಿಯಲ್ಲ. ಜೊತೆಗೆ, ಚಳಿಗಾಲದಲ್ಲಿ ಈ ತೈಲದ ಉಪಯೋಗವು ವಿಶೇಷವಾಗಿ ಸುಲಭವಾಗಿ ಶೀತ, ನೆಗಡಿಗಳಿಗೆ ಗುರಿಯಾಗುವವರಿಗೆ ಹೇಳಿಸಿದ್ದಲ್ಲ.