Just In
- 5 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 6 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 6 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 7 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಳೆಗಾಲದಲ್ಲಿ ನಿಮ್ಮ ಪಾದಗಳ ಆರೈಕೆಗೆ ಸೂಕ್ತ ಸಲಹೆಗಳು
ಕಡೆಗೂ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲ ಬಂದಿತು ಎಂದರೆ, ನಮ್ಮಲ್ಲಿ ಸಾಕಷ್ಟು ಜನರು ನೀರು ತುಂಬಿಕೊಂಡ ರಸ್ತೆಗಳಲ್ಲಿ ಅಡ್ಡಾಡುವುದು ಖಚಿತ. ಏಕೆಂದರೆ, ಮನೆಯಿಂದ ಹೊರಗೆ ಹೊರಟು ಮಾಡಬೇಕಾದ ಕೆಲಸಗಳು ಬಹಳಷ್ಟು ಇರುತ್ತವೆ. ಇದು ಇಂದಿನ ಜನ ಜೀವನದಲ್ಲಿ ಅನಿವಾರ್ಯವೂ ಆಗಿದೆ. ಇದರ ಪರಿಣಾಮವಾಗಿ ಪಾದಗಳು ಬಿರುಕು ಬಿಟ್ಟು ಶಿಲೀಂಧ್ರ ಸೋಂಕು (ಅಂದರೆ ಫಂಗಸ್ ಇಂಫೆಕ್ಷನ್)ಉಂಟಾಗುತ್ತದೆ.
ಹಾಗಾಗಿ, ಈ ಮಳೆಗಾಲದಲ್ಲಿ ನಿಮ್ಮ ಪಾದಗಳ ಆರೈಕೆಯನ್ನು ಯಾವ ರೀತಿ ಮಾಡಬಹುದೆಂಬುದನ್ನು ಈ ಕೆಳಗೆ ಓದಿ... ನಿಮ್ಮ ಪಾದಗಳನ್ನು ಸ್ವಚ್ಥವಾಗಿಡಿ: ನಿಮ್ಮ ಪಾದಗಳಿಗೆ ಶಿಲೀಂಧ್ರ ಸೋಂಕು ತಗುಲಬಾರದೆಂದರೆ, ನೀವು ನಿಮ್ಮ ಪಾದಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು.
ಯೋನಿಯ
ದುರ್ವಾಸನೆಯನ್ನು
ನಿವಾರಿಸಲು
ಪ್ರಯತ್ನಿಸಬಹುದಾದ
15
ಮನೆಮದ್ದುಗಳು
ಪಾದಗಳನ್ನು ಸ್ವಚ್ಚವಾಗಿ ತೊಳಿಯಿರಿ
ಪ್ರತಿ ಬಾರಿಯೂ ನೀವು ನಿಮ್ಮ ಮನೆಗೆ ಮರಳಿ ಬಂದಾಗ ತಪ್ಪದೇ ನಿಮ್ಮ ಪಾದಗಳನ್ನು ಸಾಬೂನು ಹಾಗು ನೀರಿನಿಂದ ತೊಳೆದು, ಮುಖ್ಯವಾಗಿ ಬೆಟ್ಟುಗಳ ಸಂಧಿಯಲ್ಲಿ ಚೆನ್ನಾಗಿ ಒರೆಸಿ ಒಣದಾಗಿಟ್ಟುಕೊಳ್ಳಬೇಕು. ನಂತರ ಅದಕ್ಕೆ ಮಾಯಿಸ್ಚರೈಜರ್ ಅನ್ನು ಲೇಪಿಸಬೇಕು.
ಕಾಲ್ಬೆರಳಿನ ಉಗುರುಗಳನ್ನು ಕತ್ತರಿಸಬೇಕು
ಉಗುರಿನ ಕೆಳಭಾಗದಲ್ಲಿ ಸಾಕಷ್ಚು ಕೊಳಕು ಶೇಕರಣೆ ಆಗುವುದರಿಂದ, ಮಳೆಗಾಲದಲ್ಲಿ ಕಾಲ್ಬೆರಳಿನ ಉದ್ದನೆಯ ಉಗುರುಗಳನ್ನು ಕತ್ತರಿಸಿ ಚಿಕ್ಕದಾಗಿಸಿಕೊಳ್ಳಬೇಕು. ಹೀಗೆ ಸಮಯಕ್ಕನುಗುಣವಾಗಿ ಮಾಡುವುದರಿಂದ, ನಿಮ್ಮ ಪಾದಗಳನ್ನು ಸ್ವಚ್ಥವಾಗಿಟ್ಟುಕೊಳ್ಳಲು ಅನುಕೂಲವಾಗುತ್ತದೆ.
ಸರಿಯಾದ ಪಾದರಕ್ಷೆಗಳನ್ನು ಬಳಸಿ
ಈ ಋತುವಿನಲ್ಲಿ, ಕ್ಯಾನ್ವಾಸ್ ಶೂ ಅಥವಾ ಹಿಮ್ಮಡಿ ಎತ್ತರದ ಪಾದರಕ್ಷೆಗಳು ಯೊಗ್ಯವಲ್ಲ. ಕೆಲವೊಮ್ಮೆ, ತೊಯ್ದ ಪಾದರಕ್ಷೆಗಳನ್ನು ಬಳಸುವುದು ಅನಿವಾರ್ಯವಾಗಿಬಿಡುತ್ತದೆ. ಇದರಿಂದ ಸೋಂಕು ತಗಲುವ ಸಂಭವ ಹೆಚ್ಚುತ್ತದೆ. ಆದ್ದರಿಂದ ನೀರು ತಡೆಯುವ ವಸ್ತುವಿನಿಂದ ತಯಾರಿಸಿದ ಫ್ಲಿಪ್-ಫ್ಲಾಪ್ ಅಥವಾ ಓಪನ್-ಟೊ ಮಾದರಿಯ ಪಾದರಕ್ಷೆಗಳನ್ನು ಬಳಸುವುದು ಒಳ್ಳೆಯದು.
ನಿಮ್ಮ ಪಾದರಕ್ಷೆಗಳನ್ನು ಸ್ವಚ್ಥವಾಗಿಟ್ಟುಕೊಳ್ಳಿ
ನಿಮ್ಮ ಪಾದಗಳನ್ನು ಸ್ವಚ್ಥವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ನಿಮ್ಮ ಪಾದರಕ್ಷೆಗಳನ್ನು ಸ್ವಚ್ಥವಾಗಿಟ್ಟುಕೊಳ್ಳುವುದೂ ಅಷ್ಚೇ ಮುಖ್ಯ. ನಿಮ್ಮ ಪಾದರಕ್ಷೆಗಳ ಮೇಲೆ ನೀರನ್ನು ಸುರಿದು ರಾತ್ರಿಯ ವೇಳೆ ಒಣಗಲು ಬಿಡಿ. ಇದರಿಂದ ಅದರಲ್ಲಿದ್ದ ಕೊಳಕೆಲ್ಲಾ ಹೋಗಿ, ನಿಮಗೆ ಸೋಂಕು ತಗಲುವ ಸಂಭವವನ್ನು ಕಡಿಮೆ ಮಾಡುತ್ತದೆ.
ಪೆಡಿಕ್ಯೂರ್
ಮಳೆಗಾಲದಲ್ಲಿ ತಿಂಗಳಿಗೆ ಒಮ್ಮೆಯಾದರೂ, ಪೆಡಿಕ್ಯೂರ್ ಮಾಡಿಸಿಕಳ್ಳುವುದು ಅತ್ಯವಶ್ಯಕ. (ಪೆಡಿಕ್ಯೂರ್ ಎಂದರೆ ಪಾದಗಳನ್ನು ಹಾಗು ಕಾಲ್ಬೆರಳುಗಳನ್ನು ಶುದ್ಧಮಾಡಿ ಸುಂದರವಾಗಿ ಕಾಣುವಂತೆ ಮಾಡುವ ಒಂದು ಚಿಕಿತ್ಸೆ.) ಈ ಮಳೆಗಾಲದಲ್ಲಿ ನಿಮ್ಮ ಪಾದಗಳು ಸಾಕಷ್ಟು ವೇದನೆಗೆ ಒಳಪಟ್ಟರೂ, ಅದಕ್ಕೆ ಆರೈಕೆ ಮಾಡಿದಷ್ಟೂ ನಿಮಗೆ ಒಳ್ಳೆಯದು. ಆರೈಕೆ ಮಾಡಿಕೊಳ್ಳುವಾಗ ಸ್ವಚ್ಥವಾದ ಉಪಕರಣಗಳನ್ನು ಬಳಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸೂಕ್ತ.